Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸ್ವದೇಶಿ ಸ್ಟೇಸ್‌ಶಟ್ಲ್‌ನ ಒಳಗಿನ ಕಥೆ

ಸ್ವದೇಶಿ ಸ್ಟೇಸ್‌ಶಟ್ಲ್‌ನ ಒಳಗಿನ ಕಥೆ

ವಾರ್ತಾಭಾರತಿವಾರ್ತಾಭಾರತಿ23 May 2016 10:51 PM IST
share

ತಿರುವನಂತಪುರ, ಮೇ 23: ಕೇರಳದ ಮೀನುಗಾರಿಕೆ ಗ್ರಾಮವೊಂದರ ವಿಮಾನಾಶ್ರಮವೊಂದರಲ್ಲಿ 600ಕ್ಕೂ ಹೆಚ್ಚು ವಿಜ್ಞಾನಿಗಳು ಕಳೆದ 5 ವರ್ಷಗಳಲ್ಲಿ ನಡೆಸಿದ ಪ್ರಯತ್ನ ಭಾರತವು ಅಂತರಿಕ್ಷ ಶೋಧದಲ್ಲಿ ಅತ್ಯಂತ ವಿಶಿಷ್ಟ ಮೈಲುಗಲ್ಲೊಂದನ್ನು ಸ್ಥಾಪಿಸುವುದರೊಂದಿಗೆ ಸಾಕಾರಗೊಂಡಿದೆ.
ಭಾರತದ ತೀರಾ ಸ್ವಂತ, ಮರು ಬಳಸಬಹುದಾದ ಉಡಾವಣಾ ವಾಹನ (ಆರ್‌ಎಲ್‌ವಿ) ಎಂದು ಕರೆಯಲಾಗಿರುವ ಸ್ಪೇಸ್ ಶಟ್ಲ್ ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಘಟನೆ-ಇಸ್ರೊದಿಂದ ಇಲ್ಲೇ ಜನ್ಮ ತಾಳಿತು ಹಾಗೂ ಘೋಷಿಸಲ್ಪಟ್ಟಿತ್ತು.
ಯೋಜನೆಯು ಒಂದು ದಶಕದ ಹಿಂದೆಯೇ, ದೇಶದ ಪ್ರಧಾನ ರಾಕೆಟ್ ವಿನ್ಯಾಸ ಹಾಗೂ ರಚನಾ ಪ್ರಯೋಗ ಶಾಲೆಯಾಗಿರುವ ತಿರುವನಂತಪುರದ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ಆರಂಭಗೊಂಡಿತ್ತು.
ಎನ್‌ಡಿಟಿವಿಯ ವಿಜ್ಞಾನ ಸಂಪಾದಕ ಪಲ್ಲವ ಬಾಗ್ಲಾರಿಗೆ ಭವಿಷ್ಯದ ಬಾಹ್ಯಾಕಾಶ ವಿಮಾನದ ನಿರ್ಮಾಣವನ್ನು ಪ್ರತ್ಯಕ್ಷ ನೋಡುವ ಅತ್ಯಪೂರ್ವ ಸದವಕಾಶ ಲಭಿಸಿತ್ತು.
6.5 ಮೀ. ಉದ್ದದ ಮರುಬಳಸಬಹುದಾದ ಉಡಾವಣಾ ವಾಹನದ ಮಾದರಿಯ ತೂಕ ಸುಮಾರು 1.75 ಟನ್ ಹಾಗೂ ತಗಲಿದ ವೆಚ್ಚ ರೂ.95 ಕೋಟಿ. ಅದರ ಅಂತಿಮ ರೂಪವು ಆರು ಪಟ್ಟು ಹೆಚ್ಚು-ಅಂದರೆ ಅಂದಾಜು 40 ಮೀ. ಉದ್ದವಿರಲಿದ್ದು, ಅದು ಸುಮಾರು 2030ರೊಳಗೆ ಸಿದ್ಧಗೊಳ್ಳಲಿದೆ. ಅದಕ್ಕೆ ಮೊದಲು ಇನ್ನೆರಡು ಪ್ರಾಯೋಗಿಕ ಮಾದರಿಗಳ ಪರೀಕ್ಷಾ ಹಾರಾಟವನ್ನು ಇಸ್ರೊ ನಡೆಸಲಿದೆ.
ಬಾಹ್ಯಾಕಾಶ ವಿಮಾನದ ಎಲ್ಲ ವ್ಯವಸ್ಥೆಗಳು ನಿಖರವಾಗಿ ಕೆಲಸ ಮಾಡುತ್ತವೆಂಬುದನ್ನು ಖಚಿತಪಡಿಸಿಕೊಳ್ಳಲು ತನ್ನ ತಂಡವು ಅನೇಕ ವರ್ಷಗಳ ಕಾಲ ಸಮಯದ ಪರಿವೆಯಿಲ್ಲದೆ ಕೆಲಸ ಮಾಡಿದೆಯೆಂದು ಆರ್‌ಎಲ್‌ವಿಯ ಯೋಜನಾ ನಿರ್ದೇಶಕ ಶ್ಯಾಂಮೋಹನ್ ತಿಳಿಸಿದ್ದಾರೆ.
ಭಾರತಕ್ಕಾಗಿ ಆರ್‌ಎಲ್‌ವಿಯನ್ನು ವಿನ್ಯಾಸಿಸಲು ತನ್ನನ್ನು 15 ವರ್ಷಗಳ ಹಿಂದೆ ಆರಿಸಲಾಗಿತ್ತು. ಮರುಬಳಕೆಯ ಉಡಾವಣಾ ವಾಹನ ನಿರ್ಮಾಣವು ಜಟಲವಾದ ಹಾಗೂ ಸವಾಲಿನ ಕೆಲಸವಾಗಿತ್ತು. ಆ ಕನಸು ಇದೀಗ ನನಸಾಗಿದೆಯೆಂದು ಇಸ್ರೊದಲ್ಲಿ ಮೂರು ದಶಕಗಳನ್ನು ಕಳೆದಿರುವ 53ರ ಹರೆಯದ ಮೋಹನ್ ಹೇಳಿದ್ದಾರೆ.
ಅಮೆರಿಕನ್ನರು ತಮ್ಮ ಸ್ಪೇಸ್ ಶಟ್ಲನ್ನು 135 ಬಾರಿ ಯಶಸ್ವಿಯಾಗಿ ಹಾರಿಸಿದ್ದಾರೆ. 2011ರಲ್ಲಿ ಆರ್ಥಿಕ ಅಡಚಣೆಯಿಂದಾಗಿ ಅವರು ಅದನ್ನು ನಿಲ್ಲಿಸಿದ್ದರು. ರಶ್ಯನ್ನರು 1989ರಲ್ಲಿ ಕೇವಲ ಒಂದು ಬಾರಿ ಮಾತ್ರ ಅದನ್ನು ಹಾರಿಸಿದ್ದರು. ಇತರ ಬಾಹ್ಯಾಕಾಶ ಸಂಸ್ಥೆಗಳು ಪ್ರಯತ್ನಿಸಿ ವಿಫಲವಾಗಿರುವ ಸಾಹಸವನ್ನು ಮಾಡಲು ಭಾರತವೀಗ ಧೈರ್ಯವಾಗಿ ಹೊರಟಿದೆ.
ದೊಡ್ಡದಾದ ‘ಹನುಮ ಲಂಘನ’ದೆಡೆಗೆ ಇದೊಂದು ಮೊದಲ ಪುಟ್ಟ ಹೆಜ್ಜೆಯಷ್ಟೇ ಎಂದು ತಿರುವನಂತಪುರದ ವಿಕ್ರಂ ಸಾರಾಭಾಯಿ ಅಂತರಿಕ್ಷ ಕೇಂದ್ರದ ನಿರ್ದೇಶಕ ಕೆ.ಶಿವನ್ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X