Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸುತ್ತಲ ಹಸಿರು ಹಾಳಾಗಿ ಈಗ ತಾಜ್ ಮಹಲ್...

ಸುತ್ತಲ ಹಸಿರು ಹಾಳಾಗಿ ಈಗ ತಾಜ್ ಮಹಲ್ ಬಣ್ಣ ಹಸಿರಾಗುತ್ತಿದೆ !

ಬಿಬಿಸಿ ವಿಶೇಷ ವರದಿ , ಫೋಟೋಗಳು

ವಾರ್ತಾಭಾರತಿವಾರ್ತಾಭಾರತಿ25 May 2016 12:18 PM IST
share
ಸುತ್ತಲ ಹಸಿರು ಹಾಳಾಗಿ ಈಗ ತಾಜ್ ಮಹಲ್ ಬಣ್ಣ ಹಸಿರಾಗುತ್ತಿದೆ !

ಹೊಸದಿಲ್ಲಿ, ಮೇ 25: ವಿಶ್ವದ ಅದ್ಭುತಗಳಲ್ಲೊಂದಾದ ತಾಜ್ ಮಹಲ್ ಇತ್ತೀಚಿನ ದಿನಗಳಲ್ಲಿ ಕೀಟಗಳಿಂದ ಬಾಧಿತವಾಗಿದ್ದು ಹತ್ತಿರದಲ್ಲಿಯೇ ಹರಿಯುತ್ತಿರವ ಯಮುನಾ ನದಿ ಮಲಿನಗೊಂಡಿರುವುದರಿಂದ ಅದರಲ್ಲಿರುವ ಕ್ರಿಮಿಕೀಟಗಳು ಈ ಪ್ರೇಮ ಸ್ಮಾರಕವನ್ನು ಹಾಳುಗೆಡಹುತ್ತಿದೆಯೆಂದು ಪರಿಸರವಾದಿಗಳು ಹೇಳುತ್ತಿದ್ದಾರೆ. ಇದರಿಂದಾಗಿ ತಾಜ್ ಮಹಲ್ ಕಟ್ಟಡದ ಅಮೃತಶಿಲೆಯಲ್ಲಿ ಅಲ್ಲಲ್ಲಿ ಹಳದಿ ಬಣ್ಣಗಳು ಕಾಣಿಸುತ್ತಿವೆ.

17ನೇ ಶತಮಾನದ ಈ ಸ್ಮಾರಕ ಹಲವಾರು ವರ್ಷಗಳಿಂದ ಮಾಲಿನ್ಯ, ಕಟ್ಟಡ ನಿರ್ಮಾಣ ಚಟುವಟಿಕೆಗಳು, ಹತ್ತಿರದಲ್ಲಿಯೇ ಇರುವ ರುದ್ರಭೂಮಿಯಿಂದ ಬಾಧಿತವಾಗಿದೆ.

ಬಿಬಿಸಿ ವರದಿಯೊಂದು ತಾಜ್ ಮಹಲ್ಹಿಂದೆ ಎದುರಿಸುತ್ತಿದ್ದ ಹಾಗೂ ಈಗ ಎದುರಿಸುತ್ತಿರುವ ಅಪಾಯಗಳನ್ನುತನ್ನ ವರದಿಯೊಂದರಲ್ಲಿ ವಿವರಿಸಿದೆ.

1. ಕೀಟ ಬಾಧೆ : ಪರಿಸರವಾದಿ ಡಿ ಕೆ ಶೋಷಿಯವರ ಪ್ರಕಾರ ಚಿರೊನೊಮಸ್ ಕ್ಯಾಲ್ಲಿಗ್ರಾಫಸ್ (ಜಿಯೋಲ್ಡಿಖಿರೊನೊಮಸ್) ಎಂಬ ಹೆಸರಿನ ಕೀಟ ಬಾಧೆಯಿಂದ ತಾಜ್ ಮಹಲ್ ಕಟ್ಟಡದ ಬಣ್ಣ ಅಲ್ಲಲ್ಲಿ ಹಳದಿಯಾಗುತ್ತಿದೆ.

ಈ ವಿಚಾರವಾಗಿ ಅವರು ಈಗಾಗಲೇ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಿದ್ದು ಮಲಿನಗೊಂಡಿರುವ ಯಮುನಾ ನದಿಯಲ್ಲಿ ಸ್ಫೋಟಕ ಮಾದರಿಯಲ್ಲಿ ಬೆಳೆಯುತ್ತಿರುವ ಕೀಟಗಳು ತಾಜ್ ಮಹಲ್ ಅಂದಗೆಡಿಸುತ್ತಿವೆಯೆಂದು ದೂರಿದ್ದಾರೆ.

‘‘ಸುಮಾರು 52 ಕಾಲುವೆಗಳ ನೀರು ನೇರವಾಗಿ ತಾಜ್ ಮಹಲ್ ಹಿಂದೆ ಹರಿಯುವ ಯಮುನ ನದಿ ಸೇರುವುದರಿಂದ ಕೀಟಗಳನ್ನು ನಿಯಂತ್ರಿಸಲೆಂದು ನದಿ ನೀರಿಗೆ ಬಿಡಲಾಗಿದ್ದ ಮೀನುಗಳೂ ಸಾಯುತ್ತಿವೆ’’ ಎಂದವರು ಹೇಳಿದ್ದಾರೆ.

2. ಕೈಗಾರಿಕೆಗಳ ಮಾಲಿನ್ಯ : ಆಗ್ರಾದ ಸುತ್ತಮುತ್ತಲಿರುವ ಹಲವು ಕೈಗಾರಿಕೆಗಳು ಹಾಗೂ ಹತ್ತಿರದಲ್ಲಿಯೇ ಇರುವ ತೈಲಾಗಾರವೊಂದರ ಕಾರ್ಯಾಚರಣೆಯಿಂದ ತಾಜ್ ಮಹಲ್ ನ ಅಮೃತ ಶಿಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಇದಕ್ಕೆ ಪರಿಹಾರವೆಂಬಂತೆ ಭಾರತದ ಪುರಾತತ್ವ ಇಲಾಖೆ ಈ ಹಳದಿಯಾಗಿರುವ ಭಾಗಗಳಿಗೆ ಮತ್ತೆ ಹಾನಿಯಾಗದಂತೆ ‘ಮಣ್ಣಿನ ಪ್ಯಾಕು’ಗಳನ್ನು ಅವುಗಳಿಗೆ ಹಚ್ಚುತ್ತಿದೆ. ಈ ಮಣ್ಣಿನ ಪ್ಯಾಕ್ ಅಥವಾ ಮಡ್ ಪ್ಯಾಕ್ ಚಿಕಿತ್ಸೆಯನ್ನು ತಾಜ್ ಮಹಲ್ ಗೆ 1994, 2001, 2008 ಹಾಗೂ 2014ರಲ್ಲಿ ನೀಡಲಾಗಿದೆ.

3. ಶಾಪಿಂಗ್ ಸೆಂಟರ್ : ತಾಜ್ ಮಹಲ್ ಸಮೀಪ ಶಾಪಿಂಗ್ ಕಾಂಪ್ಲೆಕ್ಸ್ ಯೋಜನೆಯೊಂದನ್ನು ಉತ್ತರ ಪ್ರದೇಶ ಸರಕಾರ 2002ರಲ್ಲಿ ಕೈಗೆತ್ತಿಕೊಂಡಿತ್ತು. ತಾಜ್ ಮಹಲ್ ಸಮೀಪವಿರುವ ಹಲವು ಅಂಗಡಿಗಳನ್ನು ಈ ಶಾಪಿಂಗ್ ಕಾಂಪ್ಲೆಕ್ಸ್ ಗೆ ವರ್ಗಾಯಿಸಿದಲ್ಲಿ ಈ ಸ್ಮಾರಕ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಅನಾನುಕೂಲತೆ ಕಡಿಮೆಯಾಗುವುದು ಎಂಬ ವಾದವನ್ನು ಅಂದಿನ ಮಾಯಾವತಿ ನೇತೃತ್ವದ ಸರಕಾರ ವಾದಿಸಿತ್ತು. ಆದರೆ ಈ ಯೋಜನೆ ಪರಿಸರ ನಿಯಮಗಳನ್ನು ಉಲ್ಲಂಘಿಸುತ್ತಿದೆಯೆಂದು ಪರಿಸರವಾದಿಗಳು ದೂರುತ್ತಿದ್ದಾರೆ.

4. ರುದ್ರಭೂಮಿ : ತಾಜ್ ಮಹಲ್ ಸಮೀಪವಿರುವ ರುದ್ರಭೂಮಿಯಲ್ಲಿ ಶವಗಳನ್ನು ಸುಡುವಾಗ ಉಂಟಾಗುವ ಹೊಗೆಯಿಂದ ತಾಜ್ ಮಹಲ್ ಗೆ ಅಪಾಯವಿದೆಯೆಂದು ರುದ್ರಭೂಮಿಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಕಳೆದ ವರ್ಷ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ 200 ವರ್ಷ ಹಳೆಯದಾದ ರುದ್ರಭೂಮಿಯನ್ನು ಒಂದೋ ಸ್ಥಳಾಂತರಿಸಬೇಕು ಇಲ್ಲವೇ ಅದನ್ನು ವಿದ್ಯುತ್ ಚಿತಾಗಾರವನ್ನಾಗಿ ಬದಲಿಸಬೇಕೆಂದು ನ್ಯಾಯಾಲಯ ಹೇಳಿತ್ತು. ಇದಕ್ಕೆ ರಾಜ್ಯ ಸರಕಾರ ಒಪ್ಪಿದ್ದರೂ ಕೆಲ ಹಿಂದೂ ಸಂಘಟನೆಗಳ ವಿರೋಧದಿಂದಾಗಿ ಅದನ್ನು ಇನ್ನೂ ಸ್ಥಳಾಂತರಗೊಳಿಸಲಾಗಿಲ್ಲ.

5. ಬಾಂಬ್ ಮತ್ತು ಉಗ್ರಗಾಮಿಗಳು : ಉಗ್ರ ಸಂಘಟನೆ ಅಲ್ ಖೈದಾ ತಾಜ್ ಮಹಲ್ ಮೇಲೆ ದಾಳಿ ನಡೆಸುವುದಾಗಿ ಬೆದರಿಸಿದಂದಿನಿಂದ ತಾಜ್ ಮಹಲ್ ನಲ್ಲಿ ಸುರಕ್ಷಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗದೆ.

ಜನವರಿ 2001ರಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ ಸಂಘಟನೆ ತಾಜ್ ಮಹಲ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ನಂತರ ಮತ್ತೆ ಸುರಕ್ಷೆಯನ್ನು ಬಲಪಡಿಸಲಾಗಿದೆ.

ತಾಜ್ ಮಹಲ್ ಮೇಲೆ ದಾಳಿ ನಡೆಸುವುದಾಗಿ ಸಂಘಟನೆ ಕಳುಹಿಸಿದ ಇಮೇಲ್ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿದ್ದರೂ ಎಲ್‌ಇಟಿ ಈ ಆಪಾದನೆಯನ್ನುನಿರಾಕರಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X