ಸುರತ್ಕಲ್:ನವತರುಣ್ ಸ್ಪೋರ್ಟ್ಸ್ ಕ್ಲಬ್ನ 22ನೆ ವಾರ್ಷಿಕೋತ್ಸವ
ಮಂಗಳೂರು, ಮೇ 23: ನವತರುಣ್ ಸ್ಪೋರ್ಟ್ಸ್ ಕ್ಲಬ್ ಮತ್ತು ಇಂಡಿಯನ್ ಸೋಶಿಯಲ್ ಸರ್ವಿಸ್ ಸುರತ್ಕಲ್ ಜಂಟಿ ಆಶ್ರಯದಲ್ಲಿ ಇದರ 22 ನೆ ವಾರ್ಷಿಕೋತ್ಸವ ಇತ್ತೀಚೆಗೆ ಸುರತ್ಕಲ್ ಕೇಂದ್ರ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ 110 ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನೀಡಲಾಯಿತು.ಗಣೇಶ್ಆಚಾರ್ಯ ಧರ್ಮಶಾಸ್ತ್ರ ಚೆಂಡೆ ಬಳಗದವರಿಂದ ಚೆಂಡೆ ಪ್ರದರ್ಶನವು ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಲಿಯಂ ಮಸ್ಕರೇನಸ್ ಕಡಂಬೋಡಿ ವಹಿಸಿದ್ದರು.
ಸಮಾರಂಭದಲ್ಲಿ ನ್ಯಾಯವಾದಿ ಇಸ್ಮಾಯೀಲ್ ಕಾಟಿಪಳ್ಳ, ಮನಪಾ ಸದಸ್ಯೆ ಪ್ರತಿಭಾ ಕುಳಾಯಿ, ವಿ.ಟಿ. ರಾಜಶೇಖರ್, ಜಿಶನ್ ಅಲಿ ಸುರತ್ಕಲ್, ಎಂ.ಕಬೀರ್ ಸುರತ್ಕಲ್, ಲಕ್ಷ್ಮಣ್ ಮಧ್ಯ, ಜೋನ್ ಹಮೀದ್, ಜೆರಾಲ್ಡ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.
Next Story