Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. *ನಾನು ಎಷ್ಟು ಮೃದುವಾಗಿರುತ್ತೇನೋ ಅಷ್ಟೇ...

*ನಾನು ಎಷ್ಟು ಮೃದುವಾಗಿರುತ್ತೇನೋ ಅಷ್ಟೇ ಕಠಿಣವಾಗಿರುತ್ತೇನೆ.

ವಾರ್ತಾಭಾರತಿವಾರ್ತಾಭಾರತಿ23 May 2016 12:11 AM IST
share

♦ ನಾನು ಎಷ್ಟು ಮೃದುವಾಗಿರುತ್ತೇನೋ ಅಷ್ಟೇ ಕಠಿಣವಾಗಿರುತ್ತೇನೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

  ಭ್ರಷ್ಟರ ಜೊತೆಗೆ ಮೃದುವಾಗಿಯೂ, ಸಭ್ಯರ ಜೊತೆ ಕಠಿಣವಾಗಿಯೂ ಇಲ್ಲದೇ ಇದ್ದರೆ ಆಯಿತು.

---------------------
  
           ♦   ಹಿಂದೂ ಧರ್ಮದಲ್ಲಿ ಯಾವುದೇ ಕೆಲಸ ಮಾಡಿದರೂ ಜಾತಿಯ ಲೇಪ ಹಚ್ಚಲಾಗುತ್ತದೆ.

-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

  ರಾಜಕಾರಣಿಗಳ ಸಮಸ್ಯೆಗಳಿಗೆ ಈ ಲೇಪವೇ ಪರಿಹಾರ.

---------------------

  ♦  ಈ ವರ್ಷಾಂತ್ಯ ರಾಮಮಂದಿರ ನಿರ್ಮಾಣ ಆರಂಭಗವಾಲಿದೆ.

-ಸುಬ್ರಮಣಿಯನ್ ಸ್ವಾಮಿ, ಸಂಸದ

 ಸೇತುವೆ, ರಸ್ತೆ, ಮನೆ, ಕುಡಿಯುವ ನೀರು, ಶಾಲೆ ಇವೆಲ್ಲ ಯಾವಾಗ ನಿರ್ಮಾಣವಾಗಲಿವೆ ಎನ್ನುವುದನ್ನು ಹೇಳಬಹುದೇ?

---------------------

♦   ಮಹಮ್ಮದೀಯ ಉದ್ದೇಶಕ್ಕೆ ಬಳಕೆಯಾದ ಹಿಂದೂ ಸ್ಮಾರಕಗಳಿಗೆ ಅತ್ಯುತ್ತಮ ನಿದರ್ಶನ ಕುತುಬ್ ಮಿನಾರ್.

-ಡಾ. ಎಂ. ಚಿದಾನಂದ ಮೂರ್ತಿ, ಸಂಶೋಧಕ

  ಬಹುಶಃ ಕೇಸರಿ ಉದ್ದೇಶಕ್ಕೆ ಬಳಕೆಯಾದ ಕುಸಿಯುವ ಹಂತದಲ್ಲಿರುವ ಕರ್ನಾಟಕದ ಒಂದೇ ಒಂದು ಸ್ಮಾರಕ ಚಿದಾನಂದ ಮೂರ್ತಿ.

---------------------

♦    ಯೋಗಕ್ಕೆ ಓಂ ಕಡ್ಡಾಯವಲ್ಲ.

-ಅನಿಲ್ ಕುಮಾರ್, ಆಯುಷ್ ಸಚಿವಾಲಯದ ಜಂಟಿ ಕಾರ್ಯದರ್ಶಿ

ಯೋಗವೇ ಕಡ್ಡಾಯವಲ್ಲ ಎಂದು ಜನರು ಹೇಳುತ್ತಿದ್ದಾರೆ.

---------------------

♦   ಮಂಗಳೂರು ನನ್ನ ಎರಡನೆ ಮನೆ ಇದ್ದ ಹಾಗೆ.

-ಸುರೇಶ್ ಪ್ರಭು, ಕೇಂದ್ರ ರೈಲ್ವೆ ಸಚಿವ

  ಅಂದರೆ ಮಂಗಳೂರನ್ನು ದೋಚುವುದಕ್ಕೆ ಇದು ಪರವಾನಿಗೆಯೇ?

---------------------

♦   ನನಗೆ ಡಿಸಿಎಂ ಸ್ಥಾನ ನೀಡಿದರೆ ಸ್ವಾಗತಿಸುತ್ತೇನೆ.

-ಮೋಟಮ್ಮ, ಮಾಜಿ ಸಚಿವೆ

  ಜನರೂ ಸ್ವಾಗತಿಸಬೇಕಲ್ಲ?

---------------------

♦ ಸಿದ್ದರಾಮಯ್ಯ ಸರಕಾರ ತಳಮಟ್ಟದಿಂದ ಕೆಲಸ ಮಾಡುತ್ತಿಲ್ಲ.

-ಶೋಭಾ ಕರಂದ್ಲಾಜೆ, ಸಂಸದೆ

ಆ ಕೆಲಸವನ್ನು ಯಡಿಯೂರಪ್ಪರಿಗೇ ಮೀಸಲು ಎನ್ನುತ್ತಿದ್ದಾರೆ ಸಿದ್ದರಾಮಯ್ಯ.

--------------------

♦   ನಾನು ಪಕ್ಷದ (ಜೆಡಿಎಸ್) ಶಿಸ್ತಿನ ಸಿಪಾಯಿ.

-ಎನ್. ಚೆಲುವರಾಯ ಸ್ವಾಮಿ, ಶಾಸಕ

ಶಿಸ್ತು ಜೆಡಿಎಸ್‌ಗೆ ಬೇಕಾಗಿಲ್ಲದ ಸಂಗತಿಯಂತೆ.

---------------------

♦   ನಾನು 24x7 ರಾಜಕಾರಣಿ, ನಿವೃತ್ತಿಯ ಪ್ರಶ್ನೆಯೇ ಇಲ್ಲ.

-ದೇವೇಗೌಡ, ಮಾಜಿ ಪ್ರಧಾನಿ

  ಸದ್ಯಕ್ಕೆ ಗ್ರಾಮಪಂಚಾಯತ್ ರಾಜಕಾರಣ ಮಾಡಿಕೊಂಡು ಆರಾಮವಾಗಿರಬಹುದು.

--------------------

  ಪ್ರಿಯಾಂಕಾ ಗಾಂಧಿಗೆ ಜನನಾಯಕಿಯಾಗುವ ಎಲ್ಲ ಸಾಮರ್ಥ್ಯವಿದೆ.

- ದಿಗ್ವಿಜಯಸಿಂಗ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

  ಹೀಗೆ ಹೇಳಿಯೇ ರಾಹುಲ್ ಗಾಂಧಿಯನ್ನು ಬಲಿ ಹಾಕಿದಿರಿ.

---------------------

 ♦  ಹೈಕಮಾಂಡ್ ಸೂಚನೆಯಂತೆ ಇಲ್ಲಿ ಎಲ್ಲವೂ ನಡೆಯುತ್ತದೆ.

-ಡಾ.ಜಿ ಪರಮೇಶ್ವರ್, ಗೃಹ ಸಚಿವ

ಅದಕ್ಕಾಗಿ ಆಗಾಗ ಹೈಕಮಾಂಡ್ ಬಳಿ ಓಡುವುದೇ?

---------------------

♦   ಕೇವಲ ಕುರ್ಚಿ ಉಳಿಸಿಕೊಳ್ಳಲೆಂದೇ ಸಿದ್ದರಾಮಯ್ಯ ಶಾಸಕರ ಮೂಗಿಗೆ ಸಂಪುಟ ವಿಸ್ತರಣೆಯ ತುಪ್ಪ ಸವರುತ್ತಿದ್ದಾರೆ.

  -ಈಶ್ವರಪ್ಪ, ವಿ.ಪ. ಪ್ರತಿಪಕ್ಷ ನಾಯಕ

ನಿಮ್ಮ ಮೂಗಿಗೆ ಸವರುತ್ತಿಲ್ಲ ಎಂಬ ದುಃಖವೇ?

---------------------

♦   ಭಾರತ ಕಾಂಗ್ರೆಸ್ ಕುಟುಂಬದ ಸೊತ್ತಲ್ಲ.

-ರಿಷಿ ಕಪೂರ್, ಬಾಲಿವುಡ್ ನಟ

ಕಪೂರ್ ಕುಟುಂಬದ ಸೊತ್ತು ಎಂದು ಭಾವಿಸಿದಂತಿದೆ.

--------------------

♦   ಎತ್ತಿನ ಹೊಳೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ.

  -ಯು.ಟಿ.ಖಾದರ್, ಆರೋಗ್ಯ ಸಚಿವ

ಮುಂದಿನ ಚುನಾವಣೆಯಲ್ಲಿ ಈ ಎತ್ತು ನಿಮಗೆ ತಿವಿಯದೇ ಇದ್ದರೆ ಸಾಕು.

  ---------------------

♦ ತಮಿಳುನಾಡಿನಲ್ಲಿ ಜಯಲಲಿತಾ ಗೆದ್ದದ್ದು ಮೋಸದಿಂದ

-ಕರುಣಾನಿಧಿ, ಡಿಎಂಕೆ ನಾಯಕ

  ಮೋಸವನ್ನು ಮೋಸ ಗೆದ್ದಿತು. ಅಷ್ಟೇ.

---------------------

♦ ಚರಾಜ್ಯಗಳ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಂದಿದೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

  ಅಂದರೆ ಈ ಫಲಿತಾಂಶ ನಿಮ್ಮ ನಿರೀಕ್ಷೆಯಾಗಿತ್ತೇ?

---------------------

♦   ಕಾಂಗ್ರೆಸ್ ಮುಕ್ತ ಭಾರತಕ್ಕೆ ಇನ್ನರಡೇ ಮೆಟ್ಟಿಲು.

-ಅಮಿತ್ ಶಾ, ಬಿಜೆಪಿ ಅಧ್ಯಕ್ಷ

  ಮೆಟ್ಟಿಲಿಂದ ಜಾರಿ ಬಿದ್ದರೆ, ಬಿಜೆಪಿಯ ಬದುಕು ಕತ್ತಲು.

---------------------

♦ ನಾನು ಅಮೆರಿಕದ ಅಧ್ಯಕ್ಷನಾದರೆ ಚೀನಾ ನನ್ನ ಆಣತಿಯಂತೆ ನಡೆಯಲಿದೆ

-ಡೊನಾಲ್ಡ್ ಟ್ರಂಪ್, ಅಮೆರಿಕದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೆಯ ಅಭ್ಯರ್ಥಿ

ಅಂದರೆ ನೀವು ಚೀನಾದ ಏಜೆಂಟ್ ಆಗಿದ್ದೀರಿ ಎಂದಾಯಿತು.

---------------------

♦   ಮಾತನಾಡುವ ಮುನ್ನ ಎರಡೆರಡು ಬಾರಿ ಯೋಚಿಸುವಂತಾಗಿದೆ.

-ಎಚ್. ಆಂಜನೇಯ, ಸಚಿವ

ಮಾತು ಮನೆ ಕೆಡಿಸಿತು ಎನ್ನುವ ಗಾದೆ ನಿಮಗಾಗಿಯೇ ಬರೆದಿರುವುದು.

---------------------

 ♦  ಕಾಂಗ್ರೆಸ್ ಮುಕ್ತ ಕರ್ನಾಟಕ ದೂರವಿಲ್ಲ.

-ಯಡ್ಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

  ಯಡಿಯೂರಪ್ಪ ಮುಕ್ತ ಬಿಜೆಪಿಗೂ ಸಂಚು ನಡೆಯುತ್ತಿದೆ. ಎಚ್ಚರ.

---------------------

♦   ಸಿದ್ದರಾಮಯ್ಯ ಕರ್ನಾಟಕದ ಕೊನೆಯ ಕಾಂಗ್ರೆಸ್ ಮುಖ್ಯಮಂತ್ರಿ.

  -ಸಿ.ಎಂ. ಉದಾಸಿ, ಮಾಜಿ ಸಚಿವ

ಬಿಜೆಪಿಯಿಂದ ಯಾರನ್ನಾದರೂ ತಂದು ಮುಖ್ಯಮಂತ್ರಿ ಮಾಡಬೇಕು ಎಂಬ ಆಸೆಯೇ?

---------------------

  ♦ ರಾಜ್ಯದ ವಕ್ಫ್ ಆಸ್ತಿಯ ಸರ್ವೇ ಆರು ತಿಂಗಳ ಒಳಗೆ ಮುಕ್ತಾಯಗೊಳ್ಳಲಿದೆ

-ಖಮರುಲ್ ಇಸ್ಲಾಂ, ವಕ್ಫ್ ಸಚಿವ

ಸರ್ವೇ ಮುಗಿದರೆ ಸಾಕೇ, ವಕ್ಫ್ ಆಸ್ತಿ ಸೇರಬೇಕಾದವರಿಗೆ ಸೇರಬೇಡವೇ?

---------------------

   ♦  ದೇಶದ ಎಲ್ಲಾ ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿವೆ

-ರಾಜನಾಥ್ ಸಿಂಗ್, ಕೇಂದ್ರ ಸಚಿವ

ಹೌದು, ಪರಿಣಾಮವಾಗಿ ಎಲ್ಲ ಶಂಕಿತ ಕೇಸರಿ ಉಗ್ರರೂ ಒಬ್ಬೊಬ್ಬರಾಗಿ ಸ್ವತಂತ್ರರಾಗುತ್ತಿದ್ದಾರೆ.

  

share
ವಾರ್ತಾಭಾರತಿ
ವಾರ್ತಾಭಾರತಿ
Next Story
X