ಆರ್ಟಿಇ: ಮೊದಲ ಹಂತದಲ್ಲಿ 791 ಸೀಟುಗಳು ಖಾತರಿ: ಜಿಲ್ಲಾಧಿಕಾರಿ
ಮಂಗಳೂರು, ಮೇ 20: ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 791 ಮಂದಿಗೆ ಸೀಟು ಖಾತರಿಗೊಂಡಿದೆ. ಇನ್ನುಳಿದ ಅರ್ಜಿಗಳ ಪರಿಶೀಲನೆ ನಡೆಯು ತ್ತಿದ್ದು, ಎರಡನೆ ಹಂತದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಹೇಳಿದರು.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರ್ಟಿಇ ದಾಖಲೆಗೆ ಸಂಬಂಧಪಟ್ಟಂತೆ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ದ.ಕ. ಜಿಲ್ಲೆಯಲ್ಲಿ 2,274 ಸೀಟುಗಳಿದ್ದು, 3,398 ಮಂದಿ ಅರ್ಜಿ ಹಾಕಿದ್ದಾರೆ. ಇದರಲ್ಲಿ 1,864 ಅರ್ಜಿ ಅಂತಿಮಗೊಂಡಿದೆ. ಬಾಕಿ ಅರ್ಜಿಗಳ ಪರೀಶೀಲನೆಯನ್ನು ನಡೆಸಿದ ನಂತರ ಸೀಟು ಖಾತರಿಗೊಳಿಸಲಾಗುವುದು. ಆರ್ಟಿಇ ಕಾಯ್ದೆ ಇತ್ತೀಚಿನ ವರ್ಷಗಳಲ್ಲಿ ಜಾರಿಯಾಗಿರುವುದರಿಂದ ಕೆಲವೊಂದು ನ್ಯೂನತೆಗಳಿವೆ. ಅದನ್ನು ಹಂತಹಂತವಾಗಿ ಸರಕಾರ ಸರಿಪಡಿಸಲಿದೆ ಎಂದರು.
ಡಿಡಿಪಿಐ ವಾಲ್ಟರ್ ಡಿಮೆಲ್ಲೊ ಮಾತನಾಡಿ, ಆರ್ಟಿಇ ನಡಿ ಸಲ್ಲಿಕೆಯಾದ ಅರ್ಜಿಗಳಲ್ಲಿ ವಾರ್ಡ್, ಗ್ರಾಮ, ವ್ಯಾಪ್ತಿ, ಜಾತಿ ಸೇರಿದಂತೆ ಪ್ರತಿಯೊಂದು ಮಾಹಿತಿ ಸರಿಯಾಗಿ ನಮೂದಾಗಿರುವುದನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದೆ. ತಪ್ಪುಮಾಹಿತಿಗಳಿರುವ ಅರ್ಜಿಗಳನ್ನು ಪರಿಶೀಲನೆ ವೇಳೆ ತಡೆಹಿಡಿಯಲಾಗಿದೆ ಎಂದರು.ಮರ್ ಯು.ಎಚ್. ಮಾತನಾಡಿ, ಅಲ್ಪಸಂಖ್ಯಾತ ವಿನಾಯಿತಿಯಡಿ ಇರುವ ಕೆಲವು ಉನ್ನತ ಸಂಸ್ಥೆಗಳಿಗೆ ಆರ್ಟಿಇ ಕಾಯ್ದೆ ಇಲ್ಲದೆ ಇರುವುದರಿಂದ ಅಲ್ಲಿ ಆರ್ಟಿಇ ಅನ್ವಯವಾಗುತ್ತಿಲ್ಲ ಎಂದರು.
ಪಿ.ವಿ.ಮೋಹನ್ ಮಾತನಾಡಿ, ತಾಂತ್ರಿಕಕಾರಣಗಳಿಂದಾಗಿ ಬಡಮಕ್ಕಳಿಗೆ ಕೊಡುವಸೀಟನ್ನು ಕಸಿಯಬೇಡಿ. ಅರ್ಹ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿ ಎಂದು ಹೇಳಿದರು. ವಕೀಲ ದಿನೇಶ್ ಉಳೇಪಾಡಿ ಮಾತ ನಾಡಿ, ಕಾಯ್ದೆಗಳಿಗೆ ಅನುಗುಣವಾಗಿ ಸರಕಾರದಿಂದ ಸುತ್ತೋಲೆಗಳು ಬಂದಾಗ ಆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಸಿಗಬೇಕು ಎಂದರು. ಸಭೆಯಲ್ಲಿ ದ.ಕ. ಜಿಪಂ ಸಿಇಒ ಪಿ.ಐ ಶ್ರೀವಿದ್ಯಾ ಉಪಸ್ಥಿತರಿದ್ದರು.