Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಒಂದು ಟನ್ ನೀರುಳ್ಳಿಗೆ ಸಿಕ್ಕಿದ್ದು ಕೇವಲ...

ಒಂದು ಟನ್ ನೀರುಳ್ಳಿಗೆ ಸಿಕ್ಕಿದ್ದು ಕೇವಲ 1ರೂ.!

ವಾರ್ತಾಭಾರತಿವಾರ್ತಾಭಾರತಿ25 May 2016 11:42 PM IST
share

ಹೊಸದಿಲ್ಲಿ, ಮೇ 25: ಬೆಲೆ ಕಿ.ಗ್ರಾಂಗೆ ರೂ.100ರ ಗಡಿ ದಾಟಿ ಕಳೆದ ವರ್ಷ ಗ್ರಾಹಕರ ಕಣ್ಣಿಂದ ನೀರು ಸುರಿಸಿದ್ದ ನೀರುಳ್ಳಿ, ಇದೀಗ ಬೆಲೆಪಾತಾಳಕ್ಕಿಳಿದು ರೈತನ ಕಣ್ಣಿಂದ ನೀರು ತರಿಸುತ್ತಿದೆ.

ಈ ರೈತ ಜಿಲ್ಲಾ ಕೃಷ್ಯುತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) 1 ಟನ್‌ನಷ್ಟು ನೀರುಳ್ಳಿ ಮಾರಾಟ ಮಾಡಿ ಮನೆಗೆ ಕೊಂಡು ಹೋದುದು ಕೇವಲ 1 ರೂಪಾಯಿ!
 ನೀರುಳ್ಳಿಯ ಬೆಲೆ ಕುಸಿತ ರೈತರನ್ನು ಕಂಗೆಡಿಸಿದೆ. ಈ ಹಂಗಾಮಿನಲ್ಲಿ ಬಂಪರ್ ಬೆಲೆ ಬಂದಿದ್ದರೂ ತನ್ನಂತೆಯೇ ಹಲವು ರೈತರಿಗೆ ಸಿಕ್ಕಿದುದು ‘ಜುಜುಬಿ’ ಕಾಸು ಎಂದು 48ರ ಹರೆಯದ ದೇವಿದಾಸ್ ಪರ್ಭನೆ ಎಂಬ ಈ ರೈತ ಹೇಳುತ್ತಾರೆ.
ಬರಗಾಲ ಪೀಡಿತ ಪ್ರದೇಶಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳನ್ನು ನಾವು ದಿನಾಲೂ ಕೇಳುತ್ತಿದ್ದೇವೆ. ನೀರುಳ್ಳಿ ಬೆಲೆಯು ಪಾತಾಳಕ್ಕೆ ಕುಸಿದಿರುವುದರಿಂದ ತನ್ನಂತಹ ರೈತರ ಭವಿಷ್ಯವು ಅದೇ ರೀತಿಯಾಗಬಹುದೆಂಬ ಕಳವಳವನ್ನು ಕುಟುಂಬಕ್ಕೆ ಏಕೈಕ ಆಧಾರವಾಗಿರುವ ಅವರು ವ್ಯಕ್ತಪಡಿಸುತ್ತಾರೆ.
ಪರ್ಭನೆಗೆ 2 ಎಕ್ರೆ ಕೃಷಿ ಭೂಮಿಯಿದೆ. ಅವರು ರೂ.80 ಸಾವಿರ ಖರ್ಚು ಮಾಡಿ ಅದರಲ್ಲಿ ನೀರುಳ್ಳಿ ಬೆಳೆಸಿದ್ದರು. ಮೇ 10ರಂದು ಪರ್ಭನೆ 18 ಗೋಣಿ ಚೀಲಗಳಲ್ಲಿ 952 ಕಿ.ಗ್ರಾಂ ನೀರುಳ್ಳಿಯನ್ನು ಟ್ರಕ್ಕೊಂದರಲ್ಲಿ ಪುಣೆಯ ಎಪಿಎಂಸಿಗೆ ಕಳುಹಿಸಿದ್ದರು. ಅವರಿಗೆ 10ಕಿ.ಗ್ರಾಂ ನೀರುಳ್ಳಿಗೆ ರೂ. 16ರಂತೆ-ಅಂದರೆ ಕಿ.ಗ್ರಾಂಗೆ ರೂ.1.60ರಂತೆ ಬೆಲೆ ದೊರೆಯಿತು.
ಪರ್ಭನೆಗೆ ಒಟ್ಟು ರೂ.1,523.20 ದೊರೆತವು. ಮಧ್ಯವರ್ತಿ ತನ್ನ ಕಮಿಷನ್ ಎಂದು ರೂ.91.35 ಕಿತ್ತುಕೊಂಡನು. ಕೂಲಿಯಾಗಿ ರೂ.59 ಹಾಗೂ ರೂ.18.55 ಪಾವತಿಸಬೇಕಾಯಿತು. ವಿಶೇಷ ಖರ್ಚೆಯ ರೂ.33.30 ಮುರಿದುಕೊಂಡರು. ಸಾಗಾಟ ಮಾಡಿದ ಟ್ರಕ್ ಚಾಲಕನಿಗೆ ರೂ.1,320 ಬಾಡಿಗೆ ನೀಡಲಾಯಿತು.
 ಇದೆಲ್ಲ ಕಳೆದ ಬಳಿಕ ಪರ್ಭನೆಗೆ ಮನೆಗೊಯ್ಯಲು ಉಳಿದುದು ಕೇವಲ ರೂ.1 ಮಾತ್ರ. ಆ ದಿನ ನೀರುಳ್ಳಿಯ ಬೆಲೆ ಭಾರೀ ಕುಸಿದಿದೆಯೆಂದು ಅವರಿಗೆ ಮಾಹಿತಿ ನೀಡಲಾಗಿತ್ತು.
ತಾನು ಕನಿಷ್ಠ ಕಿ.ಗ್ರಾಂಗೆ ರೂ.3 ಆದರೂ ಸಿಗಬಹುದೆಂದು ಭಾವಿಸಿದ್ದೆ. ಆದರೆ, ಇಷ್ಟೊಂದು ಕಡಿಮೆಗೆ ವ್ಯಾಪಾರವಾದುದರಿಂದ ತನಗೆ ನಿರಾಸೆಯಾಯಿತು ಎಂದು ಪರ್ಭೆನೆ ಅಲವತ್ತುಕೊಂಡಿದ್ದಾರೆ.
ನಾಲ್ಕು ತಿಂಗಳ ಕಾಲ ಬೆಳೆಯ ಬಗ್ಗೆ ಎಚ್ಚರಿಕೆ ವಹಿಸಿದೆ. ಲೋಡ್ ಶೆಡ್ಡಿಂಗ್‌ನ ಸಮಯದಲ್ಲೂ ನೀರುಳ್ಳಿ ಬೆಳೆಗೆ ನೀರುಣಿಸಿದೆ. ಲಾಭಕ್ಕೆ ಮಣ್ಣು ಹಾಕಲಿ! ತಾನು ಬೆಳೆಗೆ ಹಾಕಿದ ಖರ್ಚು ಸಹ ಹುಟ್ಟಲಿಲ್ಲವೆಂದರೆ ಏನು ಮಾಡಬೇಕು? ಎಂದವರು ಪ್ರಶ್ನಿಸುತ್ತಾರೆ.
ರೈತನ ನೋವಿನ ಬಗ್ಗೆ ಎಪಿಎಂಸಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪರ್ಭನೆಯ ನೀರುಳ್ಳಿ ಸಣ್ಣದು ಹಾಗೂ ಕೆಳ ದರ್ಜೆಯದಾಗಿತ್ತೆಂದು ಆತನಿಂದ ಮಾಲು ಖರೀಸಿದ ವ್ಯಾಪಾರಿ ಹೇಳಿದ್ದಾನೆಂದು ಸ್ಥಳೀಯ ಮಾಧ್ಯಮಗಳ ವರದಿ ಮಾಡಿವೆ.
ಇದೇ ವೇಳೆ, ನಾಶಿಕದ ಲಾಸಲ್ಗಾಂವ್‌ನಿಂದ ನೀರುಳ್ಳಿ ವ್ಯಾಪಾರಿಗಳು ಹಾಗೂ ಎಪಿಎಂಸಿ ಸದಸ್ಯರ ನಿಯೋಗವೊಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸರನ್ನು ಭೇಟಿಯಾಗಿ ನೀರುಳ್ಳಿ ಬೆಲೆ ಕುಸಿತದ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X