Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ದಿಲ್ಲಿ ಕುರಿತ ಉರ್ದು ಕವನದ ಸಾಲುಗಳನ್ನು...

ದಿಲ್ಲಿ ಕುರಿತ ಉರ್ದು ಕವನದ ಸಾಲುಗಳನ್ನು ವಿರೂಪಗೊಳಿಸಿದ ‘ಸ್ವಚ್ಛ ಭಾರತ್ ಭಕ್ತರು’

ಸರಕಾರದ ಯೋಜನೆಯನ್ನೇ ನಿಲ್ಲಿಸಿದ 'ಆರೆಸ್ಸೆಸ್ ಕಾರ್ಯಕರ್ತರು'

ವಾರ್ತಾಭಾರತಿವಾರ್ತಾಭಾರತಿ24 May 2016 3:02 PM IST
share
ದಿಲ್ಲಿ ಕುರಿತ ಉರ್ದು ಕವನದ ಸಾಲುಗಳನ್ನು ವಿರೂಪಗೊಳಿಸಿದ ‘ಸ್ವಚ್ಛ ಭಾರತ್ ಭಕ್ತರು’

ಹೊಸದಿಲ್ಲಿ, ಮೇ 24 : ದಿಲ್ಲಿ ಸರಕಾರದ ಮೈ ದಿಲ್ಲಿ ಸ್ಟೋರಿ ಪ್ರಾಜೆಕ್ಟ್ ಅನ್ವಯ ದಿಲ್ಲಿ ಜಲ್ ಬೋರ್ಡ್ ಪಂಪಿಂಗ್ ಸ್ಟೇಶನ್ ಕಟ್ಟಡದ ಗೋಡೆಗಳಲ್ಲಿ ದಿಲ್ಲಿಯನ್ನು ಹೊಗಳಿ ಬರೆದ ಉರ್ದು ಕವನದ ಸಾಲುಗಳನ್ನು ಬರೆಯುತ್ತಿದ್ದ ಫ್ರೆಂಚ್ ಕಲಾವಿದ ಹಾಗೂ ಆತನ ಭಾರತೀಯ ಸಹಾಯಕನನ್ನು ಸುತ್ತುವರಿದ ‘ಸ್ವಚ್ಛ ಭಾರತ್ ಭಕ್ತರು’ ಅವರು ಬರೆದಿದ್ದನ್ನು ಅವರಿಂದಲೇ ಬಲವಂತವಾಗಿ ವಿರೂಪಗೊಳಿಸಿದ ಘಟನೆ ವರದಿಯಾಗಿದೆ.

ದಾಳಿಕೋರರ ಗುಂಪು ‘ಜೈಶ್ರೀರಾಂ’ ಘೋಷಣೆ ಕೂಗುತ್ತಿತ್ತಲ್ಲದೆ ಕಲಾವಿದರನ್ನು ‘ಲಹೋರಿ’ ಎಂದು ಹೀಗಳೆದಿತ್ತೆಂದು ಕಲಾವಿದರಲ್ಲೊಬ್ಬರಾದ ಅಖ್ಲಾಖ್ ಅಹ್ಮದ್ ಹೇಳಿದ್ದಾರೆ. ಹಿಂದಿ, ಇಂಗ್ಲಿಷ್ ಹಾಗೂ ಪಂಜಾಬಿ ಹೊರತಾಗಿ ಉರ್ದು ಕೂಡ ದೆಹಲಿಯ ರಾಜ್ಯ ಭಾಷೆಗಳಲ್ಲೊಂದಾಗಿದೆ.

ಕಲಾವಿದರ ಗುಂಪಾದ ಡೆಲ್ಲಿ ಐ ಲವ್ ಯೂ ಈ ಯೋಜನೆಯನ್ನು ಜಾರಿಗೊಳಿಸುತ್ತಿದ್ದು ಅದರಂಗವಾಗಿ ಹಲವು ಸಾರ್ವಜನಿಕ ಕಟ್ಟಡಗಳ ಗೋಡೆಗಳಲ್ಲಿ ನಾಲ್ಕು ಭಾಷೆಗಳ ದ್ವಿರುಕ್ತಿಗಳನ್ನು ಚಿತ್ತಾಕರ್ಷಕವಾಗಿ ಬರೆಯಲಿವೆ.

ದಿಲ್ಲಿ ಜಲ್ ಬೋರ್ಡ್ ಗೋಡೆಗಳಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಜೀಶನ್ ಅಮ್ಜದ್ ಬರೆದ ಕವನ ‘‘ದಿಲ್ಲಿ ತೇರಾ ಉರ್ನ, ಔರ್ ಫಿರ್ ಉಜರ್ ಕೆ ಬಸ್ನ, ವೋಹ್ ದಿಲ್ ಹೈ ತೂನೆ ಪಾಯಾ, ಸನಿ ನಹೀ ಹೈ ಜಿಸ್ಕಾ’’ ಬರೆಯಲಾಗುತಿತ್ತು.

‘‘ನಾವು ಪ್ರಥಮ ಸಾಲನ್ನು ಬರೆಯುವಷ್ಟರಲ್ಲಿ ಜನ ಸೇರಿ ನಾವೇಕೆ ಉರ್ದು ಭಾಷೆಯಲ್ಲಿ ಬರೆಯುತ್ತಿದ್ದೇವೆಂದು ನಮ್ಮನ್ನು ಪ್ರಶ್ನಿಸಿದರು,’’ಎಂದು ಶಬ್ಬು ಎಂದೇ ಜನಪ್ರಿಯರಾಗಿರುವ ಕಲಾವಿದ ಅಹ್ಮದ್ ಹೇಳುತ್ತಾರೆ. ‘‘ನಾವು ಇದೊಂದು ಸರಕಾರಿ ಯೋಜನೆ ಹಾಗೂ ಗೋಡೆಗಳಿಗೆ ಬರಹ ರೂಪದಲ್ಲಿ ಬಣ್ಣ ಹಚ್ಚಲು ನಮಗೆ ನೀಡಲಾದ ಅನುಮತಿ ಪತ್ರವನ್ನು ತೋರಿಸಿದರೂ ಅವರಲ್ಲೊಬ್ಬ ತಾನು ಆರೆಸ್ಸೆಸ್ಸಿನವನೆಂದೂ ಉರ್ದು ಭಾಷೆಯನ್ನು ಸಹಿಸುವ ಪ್ರಶ್ನೆಯಿಲ್ಲವೆಂದು ಹೇಳಿದನು. ಆಗ ಅಹ್ಮದ್ ತಮ್ಮನ್ನು ಶಬ್ಬು ಎಂದು ಪರಿಚಯಿಸಿದಾಗ ಅದನ್ನು ಶಂಭು ಎಂದು ಅರ್ಥೈಸಿ ಅವರು ಹಿಂದೂ ಎಂದು ತಿಳಿದ ತಂಡ ಫ್ರೆಂಚ್ ಕಲಾವಿದನತ್ತ ತಿರುಗಿ ಆತನನ್ನು ಪಾಕಿಸ್ತಾನಕ್ಕೆ ತೆರಳುವಂತೆ ಹೇಳಿತು. ‘‘ಆತ ಪಾಕಿಸ್ತಾನಿಯಲ್ಲ, ಬದಲಾಗಿ ಫ್ರಾನ್ಸಿನವನೆಂದೂ ಆತನನ್ನು ಬಿಟ್ಟು ಬಿಡಲು ನಾನು ಬೇಡಿಕೊಂಡೆ.’’ಎಂದು ಅಹ್ಮದ್ ವಿವರಿಸುತ್ತಾರೆ.

ಸುಮಾರು 150ರಷ್ಟಿದ್ದ ಗುಂಪು ಅಹ್ಮದ್ ಗೆ ಗೋಡೆಯಲ್ಲಿ ಸ್ವಚ್ಛ ಭಾರತ್ ಅಭಿಯಾನ್ ಮತ್ತು ನರೇಂದ್ರ ಮೋದಿ ಎಂದು ಹಿಂದಿಯಲ್ಲಿ ಬರೆಯುವಂತೆ ಒತ್ತಾಯಿಸಿತು. ‘‘ನಾವು ಒಂದು ಗೆರೆ ಬರೆದು ಮುಗಿಸುತ್ತಿದ್ದಂತೆಯೇ ಪೊಲೀಸರು ಆಗಮಿಸಿದರು,’’ಎಂದು ಅಹ್ಮದ್ ಹೇಳುತಾರೆ.
ನಮ್ಮ ಮೊಬೈಲ್ ಕ್ಯಾಮರಾದಲ್ಲಿ ದಾಳಿಕೋರರ ಚಿತ್ರಗಳನ್ನು ತೆಗೆಯಲು ಯತ್ನಿಸಿದೆವಾದರೂ ಅವರು ನನ್ನ ಮೊಬೈಲ್ ಫೋನನ್ನು ಸೆಳೆದು ಚಿತ್ರಗಳನ್ನು ಡಿಲೀಟ್ ಮಾಡಿದರು. ದಿಲ್ಲಿ ಪೊಲೀಸರೂ ನಮ್ಮೊಂದಿಗೆ ಒರಟಾಗಿ ನಡೆದುಕೊಂಡರು ಎಂದು ಅವರು ದೂರಿದ್ದಾರೆ.
ದಿಲ್ಲಿ ಸಂಸ್ಕೃತಿ ಸಚಿವ ಕಪಿಲ್ ಮಿಶ್ರಾ ತಾನು ಇಂತಹ ಬೆದರಿಕೆಗಳನ್ನು ಅನುಮತಿಸುವುದಿಲ್ಲವೆಂದಿದ್ದಾರೆ. ದೆಹಲಿ ಉಪ ಪೊಲೀಸ್ ಆಯುಕ್ತ ಎ ಕೆ ಸಿಂಗ್ಲಾ ತಮಗೆ ಈ ಘಟನೆಯ ಬಗ್ಗೆ ತಿಳಿದಿಲ್ಲವೆಂದೂ ವಿಚಾರಿಸುವುದಾಗಿಯೂ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X