ನಗರಸಭೆ: ನೀರು ಸರಬರಾಜು ವೇಳಾಪಟ್ಟಿ
ಉಡುಪಿ, ಮೇ 20: ಉಡುಪಿ ನಗರಸಭಾ ವ್ಯಾಪ್ತಿಗೆ ನೀರಿನ ಅಭಾವವಿರುವುದರಿಂದ ಸಾರ್ವಜನಿಕರಿಗೆ ಈ ಮುಂದಿನ ವೇಳಾಪಟ್ಟಿಯಂತೆ ದಿನ ಬಿಟ್ಟು ದಿನ ಕೊಳವೆ ಮೂಲಕ ನೀರು ಸರಬರಾಜು ಮಾಡಲಾಗುವುದು. ಅಜ್ಜರಕಾಡು, ಕಿನ್ನಿಮೂಲ್ಕಿ, ತೆಂಕಪೇಟೆ, ಒಳಕಾಡು, ಬೈಲೂರು, ಶಿರಿಬೀಡು, ಬನ್ನಂಜೆ, ಅಂಬಲಪಾಡಿ, ಚಿಟ್ಪಾಡಿ, ನಿಟ್ಟೂರು, ಕರಂಬಳ್ಳಿ, ಕಕ್ಕುಂಜೆ, ಕಡಿಯಾಳಿ, ಗುಂಡಿಬೈಲು(ದೊಡ್ಡಣಗುಡ್ಡೆ) ಈ ಭಾಗಗಳಲ್ಲಿ ಮುಂಜಾನೆ 4:30ರಿಂದ 9:30ರವರೆಗೆ. ಇಂದಿರಾನಗರ, ಕಸೂರ್ಬಾ ನಗರ, ಬಡಗುಬೆಟ್ಟು, ಕುಂಜಿಬೆಟ್ಟು, ಇಂದ್ರಾಳಿ, ಮಂಚಿ, ಸುಬ್ರಹ್ಮಣ್ಯ ನಗರ, ಗೋಪಾಲಪುರ, ಮೂಡುಬೆಟ್ಟು, ಮೂಡುಪೆರಂಪಳ್ಳಿ, ಸಗ್ರಿ, ಕೊಡಂಕೂರು, ಕೊಡವೂರು ಪ್ರದೇಶಗಳಲ್ಲಿ ಬೆಳಗ್ಗೆ 9:30ರಿಂದ ಮಧ್ಯಾಹ್ನ 1ರವರೆಗೆ. ಪರ್ಕಳ, ಸೆಟ್ಟಿಬೆಟ್ಟು ಬೆಳಗ್ಗೆ 5:30ರಿಂದ 8:30ರವರೆಗೆ. ಕೊಡವೂರು (ಭಾಗಶ:), ಕಲ್ಮಾಡಿ, ಈಶ್ವರನಗರ, ಸರಳೇಬೆಟ್ಟು, ಮಲ್ಪೆ ಸೆಂಟ್ರಲ್, ವಡಬಾಂಡೇಶ್ವರ, ಕೊಳ ಪ್ರದೇಶಗಳಲ್ಲಿ ಅಪರಾಹ್ನ 2ರಿಂದ ಸಂಜೆ 6:30ರವರೆಗೆ ಹಾಗೂ ಮಣಿಪಾಲ, ಅನಂತನಗರ, ದುಗ್ಲಿಪದವು ಪ್ರದೇಶಗಳಲ್ಲಿ ಮುಂಜಾನೆ 5:30ರಿಂದ 7:30ರವರೆಗೆ ನೀರನ್ನು ಸರಬರಾಜು ಮಾಡಲಾಗುವುದು. ನೀರನ್ನು ಮಿತವಾಗಿ ಬಳಸಿ ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭಾ ಪೌರಾಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





