Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಅಂತಿಮ ಓವರ್‌ನಲ್ಲಿ ಧೋನಿ ಆರ್ಭಟ:...

ಅಂತಿಮ ಓವರ್‌ನಲ್ಲಿ ಧೋನಿ ಆರ್ಭಟ: ಗೆಲುವಿನೊಂದಿಗೆ ಟೂರ್ನಿ ಮುಗಿಸಿದ ಪುಣೆ

ವಾರ್ತಾಭಾರತಿವಾರ್ತಾಭಾರತಿ21 May 2016 11:14 PM IST
share
ಅಂತಿಮ ಓವರ್‌ನಲ್ಲಿ ಧೋನಿ ಆರ್ಭಟ: ಗೆಲುವಿನೊಂದಿಗೆ ಟೂರ್ನಿ ಮುಗಿಸಿದ ಪುಣೆ

ವಿಶಾಖಪಟ್ಟಣ, ಮೇ 21: ಒಂಬತ್ತನೆಯ ಆವೃತ್ತಿಯ ಐಪಿಎಲ್‌ನ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ 23 ರನ್ ಬಾರಿಸಿದ ಎಂ.ಎಸ್. ಧೋನಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಪುಣೆ ಸೂಪರ್‌ಜಯಂಟ್ಸ್ ತಂಡಕ್ಕೆ 4 ವಿಕೆಟ್‌ಗಳ ರೋಚಕ ಗೆಲುವು ತಂದುಕೊಟ್ಟರು.

ಇಲ್ಲಿ ಶನಿವಾರ ನಡೆದ 53ನೆ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡ 7 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಗೆಲ್ಲಲು ಕಠಿಣ ಸವಾಲು ಪಡೆದ ಪುಣೆ ತಂಡ ಒಂದು ಹಂತದಲ್ಲಿ 144 ರನ್‌ಗೆ 6 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು.

ಪುಣೆಗೆ ಅಂತಿಮ ಓವರ್‌ನಲ್ಲಿ ಗೆಲುವಿಗೆ 23 ರನ್ ಅವಶ್ಯಕತೆಯಿತ್ತು. ಅಕ್ಷರ್ ಪಟೇಲ್ ಎಸೆದ ಅಂತಿಮ ಓವರ್‌ನಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದ ಧೋನಿ ಕೊನೆಯ ಎಸೆತದಲ್ಲಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಔಟಾಗದೆ 64 ರನ್(32 ಎಸೆತ, 4 ಬೌಂಡರಿ, 5 ಸಿಕ್ಸರ್) ಬಾರಿಸಿದ ಧೋನಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. 86 ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾದ ಧೋನಿ ಹಾಗೂ ತಿಸ್ಸಾರ ಪೆರೇರ(23 ರನ್) 6ನೆ ವಿಕೆಟ್‌ಗೆ 58 ರನ್ ಸೇರಿಸಿ ತಂಡದ ಗೆಲುವಿನ ವಿಶ್ವಾಸ ಹೆಚ್ಚಿಸಿದರು. ಪೆರೇರ ಮೋಹಿತ್ ಶರ್ಮಗೆ ವಿಕೆಟ್ ಒಪ್ಪಿಸಿದಾಗ ಪುಣೆಗೆ 11 ಎಸೆತಗಳಲ್ಲಿ 29 ರನ್ ಅಗತ್ಯವಿತ್ತು. ಆಗ 7ನೆ ವಿಕೆಟ್‌ಗೆ ಅಶ್ವಿನ್‌ರೊಂದಿಗೆ 29 ರನ್ ಸೇರಿಸಿದ ಧೋನಿ ತಂಡ ಗೆಲುವಿನೊಂದಿಗೆ ಟೂರ್ನಿ ಕೊನೆಗೊಳಿಸಲು ನೆರವಾದರು.

ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನ ಪಡೆದು ಈಗಾಗಲೇ ಪ್ಲೇ-ಆಫ್ ಸ್ಪರ್ಧೆಯಿಂದ ಹೊರ ನಡೆದಿರುವ ಪುಣೆ-ಪಂಜಾಬ್‌ಗೆ ಇದು ಕೇವಲ ಔಪಚಾರಿಕ ಪಂದ್ಯವಾಗಿತ್ತು.

 ಪಂಜಾಬ್ 172/7: ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡ ನಾಯಕ ಮುರಳಿ ವಿಜಯ್(59ರನ್, 41 ಎಸೆತ, 4 ಬೌಂಡರಿ, 3 ಸಿಕ್ಸರ್) ಹಾಗೂ ಗುರುಕೀರತ್ ಸಿಂಗ್(51 ರನ್, 30 ಎಸೆತ, 3 ಬೌಂಡರಿ,3 ಸಿಕ್ಸರ್) ಬಾರಿಸಿದ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 172 ರನ್ ಕಲೆ ಹಾಕಿತು.

 ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದ ಪಂಜಾಬ್‌ನ ಪರ ಮೊದಲ ವಿಕೆಟ್‌ಗೆ 60 ರನ್ ಸೇರಿಸಿದ ವಿಜಯ್ ಹಾಗೂ ಹಾಶಿಮ್ ಅಮ್ಲ(30ರನ್)ಉತ್ತಮ ಆರಂಭವನ್ನು ನೀಡಿದರು. ಆಫ್ರಿಕದ ಹಿರಿಯ ಆಟಗಾರ ಅಮ್ಲ ಆಫ್ ಸ್ಪಿನ್ನರ್ ಆರ್.ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ವೃದ್ದಿಮಾನ್ ಸಹಾ(3) ಝಾಂಪ ಬೌಲಿಂಗ್‌ನಲ್ಲಿ ಅಲ್ಪ ಮೊತ್ತಕ್ಕೆ ಔಟಾದರು.

ಆಗ 3ನೆ ವಿಕೆಟ್‌ಗೆ 58 ರನ್ ಜೊತೆಯಾಟ ನಡೆಸಿದ ಗುರುಕೀರತ್ ಸಿಂಗ್ ಹಾಗೂ ವಿಜಯ್ 10ನೆ ಓವರ್‌ನಲ್ಲಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಅಶ್ವಿನ್ ಎಸೆತವನ್ನು ಕೆಣಕಲು ಹೋದವಿಜಯ್ ಕ್ಲೀನ್‌ಬೌಲ್ಡಾದರು. ವಿಜಯ್ ನಿರ್ಗಮನದ ಬಳಿಕ ಇರ್ಫಾನ್ ಪಠಾಣ್ ಬೌಲಿಂಗ್‌ನಲ್ಲಿ ಸತತ 2 ಸಿಕ್ಸರ್ ಸಿಡಿಸಿದ ಗುರುಕೀರತ್ 30 ಎಸೆತಗಳಲ್ಲಿ 51 ರನ್ ಗಳಿಸಿದರು. ಗುರುಕೀರತ್ ಆರ್ಭಟಕ್ಕೆ ಅಶ್ವಿನ್ ತೆರೆ ಎಳೆದರು. ವಿಜಯ್ ಹಾಗೂ ಗುರುಕೀರತ್ ಔಟಾದ ಬಳಿಕ ಪಂಜಾಬ್ ಬ್ಯಾಟಿಂಗ್ ಕಳೆಗುಂದಿತು. ಸ್ಪಿನ್ನರ್ ಆರ್.ಅಶ್ವಿನ್(4-34) ಪುಣೆಯ ಪರ ಯಶಸ್ವಿ ಬೌಲರ್ ಎನಿಸಿಕೊಂಡರು.

ಸ್ಕೋರ್ ವಿವರ

ಕಿಂಗ್ಸ್ ಇಲೆವೆನ್ ಪಂಜಾಬ್

20 ಓವರ್‌ಗಳಲ್ಲಿ 172/7

ಅಮ್ಲ ಸಿ ಬೈಲಿ ಬಿ ಅಶ್ವಿನ್ 30

ವಿಜಯ್ ಬಿ ಅಶ್ವಿನ್ 59

ಸಹಾ ಸಿ ಅಶ್ವಿನ್ ಬಿ ಝಾಂಪ 03

ಗುರುಕೀರತ್ ಸಿ ಚಾಹರ್ ಬಿ ಅಶ್ವಿನ್ 51

ಡೇವಿಡ್ ಮಿಲ್ಲರ್ ಎಲ್‌ಬಿಡಬ್ಲು ಅಶ್ವಿನ್ 07

ಬೆಹರ್ದಿನ್ ಸಿ ರಹಾನೆ ಬಿ ದಿಂಡಾ 05

ಅಕ್ಷರ್ ಪಟೇಲ್ ಸಿ ತಿವಾರಿ ಬಿ ಪೆರೇರ 01

ರಿಷಿ ಧವನ್ ಔಟಾಗದೆ 11

ಅಬಾಟ್ ಔಟಾಗದೆ 01

ಇತರ 04

ವಿಕೆಟ್ ಪತನ: 1-60, 2-65, 3-123, 4-150, 5-154, 6-160, 7-160.

ಬೌಲಿಂಗ್ ವಿವರ

ಇರ್ಫಾನ್ ಪಠಾಣ್ 4-0-37-0

ಅಶೋಕ್ ದಿಂಡಾ 3-0-16-1

ಚಾಹರ್ 3-0-28-0

ಪೆರೇರ 2-0-24-1

ಆರ್.ಅಶ್ವಿನ್ 4-0-34-4

ಝಾಂಪ 4-0-32-1

ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್

20 ಓವರ್‌ಗಳಲ್ಲಿ 173/6

ಅಜಿಂಕ್ಯ ರಹಾನೆ ಸಿ ಸಹಾ ಬಿ ಸಂದೀಪ್ ಶರ್ಮ 19

ಖ್ವಾಜಾ ಸಿ ಮಿಲ್ಲರ್ ಬಿ ಸಿಂಗ್ 30

ಜಾರ್ಜ್ ಬೈಲಿ ಸ್ಟಂ.ಸಹಾ ಬಿ ಪಟೇಲ್ 09

ಎಸ್.ತಿವಾರಿ ಸಿ ಬೆಹರ್ದಿನ್ ಬಿ ಸಿಂಗ್ 17

ಎಂಎಸ್ ಧೋನಿ ಔಟಾಗದೆ 64

ಇರ್ಫಾನ್ ಪಠಾಣ್ ಸಿ ಸಹಾ ಬಿ ಧವನ್ 02

ಪೆರೇರ ಸಿ ಸಹಾ ಬಿ ಶರ್ಮ 23

ಆರ್.ಅಶ್ವಿನ್ ಔಟಾಗದೆ 01

ಇತರ 08

ವಿಕೆಟ್ ಪತನ: 1-35, 2-47, 3-78, 4-80, 5-86, 6-144.

ಬೌಲಿಂಗ್ ವಿವರ:

ಸಂದೀಪ್ ಶರ್ಮ 4-0-29-1

ಮೋಹಿತ್ ಶರ್ಮ 4-0-39-1

ಕೈಲ್ ಅಬಾಟ್ 3-0-25-0

ಅಕ್ಷರ್ ಪಟೇಲ್ 4-0-43-1

ಗುರುಕೀರತ್ ಸಿಂಗ್ 2-0-15-2

ರಿಷಿ ಧವನ್ 3-0-21-1

share
ವಾರ್ತಾಭಾರತಿ
ವಾರ್ತಾಭಾರತಿ
Next Story
X