Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಮಗುವಿನ ಪ್ರಾಣ ಉಳಿಸಲು ಒಂದಾದ ಅತ್ಯಪರೂಪದ...

ಮಗುವಿನ ಪ್ರಾಣ ಉಳಿಸಲು ಒಂದಾದ ಅತ್ಯಪರೂಪದ Bombay negative ರಕ್ತವಿರುವ ಮೂವರು ಮುಂಬೈಗರು

ಇಡೀ ದೇಶದಲ್ಲಿ 20 ಮಂದಿಯಲ್ಲಿ ಮಾತ್ರ ಈ ರಕ್ತ ಇದೆ!

ವಾರ್ತಾಭಾರತಿವಾರ್ತಾಭಾರತಿ26 May 2016 1:20 PM IST
share
ಮಗುವಿನ ಪ್ರಾಣ ಉಳಿಸಲು ಒಂದಾದ ಅತ್ಯಪರೂಪದ Bombay negative ರಕ್ತವಿರುವ ಮೂವರು ಮುಂಬೈಗರು

ಮೂವರು ಮುಂಬೈ ನಿವಾಸಿಗಳು ಜೊತೆಗೂಡಿ ಅಮೂಲ್ಯವಾದ ರಕ್ತವನ್ನು ದಾನ ಮಾಡಿ ಹೈದರಾಬಾದಿನಲ್ಲಿ ಹುಟ್ಟಿದ ಮಗುವನ್ನು ಜೀವಕ್ಕೆ ಮಾರಕವಾದ ಹೃದಯ ರೋಗದಿಂದ ಬಚಾವ್ ಮಾಡಿದ್ದಾರೆ. ಭಾರತದಲ್ಲಿ 20 ಮಂದಿಯಲ್ಲಿ ಮಾತ್ರ ಇದೆ ಎನ್ನಲಾದ ಅತೀ ಅಪರೂಪದ ರಕ್ತದ ಗುಂಪು ಇವರಲ್ಲಿದೆ.

ದೇಶದಾದ್ಯಂತ ನಾಲ್ಕು ದಿನಗಳ ಕಾಲ ವಿಪರೀತ ಹುಡುಕಾಡಿದ ಮೇಲೆ ಬಾಂಬೆ ಬ್ಲಡ್ ಗ್ರೂಪ್ (ನೆಗೆಟಿವ್) ರಕ್ತದ ಮೂರು ಯುನಿಟ್‌ಗಳು ಹೈದರಾಬಾದಿನ ಸ್ಟಾರ್ ಆಸ್ಪತ್ರೆಗೆ ಬಂದಾಗ ಆರು ತಿಂಗಳ ಮಗು ಬಾಬು ಜೀವಕ್ಕೆ ಮಾರಕವಾದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ. ಬಾಂಬೆ ಬ್ಲಡ್ ಗ್ರೂಪ್ ಅತೀ ಅಪರೂಪ. ಇಡೀ ದೇಶದಲ್ಲಿಯೇ 400ಕ್ಕೂ ಕಡಿಮೆ ಮಂದಿ ಇದನ್ನು ಹೊಂದಿರುವ ಸಾಧ್ಯತೆಯಿದೆ. ಆದರೆ ಜೀವಿತವಿದ್ದವರಲ್ಲಿ ಕೇವಲ 20 ಮಂದಿಯಲ್ಲಿ ಈ ರಕ್ತದ ನೆಗೆಟಿವ್ ವಿಧವಿರುವುದು ತಿಳಿದಿದೆ. ಮುಂಬೈನಲ್ಲಿ ಈ ರಕ್ತವನ್ನು ಕೊಡುವ ನಾಲ್ವರು ದಾನಿಗಳಿದ್ದಾರೆ.

ಮಗು ನಾಲ್ಕು ತಿಂಗಳ ಪ್ರಾಯದಲ್ಲಿದ್ದಾಗ ಅಪರೂಪದ ರಕ್ತದ ಗುಂಪು ಇದೆ ಎನ್ನುವುದು ಕುಟುಂಬಕ್ಕೆ ತಿಳಿದಿತ್ತು. ಅದೇ ಸಮಯದಲ್ಲಿ ಮಗುವಿಗೆ ಹೃದಯ ಸಮಸ್ಯೆ ಇರುವುದು ಮತ್ತು ಶುದ್ಧೀಕೃತ ರಕ್ತವು ಹೃದಯದ ತಪ್ಪು ಕಡೆಗೆ ಹೋಗುತ್ತಿರುವುದೂ ತಿಳಿದು ಬಂತು. ಅಪರೂಪದ ರಕ್ತದ ಮಗುವಾಗಿದ್ದರೂ ರೋಗವನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ಅಗತ್ಯವಿತ್ತು. ಜೀವ ಉಳಿಸುವ ಈ ಶಸ್ತ್ರಚಿಕಿತ್ಸೆಗೆ ಕನಿಷ್ಠ ಮೂರು ಯುನಿಟ್ ರಕ್ತವಾದರೂ ಬೇಕಿತ್ತು.

ಕುಟುಂಬ ಆತಂಕದಿಂದ ರಕ್ತಕ್ಕಾಗಿ ಹುಡುಕಾಡಲಾರಂಭಿಸಿತು. ಕುಟುಂಬದಲ್ಲಿ ಯಾರಿಗೂ ಈ ರಕ್ತದ ಗುಂಪು ಇರಲಿಲ್ಲ. ನಗರದಲ್ಲಿ ಹುಡುಕಿದೆವು. ನಿಧಾನವಾಗಿ ದೇಶಕ್ಕೆ ಹುಡುಕಾಟ ವ್ಯಾಪಿಸಿತು. ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಭಾರತದಾದ್ಯಂತ ಸಂಪರ್ಕಿತ ಕೇಂದ್ರಗಳಲ್ಲಿ ವಿಚಾರಿಸಿತು ಎಂದು ಮಗುವಿನ ತಂದೆ ಜಿ ಮೈಕಲ್ ಹೇಳುತ್ತಾರೆ. ಮೈಕಲ್ ದಿನಗೂಲಿ ನೌಕರ. ಅಂತಿಮವಾಗಿ ಥಿಂಕ್ ಫೌಂಡೇಶನ್ ಬಳಿ ಬಾಂಬೆ ಬ್ಲಡ್ ಗ್ರೂಪ್ ದಾನಿಗಳ ದೊಡ್ಡ ನೋಂದಣಿ ಇರುವುದು ತಿಳಿಯಿತು. ಹಿಂದೆಯೂ ನಾವು ಬಾಂಬೆ ಬ್ಲಡ್ ಅನ್ನು ಅನೇಕ ಬಾರಿ ವ್ಯವಸ್ಥೆ ಮಾಡಿದ್ದೇವೆ. ಆದರೆ ಬಾಂಬೆ ನೆಗೆಟಿವ್ ಬೇಡಿಕೆ ದುಃಸ್ವಪ್ನವಾಗಿತ್ತು. ದೇಶದಲ್ಲಿ ನಮಗೆ ತಿಳಿದಿದ್ದ 20 ಮಂದಿಯಲ್ಲಿ ಅಗತ್ಯವಿರುವುದು ತಿಳಿದಾಗ ನಿತೇಶ್ ಖೊಂಡ್ವಿಲ್ಕರ್, ಪ್ರವೀಣ್ ಪಾಟೀಲ್ ಮತ್ತು ಆದೇಶ್ ಗಜಾರೆ ರಕ್ತದಾನಕ್ಕೆ ಮುಂದೆ ಬಂದರು ಎನ್ನುತ್ತಾರೆ ಥಿಂಕ್ ಫೌಂಡೇಶನಿನ ವಿನಯ್ ಶೆಟ್ಟಿ. ಅವರು ವಿಮಾನ ನಿಲ್ದಾಣಕ್ಕೆ ಸಮೀಪವಿರುವ ಬಾಂದ್ರಾದ ಮಹಾತ್ಮಾ ಗಾಂಧಿ ಸೇವಾ ಮಂದಿರ ಬ್ಯಾಂಕಲ್ಲಿ ರಕ್ತ ದಾನ ಮಾಡಿದರು. ಹೃದಯ ತಜ್ಞ ಬಿ.ಜಗನ್ನಾಥ್ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಬಾಬು ಈಗ ಗುಣಮುಖನಾಗುತ್ತಿದ್ದಾನೆ. ಶಸ್ತ್ರಚಿಕಿತ್ಸೆ ಕಷ್ಟವಾಗಿತ್ತು. ರಕ್ತಪರಿಚಲನೆ ಯಂತ್ರದಲ್ಲಿ ನಡೆಯುತ್ತಿರುವಾಗ ರಕ್ತವನ್ನು ದೇಹದಿಂದ ಪೂರ್ಣವಾಗಿ ತೆಗೆಯಬೇಕಿತ್ತು. ಇಂತಹ ಸಮಯದಲ್ಲಿ ರಕ್ತಸ್ರಾವವಾಗುವ ಸಂಭವವಿರುತ್ತದೆ. ಆಗ ರಕ್ತದ ಯುನಿಟುಗಳು ಅಗತ್ಯವಿರುತ್ತದೆ ಎಂದು ಜಗನ್ನಾಥ್ ಹೇಳುತ್ತಾರೆ.

ಕೃಪೆ: http://timesofindia.indiatimes.com/

share
ವಾರ್ತಾಭಾರತಿ
ವಾರ್ತಾಭಾರತಿ
Next Story
X