ಇಂದು ‘ದಿ ಲಾಸ್ಟ್ ಫ್ಲೈಟ್’ ಆಲ್ಬಂ ಸಾಂಗ್ ಬಿಡುಗಡೆ
ಮಂಗಳೂರು, ಮೇ 20: ಮಂಗಳೂರು ವಿಮಾನ ದುರಂತಕ್ಕೆ (2010) ಮೇ 22ಕ್ಕೆ 6 ವರ್ಷಗಳು ಸಲ್ಲುತ್ತವೆ. ಕಳೆದ 5 ವರ್ಷಗಳಲ್ಲಿ ಅಂದು ಮಡಿದವರಿಗೆ ವಿವಿಧ ರೀತಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ. ಮಂಗಳೂರಿನ ಮಾಧ್ಯಮ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ದುಡಿಯುತ್ತಿರುವ ಸಮಾನ ಮನಸ್ಕರ ‘ಅರೋರಾ’ ಎನ್ನುವ ತಂಡ ‘ಮೇ 22 ದಿ ಲಾಸ್ಟ್ ಫ್ಲೈಟ್’ ಎನ್ನುವ ಮೋಷನ್ ಪಿಕ್ಟರ್(ಆಲ್ಬಂ ಸಾಂಗ್)ನ್ನು ಅರ್ಪಿಸಲಿದೆ.
ಮಂಗಳೂರಿನ ಭಾರತ್ ಬಿಗ್ಸಿನೆಮಾದಲ್ಲಿ ಮೇ 21ಕ್ಕೆ ಬೆಳಗ್ಗೆ 8:30ಕ್ಕೆ ಜರಗಲಿರುವ ಸಮಾರಂಭದಲ್ಲಿ ಈ ಆಲ್ಬಂ ಬಿಡುಗಡೆಗೊಳ್ಳಲಿದೆ. ‘ಮೇ 22 ದಿ ಲಾಸ್ಟ್ ಫ್ಲೈಟ್’ ದೇಶವನ್ನೇ ಬೆಚ್ಚಿಬೀಳಿಸಿದ ಮಂಗಳೂರು ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಸತ್ಯಕಥೆಯೊಂದರ ರೋಮ್ಯಾಂಟಿಕ್ ರೂಪಕ. ವಿಶ್ಯುವಲ್ ದೃಶ್ಯಗಳ ಹೊರತಾಗಿ, ಸುಮಾರು 5,000 ಸ್ಟಿಲ್ ಇಮೇಜಸ್ಗಳನ್ನು ಹಾಗೂ 25 ಸಾವಿರ ಲೇಯರ್ಸ್ಗಳನ್ನು ಬಳಸಲಾಗಿದೆ. ತುಳು, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಈ ಆಲ್ಬಂ ಕರ್ನಾಟಕದ ಮೊದಲ ಮೋಷನ್ ಪಿಕ್ಟರ್ ಎನಿಸಿಕೊಳ್ಳಲಿದೆ. ವಿ.ಜೆ. ವಿನೀತ್ ಈ ಆಲ್ಬಂನ ನಾಯಕ ನಟನಾಗಿದ್ದು, ನೇಹಾಲ್ ಪರಿಣಿತ ನಾಯಕಿ. ದಿನೇಶ್ ಆಚಾರ್ಯರ ಪರಿಕಲ್ಪನೆ, ನಿರ್ದೇಶನದ ಈ ಆಲ್ಬಂಗೆ ಶಶಿರಾಜ್ರಾವ್ ಕಾವೂರ್, ಕರಣ್ ಮಂಜುನಾಥ್, ಮುಹಮ್ಮದ್ ಇಬಾದ್ರ ಸಾಹಿತ್ಯ ಡಾ. ನಿತಿನ್ ಆಚಾರ್ಯರ ಸಂಗೀತ, ಕೆ.ಹರೀಶ್ ನಾಯಕ್ರ ಛಾಯಾಗ್ರಹಣವಿರುವ ಈ ಅಲ್ಬಂನ ಸಹನಿರ್ದೇಶಕ ನಿತೇಶ್ಕುಲಾಲ್ ಹಾಗೂ ಮೈಮ್ರಾಮ್ದಾಸ್ ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.