ಗುರುವಾಯನಕೆರೆ: ಕುಂಭ ಕಲೋತ್ಸವ ಕಾರ್ಯಕ್ರಮ

ಬೆಳ್ತಂಗಡಿ, ಮೇ 24: ಕುಲಾಲ-ಕುಂಬಾರರ ಸಾಂಸ್ಕೃತಿಕ ಸಮಿತಿ ಬೆಳ್ತಂಗಡಿ ತಾಲೂಕು, ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ ಇದರ ಆಶ್ರಯದಲ್ಲಿ ಗುರುವಾಯನಕೆರೆಯ ಕುಲಾಲ ಮಂದಿರದಲ್ಲಿ ಕುಂಭ ಕಲೋತ್ಸವ ನಡೆಯಿತು.
ಮೀರಾ ವಾಸುದೇವ ಪೆರಾಜೆ ಅವರು ಕಲೋತ್ಸವವನ್ನು ಉದ್ಘಾಟಿಸಿ ಶುಭಹಾರೈಸಿದರು.
ದಿಕ್ಸೂಚಿ ಭಾಷಣ ಮಾಡಿದ ಪುತ್ತೂರು ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ. ರೋಹಿಣಾಕ್ಷ ಶಿರ್ಲಾಲು, ಶಿಕ್ಷಣದಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳು ಭಾಗವಹಿಸಬೇಕು. ತನ್ನಲ್ಲಿರುವ ಪ್ರತಿಭೆಯನ್ನು ಬೆಳಗಿಸಲು ಕುಂಭ ಕಲೋತ್ಸವ ವೇದಿಕೆಯಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ದಿನಕರ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ರಾಜ್ಯ ಕುಲಾಲ ಕುಂಬಾರ ಸಂಘದ ಪ್ರಧಾನ ಕಾರ್ಯದರ್ಶಿ ಪದ್ಮಕುಮಾರ್, ಪಣಕಜೆ ಎಸ್.ಎಸ್. ಕನ್ಸ್ಟ್ರಕ್ಷನ್ನ ಸೀತಾರಾಮ ಮೂಲ್ಯ, ಸಾಮಾಜಿಕ ಕಾರ್ಯಕರ್ತ ಉಮೇಶ್ ನಡ್ತಿಕಲ್ಲು, ಸಮಿತಿ ಅಧ್ಯಕ್ಷ ಉಮೇಶ್ ಕುಲಾಲ್, ಪ್ರಧಾನ ಕಾರ್ಯದರ್ಶಿ ಜಯರಾಜ್ ಪಕ್ಕಿದಕಲ, ಜತೆಕಾರ್ಯದರ್ಶಿ ಜಗದೀಶ್ ಮಾಪಲಾಡಿ, ಕೋಶಾಧಿಕಾರಿ ಮೋಹಾನಂದ ಕುಲಾಲ್, ಮಹಿಳಾ ಸಂಘಟಕಿ ವಿಮಲ ಕಂಚಿಂಜ, ಸಂಘಟಕರಾದ ಕವನ್ ಕೊಜಪ್ಪಾಡಿ, ಸತೀಶ್ ಕುಲಾಲ್ ಉಪಸ್ಥಿತರಿದ್ದರು. ಕುಂಬಾರ ಸಮಾಜದಲ್ಲಿನ ಸಾಧಕರಾದ ಕಸ್ತೂರಿ ಬಾಯಿ ಟೀಚರ್, ಮಾಜಿ ಸೈನಿಕ ಉಮೇಶ್ ಮಾಲಾಡಿ, ನಿವೃತ್ತ ಎಎಸ್ಐ ಪರಮೇಶ್ವರ ಮೂಲ್ಯ, ಹಿರಿಯ ಕಾರ್ಯಕರ್ತ ಗಂಗಯ್ಯ ಮೂಲ್ಯ, ವಾಸು ಟೈಲರ್, ಧರ್ಣಮ್ಮ ಹೊರನಾಡು, ಚಾಲಕ ಅನಂದ ಮೂಲ್ಯ, ಎಂ.ಎಸ್.ರಾಜು ಕುತ್ಲೂರು, ಗಿರೀಶ್ ಮಾಸ್ತರ್ ವೇಣೂರು, ಕರುಣಾಕರ ಕುಲಾಲ್, ನಾರಾಯಣ ಮೂಲ್ಯ ಬಂದಾರು, ನಂದಕುಮಾರ್ ಉಜಿರೆ, ಮೋಹನ ಕುಮಾರ್ ಕಬ್ಬಿನಹಿತ್ಲು, ರಮಾ ಸಿಸ್ಟರ್ ವರಕಬೆ, ವಿ. ಎನ್.ಕುಲಾಲ್ರನ್ನು ಸಮ್ಮಾನಿಸಲಾಯಿತು.
ಬಳಿಕ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು ನಡೆಯಿತು.







