Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಜೂನ್ 10ರಂದು ಬೆಂಗಳೂರು-ಮೈಸೂರು ಓಟದ...

ಜೂನ್ 10ರಂದು ಬೆಂಗಳೂರು-ಮೈಸೂರು ಓಟದ ಬೆಸುಗೆ

"ಟ್ವಿನ್ ಸಿಟಿ" 120 ಕಿ.ಮೀ ಐತಿಹಾಸಿಕ ರಿಲೇ ಸ್ಪರ್ಧೆ

ವಾರ್ತಾಭಾರತಿವಾರ್ತಾಭಾರತಿ23 May 2016 12:39 PM IST
share
ಜೂನ್ 10ರಂದು ಬೆಂಗಳೂರು-ಮೈಸೂರು ಓಟದ ಬೆಸುಗೆ

* ಪ್ರತಿ ವೃತ್ತಿಪರ ರಿಲೇ ತಂಡದಲ್ಲಿ 8 ಓಟಗಾರರು

* ಓಪನ್ ಲೀಗ್‌ನಲ್ಲಿ 12 ಸ್ಪರ್ಧಿಗಳ ಒಂದು ತಂಡ

ಬೆಂಗಳೂರು, ಮೇ 23: ಉದ್ಯಾನ ನಗರಿ ಹಾಗೂ ಅರಮನೆ ನಗರಿಯ ನಡುವೆ ಓಟದ ಬೆಸುಗೆಯಾಗಲಿದೆ. ಇದು ಸಾಧ್ಯವಾಗಲಿರುವುದು ದೇಶವು ಹಿಂದೆಂದೂ ಕಂಡರಿಯದ 120 ಕಿ.ಮೀ ದೂರದ "ಟ್ವಿನ್ ಸಿಟಿ" ರಿಲೇ ಓಟದ ಉತ್ಸಾಹದ ಮೂಲಕ. ಬೆಂಗಳೂರು-ಮೈಸೂರು ಹೆದ್ದಾರಿಯು ವಾಹನಗಳೋಟದ ಹೊರತಾಗಿ ಓಟಗಾರರ ವೇಗಕ್ಕೂ ಅಂದು ಸಾಕ್ಷಿಯಾಗಲಿದೆ. ಜೂನ್ 10ರಂದು ಬೆಂಗಳೂರಿನಿಂದ ಆರಂಭವಾಗಿ ಜೂನ್ 11ರಂದು ಮೈಸೂರಿನಲ್ಲಿ ರಿಲೇ ಸ್ಪರ್ಧೆ ಕೊನೆಗೊಳ್ಳಲಿದೆ.

ಇನ್ವೆಂಟರ್ಸ್ ಇಂಡಿಯಾ ರಿಸರ್ಚ್ ಪ್ರತಿಷ್ಠಾನವು ಸೋಸಿಯೋ ಫಿಟ್ನೆಸ್ ಸಹಯೋಗದಲ್ಲಿ ಆಯೋಜಿಸುತ್ತಿರುವ ಈ ರಿಲೇಯು ಸಾಮರ್ಥ್ಯ, ತಂಡ ನಿರ್ವಹಣೆ ಹಾಗೂ ನಾಯಕತ್ವಕ್ಕೆ ಸವಾಲಾಗುವಂಥ ಸಂಯೋಜಿತ ಓಟವಾಗಿದೆ. ವೃತ್ತಿಪರ ವಿಭಾಗದಲ್ಲಿ 8 ಓಟಗಾರರ ಒಂದು ತಂಡಕ್ಕೆ ಅವಕಾಶವಿದ್ದು, ಓಪನ್ ಲೀಗ್‌ನಲ್ಲಿ 12 ಸದಸ್ಯರ ಒಂದು ತಂಡವಾಗಿ ಟ್ವಿನ್ ಸಿಟಿ ರಿಲೇಯಲ್ಲಿ ಓಡಲು ಅವಕಾಶ ಮಾಡಿಕೊಡಲಾಗಿದೆ.

ವೃತ್ತಿಪರ ಹಾಗೂ ಓಪನ್ ಲೀಗ್ ಎರಡೂ ವಿಭಾಗದಲ್ಲಿ ಮಹಿಳೆ ಹಾಗೂ ಪುರುಷರ ಪ್ರತ್ಯೇಕ ತಂಡಗಳ ಜತೆಗೆ ಪುರುಷ-ಮಹಿಳೆ ಸಂಯೋಜನೆಯ ಮಿಶ್ರ ತಂಡಗಳೂ ಪಾಲ್ಗೊಳ್ಳಬಹುದಾಗಿದೆ. ಪ್ರತಿಯೊಂದು ವಿಭಾಗದ ತಂಡವು ತನ್ನ ನಾಯಕತ್ವ ವಹಿಸುವವರು ಯಾರೆನ್ನುವುದನ್ನು ತಾನೇ ನಿರ್ಧಾರ ಮಾಡಿಕೊಂಡು ರೀಲೆಯ ವಿವಿಧ ಲೆಗ್‌ನಲ್ಲಿ ಓಡುವವರನ್ನು ನಿರ್ಧಾರ ಮಾಡಿಕೊಳ್ಳಬೇಕು.

120 ಕಿ.ಮೀ ಅಂತರದ ರಿಲೇ ಇದಾಗಿರುವ ಕಾರಣ ಪ್ರತಿಯೊಂದು ಲೆಗ್ ಅನ್ನು ವಿಭಿನ್ನ ಅಂತರಗಳಲ್ಲಿ ವಿಂಗಡಿಸಲಾಗಿದೆ. ಹೆಚ್ಚು ದೂರ ಓಡುವಂಥ ಸಾಮರ್ಥ್ಯದ ಓಟಗಾರರನ್ನು ತಂಡದ ನಾಯಕತ್ವ ವಹಿಸಿಕೊಂಡವರು ದೂರದ ಓಟಕ್ಕೆ ಹಾಗೂ ಕಡಿಮೆ ಸಾಮರ್ಥ್ಯದ ಓಟಗಾರರನ್ನು ಅಲ್ಪ ಅಂತರದ ಓಟಕ್ಕೆ ನಿಗದಿ ಮಾಡಿಕೊಳ್ಳಲು ಸ್ವತಂತ್ರರಾಗಿರುತ್ತಾರೆ. ಇದು ಸ್ಪರ್ಧಿಸುವ ಆಯಾ ತಂಡದಲ್ಲಿನ ಓಟಗಾರರ ದೂರ ಕ್ರಮಿಸುವ ಶಕ್ತಿಯನ್ನು ಅವಲಂಬಿಸಿರುತ್ತದೆ. ವೃತ್ತಿಪರ ಲೀಗ್‌ನಲ್ಲಿ ಒಂದು ಲೆಗ್ ಕನಿಷ್ಠ 7.5 ಕಿ.ಮೀ ಯಿಂದ ಗರಿಷ್ಠ 23 ಕಿ.ಮೀ ವರೆಗೆ ವಿಭಾಗಿತಗೊಂಡಿರುತ್ತದೆ. ಓಪನ್ ಲೀಗ್‌ನಲ್ಲಿ ಕನಿಷ್ಠ ಲೆಗ್ 7.5 ಕಿ.ಮೀ ಹಾಗೂ ಗರಿಷ್ಠ ಲೆಗ್ 12 ಕಿ.ಮೀ ಆಗಿರುತ್ತದೆ. ಪ್ರತಿಯೊಂದು ವಿಭಾಗದ ಸ್ಪರ್ಧೆಯಲ್ಲಿ ಅಗ್ರ ಮೂರು ತಂಡಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಅಷ್ಟೇ ಅಲ್ಲ ವಿವಿಧ ವರ್ಗದಲ್ಲಿ ವೈಯಕ್ತಿಕ ಉತ್ತಮ ಪ್ರದರ್ಶನ ನೀಡುವವರಿಗೆ ಪ್ರತ್ಯೇಕವಾಗಿ ಬಹುಮಾನ ನೀಡಲಾಗುವುದು.

ಟ್ವಿನ್ ಸಿಟಿ ರಿಲೇ ಆರಂಭವಾಗುವುದು ಜೂನ್ 10ರ ಸಂಜೆ 7 ಗಂಟೆಗೆ ಬೆಂಗಳೂರು ಸಮೀಪದ ಮೈಸೂರು ರಸ್ತೆಯಲ್ಲಿನ ಡೆಕಥ್ಲಾನ್‌ನಿಂದ. ಕೊನೆಗೊಳ್ಳುವುದು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜೂನ್ 11ರಂದು ಬೆಳಗಿನ ಹೊತ್ತಿಗೆ. ಪ್ರಶಸ್ತಿ ಪ್ರದಾನ ಸಮಾರಂಭವು ಅದೇ ದಿನ ಬೆಳಿಗ್ಗೆ 9 ಗಂಟೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿದೆ.

events@twincityrelay.org ದೇಶದ ಮೊಟ್ಟ ಮೊದಲ ಸುದೀರ್ಘ ರಿಲೇಯಲ್ಲಿ ಪಾಲ್ಗೊಳ್ಳಲು ಬಯಸುವವರು ತಮ್ಮ ತಂಡವನ್ನು ಸೌಮ್ಯಶ್ರೀ ರಾವ್ (9986659875) ಅಥವಾ ನೋಂದಣಿ ಕೇಂದ್ರ (8884342842, 8884343247) ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಇ-ಮೇಲ್ ವಿಳಾಸವನ್ನು ಸಂಪರ್ಕಿಸಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X