4 ಕೋಟಿ ಭಾರತೀಯರ ತಲೆಯ ಮೇಲೆ ಅಪಾಯದ ತೂಗು ಕತ್ತಿ: ವಿಶ್ವಸಂಸ್ಥೆಯ ವರದಿ
![4 ಕೋಟಿ ಭಾರತೀಯರ ತಲೆಯ ಮೇಲೆ ಅಪಾಯದ ತೂಗು ಕತ್ತಿ: ವಿಶ್ವಸಂಸ್ಥೆಯ ವರದಿ 4 ಕೋಟಿ ಭಾರತೀಯರ ತಲೆಯ ಮೇಲೆ ಅಪಾಯದ ತೂಗು ಕತ್ತಿ: ವಿಶ್ವಸಂಸ್ಥೆಯ ವರದಿ](https://www.varthabharati.in/sites/default/files/images/articles/2016/05/20/mumbai-sea-level_1463740620.jpeg)
ಹೊಸದಿಲ್ಲಿ, ಮೇ 20: ಹೆಚ್ಚುತ್ತಿರುವ ನಗರೀಕರಣದಿಂದಾಗಿ ಮುಂಬೈ ಮತ್ತು ಕೋಲ್ಕತಾದಂತಹ ಪಟ್ಟಣಗಳ ಮೇಲೆ ಭವಿಷ್ಯದಲ್ಲಿ ದೊಡ್ಡ ಅಪಾಯ ಕವಿದಿದೆ. ಸಮುದ್ರದಜಲಮಟ್ಟ ಹೆಚ್ಚುವ ಕಾರಣದಿಂದ ಭಾರತದಲ್ಲಿ ಸುಮಾರು 4 ಕೋಟಿ ಜನರು ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.
ಗ್ಲೋಬಲ್ ಎನ್ವಯರ್ಮೆಂಟಲ್ ಔಟ್ಲುಕ್(ಜಿಯೊ-6) ಅಧ್ಯಯನ ಪ್ರಕಾರ ಆಗ್ನೇಯ ಏಷ್ಯದ ಪೆಸಿಫಿಕ್ ಮತ್ತು ದಕ್ಷಿಣ ವಲಯದ ಸಮುದ್ರದ ಬದಿಯಲ್ಲಿ ವಾಸಿಸುವವರಿಗೆ ಸಮುದ್ರದಿಂದ ಅಪಾಯ ಎದುರಾಗಿದೆ.
ವರದಿಯಲ್ಲಿ ತಿಳಿಸಿರುವಂತೆ ಏಷ್ಯದ ಏಳು ನಗರಗಳಲ್ಲಿ ಈ ಅಪಾಯವಿದ್ದು ಸಮುದ್ರದ ನೀರು ಹೆಚ್ಚಳದಿಂದಾಗಿ ನಾಲ್ಕು ಕೋಟಿ ಭಾರತೀಯರು, 2.5 ಕೋಟಿ ಬಾಂಗ್ಲಾದೇಶೀಯರು, 2ಕೋಟಿ ಚೀನಿಯರು ಮತ್ತು ಫಿಲಿಪ್ಪಿನ್ಸ್ನ 1.5 ಕೋಟಿ ಜನರು ಅಪಾಯದ ತೆಕ್ಕೆಯಲ್ಲಿದ್ದಾರೆ ಎಂದು ವರದಿಯಾಗಿದೆ.
Next Story