ಪ್ರಯಾಗರಾಜ್ ಎಕ್ಸ್ಪ್ರೆಸ್ ರೈಲಿನಲ್ಲಿ ದರೋಡೆ
ಗಾಝಿಯಾಬಾದ್, ಮೇ 24: ಅಲಬಾಹಾದ್ನಿಂದ ಹೊಸದಿಲ್ಲಿಗೆ ಹೊರಟಿದ್ದ ಪ್ರಯಾಗರಾಜ್ ಎಕ್ಸ್ಪ್ರೆಸ್ ರೈಲಿನಲ್ಲಿ ದುರ್ಷ್ಕರ್ಮಿಗಳು ಬಂದೂಕು ತೋರಿಸಿ 12 ಪ್ರಯಾಣಿಕರಿಂದ ಭಾರಿ ಮೊತ್ತದ ನಗ-ನಗದು ಕಳವು ಮಾಡಿದ್ದಾರೆ
ಇಂದು ಬೆಳಗ್ಗಿನ ಜಾವ ಅಲಿಘರ್ನಲ್ಲಿ ರೈಲು ಬೋಗಿಗೆ ಹತ್ತಿದ ದುಷ್ಕರ್ವಿುಗಳು ರೈಲು ಖುರ್ಜಾ ನಿಲ್ದಾಣ ತಲುಪುತ್ತಿದ್ದಂತೆ ಮಲಗಿದ್ದ ಯಾತ್ರಿಕರಿಗೆ ಬಂದೂಕು ತೋರಿಸಿ ಜೀವ ಬೆದರಿಕೆಯೊಡ್ಡಿ ಅವರ ಬಳಿಯಿದ್ದ ನಗದು, ಚಿನ್ನಾಭರಣಗಳನ್ನು ದೋಚಿದ್ದಾರೆ.
ಗಾಝಿಯಾಬಾದ್ ನಿಲ್ದಾಣ ಬರುತ್ತಿದ್ದಂತೆ ಪ್ರಯಾಣಿಕರು 7 ಮಂದಿ ದುಷ್ಕರ್ವಿುಗಳು ತಮಗೆ ಜೀವಬೆದರಿಕೆಯೊಡ್ಡಿ ಚಿನ್ನಾಭರಣ ದೋಚಿದರು ಎಂಬ ಮಾಹಿತಿಯನ್ನು ಬಹಿರಂಗಪಡಿಸಿದರು.
ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story