Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕರಾವಳಿಯಲ್ಲಿ ಬೂತಾಯಿ, ಬಂಗುಡೆ ಮೀನಿನ...

ಕರಾವಳಿಯಲ್ಲಿ ಬೂತಾಯಿ, ಬಂಗುಡೆ ಮೀನಿನ ಪ್ರಮಾಣ ಇಳಿಕೆ

ವಾರ್ತಾಭಾರತಿವಾರ್ತಾಭಾರತಿ23 May 2016 4:49 PM IST
share
ಕರಾವಳಿಯಲ್ಲಿ ಬೂತಾಯಿ, ಬಂಗುಡೆ ಮೀನಿನ ಪ್ರಮಾಣ ಇಳಿಕೆ

ಮಂಗಳೂರು, ಮೇ 23: ಹಾಲಿ ಮೀನುಗಾರಿಕಾ ಋತುವಿನಲ್ಲಿ ಹಿಡಿಯಲಾದ ಒಟ್ಟು ಮೀನಿನ ಪ್ರಮಾಣ ಹಿಂದಿನ ವರ್ಷಗಳಿಗೆ ಹೋಲಿಸಿದಾಗ ಸರಾಸರಿಗಿಂತ ಕಡಿಮೆಯಾಗಿಲ್ಲ. ಆದರೆ ಹಿಂದಿನ ವರ್ಷಗಳಲ್ಲಿ ಹೇರಳವಾಗಿ ದೊರೆಯುತ್ತಿದ್ದ ಬಂಗುಡೆ, ಬೂತಾಯಿ ಮೀನಿನ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಜೂನ್ 1ರಿಂದ ಜುಲೈ 30ರವರೆಗೆ ಎಲ್ಲಾ ಯಾಂತ್ರೀಕೃತ ದೋಣಿಯ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಈ ಹಿಂದೆ ಆಳ ಸಮುದ್ರದ ದೋಣಿಗಳಿಗೆ ಮೀನುಗಾರಿಕೆಗೆ ಒಂದು ವಾರ ಕಾಲಾವಕಾಶ ನೀಡುತ್ತಿದ್ದ ಕಾರಣ ಸಮುದ್ರದಲ್ಲಿ ಮೀನು ಹಿಡಿಯಲು ಒಂದು ವಾರದ ಅವಕಾಶ ಲಭಿಸುತ್ತಿತ್ತು.
 2014-15ನೆ ಸಾಲಿನಲ್ಲಿ ಬೂತಾಯಿ (ಸಾರ್ಡಿನಿಯಾ) 26,034 ಮೆಟ್ರಿಕ್ ಟನ್ ದೊರೆತಿತ್ತು. 2015-16ರಲ್ಲಿ 10,644 ಮೆಟ್ರಿಕ್ ಟನ್ ಮೀನು ದೊರೆತಿದ್ದು, ಒಟ್ಟು 15,390 ಮೆಟ್ರಿಕ್ ಟನ್ ಕಡಿಮೆ ದೊರೆತಿದೆ. ಉಳಿದಂತೆ ಕರಾವಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ದೊರೆಯುತ್ತಿದ್ದ ಬಂಗುಡೆ ಮೀನು ಕಳೆದ ವರ್ಷ 22,619 ಮೆಟ್ರಿಕ್ ಟನ್ ದೊರೆತಿದ್ದು, ಈ ಬಾರಿ 20,239ಮೆಟ್ರಿಕ್ ಟನ್ ದೊರೆತಿದೆ. 2,380 ಮೆಟ್ರಿಕ್ ಟನ್ ಬಂಗುಡೆ ಮೀನು ಕಡಿಮೆ ಪ್ರಮಾಣದಲ್ಲಿ ದೊರೆತಿದೆ.

ಜಿಲ್ಲೆಯಲ್ಲಿ 2015-16ನೆ ಸಾಲಿನ ಆರ್ಥಿಕ ವರ್ಷದಲ್ಲಿ 1,51,458 ಮೆಟ್ರಿಕ್ ಟನ್ (ವೌಲ್ಯ 1,37,053.95ಲಕ್ಷ ರೂ.)ಮೀನು ಹಿಡಿಯಲಾಗಿದೆ. ಹಿಂದಿನ ವರ್ಷ 1,50,525(ವೌಲ್ಯ 1,07,56.58 ಲಕ್ಷ ರೂ.)ಮೆಟ್ರಿಕ್ ಟನ್ ಮೀನಿನ ಇಳುವರಿ ದೊರೆತಿದೆ. ಹಾಲಿ ಮೀನುಗಾರಿಕಾ ಋತುವಿನಲ್ಲಿ ರಾತ್ರಿ ಬೆಳಕನ್ನು ಬೀರಿ ಮೀನು ಹಿಡಿಯುವ ಆಧುನಿಕ ತಂತ್ರಜ್ಞಾನದೊಂದಿಗೆ ಹೆಚ್ಚಿನ ಮೀನು ಹಿಡಿಯುವ ಪ್ರಯತ್ನ ನಡೆದಿದೆ. ಆದರೆ ಕೆಲವು ಜಾತಿಯ ಮೀನುಗಳು ಕಡಿಮೆ ಪ್ರಮಾಣದಲ್ಲಿ ದೊರೆತಿದೆ. 2015ರ ಫೆಬ್ರವರಿಯಲ್ಲಿ 19,761 ಮೆಟ್ರಿಕ್ ಟನ್ ಮೀನಿನ ಇಳುವರಿ ದೊರೆತಿದ್ದು, 2016ರ ಮಾರ್ಚ್ ತಿಂಗಳಲ್ಲಿ 20,323 ಮೆಟ್ರಿಕ್ ಟನ್ ಹಾಗೂ ಜನವರಿಯಲ್ಲಿ 16,824 ಮೆಟ್ರಿಕ್ ಟನ್ ಮೀನು ಹಿಡಿಯಲಾಗಿದೆ.

ಉಳಿದಂತೆ ಮೀನುಗಾರಿಕಾ ಇಲಾಖಾ ವರದಿಯ ಪ್ರಕಾರ ಕಳೆದ ಸಪ್ಟೆಂಬರ್ ತಿಂಗಳಲ್ಲಿ 17,781 ಮೆಟ್ರಿಕ್ ಟನ್ ಮೀನು ಹಿಡಿಯಲಾಗಿದೆ. ಉಳಿದಂತೆ ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ 9,067 ಮೆಟ್ರಿಕ್‌ಟನ್, ಮೇ ತಿಂಗಳಲ್ಲಿ 16,056 ಮೆಟ್ರಿಕ್ ಟನ್,ಆಗಸ್ಟ್ ತಿಂಗಳಲ್ಲಿ 9,193 ಮೆಟ್ರಿಕ್ ಟನ್ ಮೀನು ಹಿಡಿಯಲಾಗಿದೆ.

ಕರಾವಳಿಯಲ್ಲಿ ದೊರೆತಿರುವ ವಿವಿಧ ಜಾತಿಯ ಮೀನುಗಳಲ್ಲಿ ಪ್ರಮುಖವಾಗಿ ಬೊಂಡಾಸ್, ಮದ್ಮಲ್ (ರಾಣಿ ಮೀನು), ಕಪ್ಪೆ ಬೊಂಡಾಸ್, ಡಿಸ್ಕೋ, ಮುರು ಮೀನು, ಕಲ್ಲೂರು, ಅಂಜಲ್, ಸಿಗಡಿ, ಕೊಲ್ಲತರು, ಅರಣೆ ಮೀನು, ಪಾಂಬೋಲು(ರಿಬ್ಬನ್ ಫಿಶ್), ಬಂಗುಡೆ, ಬೂತಾಯಿ ಪ್ರಮುಖ ಜಾತಿಯವುಗಳಾಗಿವೆ. ಈ ಪೈಕಿ ಮದ್ಮಲ್ ಮೀನು ಎಂದು ಕರೆಯಲ್ಪಡುವ ಮೀನು ಗರಿಷ್ಠವಾಗಿ (22,070ಮೆಟ್ರಿಕ್‌ಟನ್) ಲಭಿಸಿದೆ.

ಮೀನಿನ ಕಾರ್ಖಾನೆಗಳಲ್ಲಿ ಮೀನಿನ ಗೊಬ್ಬರ ಮತ್ತು ಮೀನಿನ ಎಣ್ಣೆ ತೆಗೆಯಲು ದೊಡ್ಡ ಪ್ರಮಾಣದಲ್ಲಿ ಬೂತಾಯಿ ಮೀನು ಬಳಕೆಯಾಗುತ್ತದೆ. ಆದರೆ ಈ ಬಾರಿ ಬೂತಾಯಿ ಮೀನಿನ ಕೊರತೆಯಿಂದಾಗಿ ಮೀನಿನ ಕಾರ್ಖಾನೆಗಳಿಗೂ ಸ್ವಲ್ಪ ಪ್ರಮಾಣದ ಅಡಚಣೆಯಾಗುವ ಸಾಧ್ಯತೆ ಇದೆ ಎನ್ನುವುದು ದಕ್ಕೆಯ ಮೀನುಗಾರರ ಅಭಿಪ್ರಾಯ.

‘‘ಈ ಬಾರಿ ಕೆಲವು ಜಾತಿಯ ಮೀನಿನ ಇಳುವರಿ ನಿರೀಕ್ಷಿತ ಪ್ರಮಾಣಕ್ಕಿಂತ ಸ್ವಲ್ಪ ಕಡಿಮೆ ದೊರೆತಿದ್ದರೂ, ಸರಾಸರಿ ಪ್ರಮಾಣಕ್ಕೆ ಹೋಲಿಸಿದಾಗ ಹಿಂದಿನ ವರ್ಷಗಳಿಂತ ಕಡಿಮೆಯಾಗಿಲ್ಲ’’ಎಂದು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಗಣೇಶ್ ವಾರ್ತಾಭಾರತಿಗೆ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X