Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. 28ರಿಂದ ಧಾರವಾಡದಲ್ಲಿ ‘ಮೇ ಸಾಹಿತ್ಯ ಮೇಳ’

28ರಿಂದ ಧಾರವಾಡದಲ್ಲಿ ‘ಮೇ ಸಾಹಿತ್ಯ ಮೇಳ’

ವಾರ್ತಾಭಾರತಿವಾರ್ತಾಭಾರತಿ22 May 2016 11:56 PM IST
share

ಬೆಂಗಳೂರು, ಮೇ 22: ‘ಸಮಕಾಲೀನ ಸವಾಲುಗಳು: ಹೊಸ ತಲೆಮಾರಿನ ಪ್ರತಿಸ್ಪಂದನೆ’ ಎಂಬ ಘೋಷಣೆಯೊಂದಿಗೆ ಗದಗದ ಲಡಾಯಿ ಪ್ರಕಾಶನ ಮೇ 28ರಿಂದ ಎರಡು ದಿನಗಳ ಕಾಲ ‘ಮೇ ಸಾಹಿತ್ಯ ಮೇಳ’ವನ್ನು ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಏರ್ಪಡಿಸಲಾಗಿದೆ.
ಪಟಿಯಾಲದ ಚಿಂತಕ ಪ್ರೊ.ಚಮನ್ ಲಾಲ್ ಸಾಹಿತ್ಯ ಮೇಳ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಹೊಸದಿಲ್ಲಿ ಜೆಎನ್‌ಯು ಪ್ರಾಧ್ಯಾಪಕ ಪ್ರೊ.ಪುರುಷೋತ್ತಮ ಬಿಳಿಮಲೆ, ಭಾಷಾತಜ್ಞ ಪ್ರೊ.ಗಣೇಶ್ ಎನ್. ದೇವಿ, ಡಾ.ಶಿವರುದ್ರ ಕಲ್ಲೊಳಿಕರ, ವೆಂಕಟೇಶಯ್ಯ, ಶಶಿಧರ ತೋಡ್ಕರ, ಜೆ. ಭಾರದ್ವಾಜ್, ವಿಠ್ಠಪ್ಪ ಗೋರಂಟ್ಲಿ, ಆರ್. ಎಚ್.ಆಯಿ, ಸದಾನಂದ ಮೋದಿ, ರಾಚಪ್ಪ ಹಡಪದ, ಎ ಬಿ.ಹಿರೇಮಠ, ಸಂಗಮೇಶ ಮೆಣಸಿನಕಾಯಿ ಹಾಗೂ ಡಾ.ಎಚ್.ಎಸ್.ಅನುಪಮಾ ಪಾಲ್ಗೊಳ್ಳಲಿದ್ದಾರೆ.
ಗೀತೆ; ಒಳಗಿನ ಸತ್ಯ ಎನು?, ದಲಿತ ಸಂವೇದನೆ, ಬ್ರಾಹ್ಮಣವಾದಿ ಭಾರತ ವಿ/ಎಸ್ ದಲಿತ ಭಾರತ, ಮಾಂಸದಂಗಡಿಯ ನವಿಲು, ಮನುಸ್ಮತಿ: ಅಪರಾಧ-ಶಿಕ್ಷೆ, ಅಸ್ಪಶ್ಯತೆ: ವೈಕಂ ಹೋರಾಟ ಚರಿತ್ರೆ ಹಾಗೂ ಬಿಟಿ ಹತ್ತಿ: ರೈತರ ಕೊರಳ ಕುಣಿಕೆ ಬಿಗಿಗೊಳಿಸಿದ ಬೆಳೆ ಸೇರಿದಂತೆ 16 ಕೃತಿಗಳನ್ನು ಪ್ರೊ.ಶ್ರೀಕಂಠ ಕೂಡಿಗೆ ಲೋಕಾರ್ಪಣೆ ಮಾಡಲಿದ್ದಾರೆ.
ಹೊಸ ತಲೆಮಾರಿನ ಸಾಹಿತ್ಯ ಸ್ಪಂದನ: ಗೋಷ್ಠಿಯಲ್ಲಿ ಮುಂಬೈನ ಯುವ ಲೇಖಕ ರೆಹಮಾನ್ ಅಬ್ಬಾಸ್ ಆಶಯ ಮಾತುಗಳನ್ನು ಆಡಲಿದ್ದು, ಪಿ.ಭಾರತಿದೇವಿ- ಕಾವ್ಯ, ಕತೆ/ಕಾದಂಬರಿ: ಎಸ್.ಗಂಗಾಧರಯ್ಯ, ವೈಚಾರಿಕ ಬರಹ: ಬಿ.ಪೀರ್ ಭಾಷಾ, ಮಾಧ್ಯಮ: ಡಿ.ಉಮಾಪತಿ, ಸಾಮಾಜಿಕ ಅಂತರ್ಜಾಲ: ಚೇತನಾ ತೀರ್ಥಹಳ್ಳಿ ಮಾತನಾಡಲಿದ್ದು, ಡಾ.ಕಾಳೇಗೌಡ ನಾಗವಾರ, ಅರುಣ್ ಜೋಳದ ಕೂಡ್ಲಿಗಿ, ಪ್ರಮೋದ ತುರ್ವಿಹಾಳ ಪಾಲ್ಗೊಳ್ಳಲಿದ್ದಾರೆ.
‘ಸಮಕಾಲೀನ ಸವಾಲುಗಳು: ನನ್ನ ಅಭಿವ್ಯಕ್ತಿ’ ಗೋಷ್ಠಿಯಲ್ಲಿ ಬಿ.ತಾರಕೇಶ್ವರ ಆಶಯ ಮಾತುಗಳನ್ನು ಆಡಲಿದ್ದು, ಶಾರ್ಟ್ ಫಿಲ್ಮ್: ಬಿ.ಎಸ್.ದಿವಾಕರ್, ನಾಟಕ: ಎಂ.ವಿ.ಪ್ರತಿಭಾ, ಸಿನೆಮಾ: ಟಿ.ಕೆ.ದಯಾನಂದ ಮಾತನಾಡಲಿದ್ದು, ಸದಾಶಿವ ಮರ್ಜಿ, ಜ್ಯೋತಿ ಹಿಟ್ನಾಳ, ಪಂಪಾರೆಡ್ಡಿ ಆರಳಹಳ್ಳಿ ಪಾಲ್ಗೊಳ್ಳಲಿದ್ದಾರೆ.
 ಮೇ 29ರಂದು ‘ಸಮಕಾಲೀನ ಸವಾಲುಗಳು ಮತ್ತು ವಿದ್ಯಾರ್ಥಿ ಚಳವಳಿ’ ಕುರಿತು ಹೊಸದಿಲ್ಲಿ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಶಹ್ಲಾ ರಶೀದ್ ಆಶಯ ಮಾತುಗಳನ್ನು ಆಡಲಿದ್ದು, ಹೈದರಾಬಾದ್ ವಿವಿ ಶ್ರೀಕಾಂತ, ತಮಿಳುನಾಡಿನ ದಿನೇಶ್ ಸೀರಂಗರಾಜ ಪಾಲ್ಗೊಳ್ಳಲಿದ್ದಾರೆ. ವಿದ್ಯಾರ್ಥಿ ಸಂಘಟನೆಗಳ ಮುಖಂಡರಾದ ಗುರುರಾಜ ದೇಸಾಯಿ, ಹರಿರಾಮ, ರಾಜಶೇಖರ, ಸಂತೋಷ್, ಮಹೇಶ್ ಹಾಗೂ ಮಾರುತಿ ಭಾಗವಹಿಸಲಿದ್ದಾರೆ.
ಅದೇ ದಿನ ಸಂಜೆ 6ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ತೆಲುಗು ಲೇಖಕ ರಾಣಿ ಶಿವಶಂಕರ ಶರ್ಮಾ, ಮಾಲತಿ ಪಟ್ಟಣಶೆಟ್ಟಿ. ಕೆ.ನೀಲಾ, ಚಾಮರಾಜ ಬಾಂಗಿ, ಬಿ.ಎಸ್.ಸೊಪ್ಪಿನ, ಶಂಕರಗೌಡ ಸಾತ್ಮರ, ದೇವಾನಂದ ಜಗಾಪುರ ಹಾಗೂ ಡಿ.ಎಚ್.ಪೂಜಾರ ಪಾಲ್ಗೊಳ್ಳಲಿದ್ದಾರೆಂದು ಲಡಾಯಿ ಪ್ರಕಾಶನದ ಪ್ರಕಟನೆ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X