Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಬಿಸಿಲ ಬೇಗೆ ತಡೆಯಲಾರದೆ ಸೂರ್ಯನ...

ಬಿಸಿಲ ಬೇಗೆ ತಡೆಯಲಾರದೆ ಸೂರ್ಯನ ವಿರುದ್ಧವೇ ಕೇಸು ಕೊಟ್ಟ ಭೂಪ!

ವಾರ್ತಾಭಾರತಿವಾರ್ತಾಭಾರತಿ25 May 2016 6:36 PM IST
share
ಬಿಸಿಲ ಬೇಗೆ ತಡೆಯಲಾರದೆ ಸೂರ್ಯನ ವಿರುದ್ಧವೇ ಕೇಸು ಕೊಟ್ಟ ಭೂಪ!

ಹೊಸದಿಲ್ಲಿ, ಮೇ 25: ಮಧ್ಯಪ್ರದೇಶದಲ್ಲಿ ಸೂರ್ಯನ ತೀವ್ರ ಉಷ್ಣ ಕಿರಣಗಳಿಂದ ಕಷ್ಟ ಅನುಭವಿಸಿದ ವ್ಯಕ್ತಿಯೊಬ್ಬರು ಸೂರ್ಯನ ವಿರುದ್ಧ ಕೋತ್‌ವಾಲಿ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ನಯಿ ದುನಿಯಾದ ವರದಿ ಪ್ರಕಾರ ಮಾರ್ಚ್ 20ರಂದು ಮೊದಲ ಬಾರಿ ಶಾಜಾಪುರು ಜಿಲ್ಲೆಯಲ್ಲಿ ತಾಪಮಾನ 47.3 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಉಷ್ಣದಿಂದ ಜನರು ಜೀವಜಂತುಗಳು ಪ್ರಭಾವಕ್ಕೊಳಗಾಗಿದ್ದರು. ಮರಗಿಡಗಳು ಕೂಡಾ ತೀಕ್ಷ್ಣ ಬಿಸಿಲಿನಿಂದ ಬಾಡಿಹೋಗಿದ್ದವು. ಇವುಗಳನ್ನು ಸಾಕ್ಷಿಯನ್ನಾಗಿಸಿ ರಾಜಾಪುರ ನಿವಾಸಿ ಶಿವಪಾಲ್ ಸಿಂಗ್"ಭಾಗ್ಯವಾನ್ ಬ್ರಹ್ಮಾಂಡ ನಿವಾಸಿಯಾದ ಸೂರ್ಯನಾರಾಯಣನ " ವಿರುದ್ಧ ಕೋತ್‌ವಾಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪತ್ರದಲ್ಲಿ ಹೀಗೆ ಬರೆಯಲಾಗಿದೆ.

ಇತಿ,

ಶ್ರೀಮಾನ್ ಠಾಣಾ ಪ್ರಭಾರಿ ಮಹೋದಯರೇ

ಕೋತ್‌ವಾಲಿ ಠಾಣೆ-ಶಾಜಾಪುರ(ಮಧ್ಯಪ್ರದೇಶ)

ವಿಷಯ: ಉರಿಯುತ್ತಿರುವ ಬಿಸಿಲಿನಿಂದ ಮಾನಸಿಕ ಮತ್ತು ಶಾರೀರಿಕ ಹಿಂಸೆಗೆ ಸಂಬಂಧಿಸಿದ್ದು

ಮಹೋದಯರೇ, ಮೇಲೆ ತಿಳಿಸಿದ ವಿಷಯದಲ್ಲಿ ನಿವೇದಿಸುವುದೇನೆಂದರೆ, ನಾನು ಶಿವಪಾಲ್ ಸಿಂಗ್, ಶಾಜಾಪುರ ನಿವಾಸಿ. ಒಂದು ವಾರದಿಂದ ಆಕಾಶದಿಂದ ಬೆಂಕಿ ಸುರಿಮಳೆಯಾಗುತ್ತಿದೆ ಆದ್ದರಿಂದ ಮಾನಸಿಕ ಹಾಗೂ ಶಾರೀರಿಕ ರೂಪದಲ್ಲಿ ಕಷ್ಟ ಸಹಿಸಬೇಕಾಗಿದೆ. ಇದಕ್ಕೆ ಕಾರಣನಾದ ಬ್ರಹ್ಮಾಂಡ ನಿವಾಸಿ ಸೂರ್ಯ ನಾರಾಯಣನ ವಿರುದ್ಧ ಭಾರತ ಸಂವಿಧಾನದ ಅನುಸಾರ ಅವಶ್ಯಕ ಕಾನೂನು ಕಲಂನಡಿ ಕ್ರಮ ಕೈಗೊಂಡು ನನಗೆ ಹಾಗೂ ಜನಮಾನಸಕ್ಕೆ ಸಾಂತ್ವನ ಒದಗಿಸಬೇಕೆಂದು ವಿನಂತಿಸುತ್ತಿದ್ದೇನೆ.

ಕಳೆದ ಒಂದು ವಾರದಿಂದ ಶ್ರೀಮಾನ್ ಸೂರ್ಯನಾರಯಣ ತನ್ನ ಮಿತಿಯನ್ನು ಮೀರಿ ಜೀವಿಗಳು ಜೀವಿಸುವುದನ್ನು ದುಷ್ಕರಗೊಳಿಸಿದ್ದಾನೆ. ಮೂಕ ಪಶು,ಪಕ್ಷಿ ದಯಾನೀಯ ಸ್ಥಿತಿಯಲ್ಲಿವೆ. ಮರಗಿಡಗಳು ಉರಿದುಹೋಗುವ ಸ್ಥಿತಿಯಲ್ಲಿರುವುದನ್ನು ಸಾಕ್ಷ್ಯದ ರೂಪದಲ್ಲಿ ತಮ್ಮ ಮುಂದಿರಿಸುತ್ತೇನೆ. ಪ್ರಾರ್ಥನೆಯೇನೆಂದರೆ ಸದ್ಭಾವ ಪೂರ್ವಕವಾಗಿ ವಿಚಾರಿಸಿ ಶಿಕ್ಷಾಪ್ರಕ್ರಿಯೆ ಸಂಹಿತೆ 1973ರ ಕಲಂ 154ರ ಪ್ರಕಾರ ದೂರನ್ನು ಸ್ವೀಕರಿಸಬೇಕೆಂದು ವಿನಂತಿಸುತ್ತಿದ್ದೇನೆ.

ವಿನಯ ಪೂರ್ವಕ, ಇತಿ, ಶಿವಪಾಲ ಸಿಂಗ್  

share
ವಾರ್ತಾಭಾರತಿ
ವಾರ್ತಾಭಾರತಿ
Next Story
X