ಕಾಸರಗೋಡು ಜಿಪಂನ ಒಂದು ವಾರ್ಡ್ಗೆ ಶೀಘ್ರ ಉಪಚುನಾವಣೆ
ಕಾಸರಗೋಡು, ಮೇ 22: ವಿಧಾನಸಭಾ ಚುನಾವಣೆ ಮುಗಿದೊಡನೆ ಕಾಸರಗೋಡು ಜಿಲ್ಲೆ ಇನ್ನೊಂದು ಚುನಾವಣೆಗೆ ಸಜ್ಜಾಗುತ್ತಿದೆ. ಜಿಪಂನ ಒಂದು ವಾರ್ಡ್ಗೆ ಶೀಘ್ರ ಉಪ ಚುನಾವಣೆ ನಡೆಯಲಿದ್ದು, ಇದು ಐಕ್ಯರಂಗ ಮತ್ತು ಎಡರಂಗಕ್ಕೆ ಅಗ್ನಿಪರೀಕ್ಷೆಯಾಗಲಿದೆ. 17 ಸ್ಥಾನಗಳಲ್ಲಿ 8 ಕ್ಷೇತ್ರಗಳನ್ನು ಗೆದ್ದ ಐಕ್ಯರಂಗ ಕಾಸರಗೋಡು ಜಿಪಂ ಅಧಿಕಾರದಲ್ಲಿದೆ. ಎಡರಂಗ 7 ಕ್ಷೇತ್ರವನ್ನು ಗೆದ್ದಿತ್ತು. ಎರಡು ಕ್ಷೇತ್ರಗಳು ಬಿಜೆಪಿ ವಶದಲ್ಲಿದ್ದು, ಒಂದು ಸೀಟಿನ ಬಲದಲ್ಲಿ ಐಕ್ಯರಂಗ ಅಧಿಕಾರ ಗಳಿಸಿತ್ತು. ದರೆ ಐಕ್ಯರಂಗದ ಘಟಕ ಪಕ್ಷವಾದ ಕಾಂಗ್ರೆಸ್ನ ಪಾದೂರು ಕುಞಾಮು ಇತ್ತೀಚೆಗೆ ನಿಧನರಾಗಿದ್ದು, ಈ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯುತ್ತಿದೆ. ್ಯರಂಗ ಮತ್ತು ಎಡರಂಗದ ಬಳಿ ತಲಾ 7 ಸದಸ್ಯ ಬಲ ಇದೆ. ಇದ ರಿಂದಾಗಿ ತೆರವಾಗಿರುವ ಉದುಮ ಕ್ಷೇತ್ರದ ಉಪಚುನಾವಣೆ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಕ್ಷೇತ್ರದಲ್ಲಿ ಗೆಲ್ಲುವವರು ಮುಂದೆ ಜಿಪಂ ಆಡಳಿತಕ್ಕೇರುವರು.ರ ನ.2ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಪಾದೂರು ಕುಞಾಮು ಐಎನ್ಎಲ್ನ ಎ.ಎ.ಲತೀಫ್ರನ್ನು 6,437 ಮತಗಳ ಅಂತರದಿಂದ ಸೋಲಿಸಿದ್ದರು. ದೀಗ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಲೇಬೇಕಾದ ಅನಿವಾ ರ್ಯತೆ ಕಾಂಗ್ರೆಸ್ ಹಾಗೂ ಎಡರಂಗಕ್ಕೆ ಎದುರಾಗಿದೆ.