ಝಿಂಬಾಬ್ವೆ ಪ್ರವಾಸ: ಭಾರತದ ಕೋಚ್ ಆಗಿ ಬಂಗಾರ್ ಆಯ್ಕೆ

ಹೊಸದಿಲ್ಲಿ, ಮೇ 26: ಭಾರತದ ಮಾಜಿ ಆಲ್ರೌಂಡರ್ ಸಂಜಯ್ ಬಂಗಾರ್ ಜೂ.11 ರಿಂದ ಆರಂಭವಾಗಲಿರುವ ಝಿಂಬಾಬ್ವೆ ಪ್ರವಾಸದಲ್ಲಿ ಭಾರತದ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗುರುವಾರ ನೇಮಕಗೊಂಡಿದ್ದಾರೆ.
ಮಾಜಿ ದೇಶೀಯ ಕ್ರಿಕೆಟಿಗ ಅಭಯ್ ಶರ್ಮ ಫೀಲ್ಡಿಂಗ್ ಕೋಚ್ ಆಯ್ಕೆ ಆಯ್ಕೆಯಾಗಿದ್ದಾರೆ. ಝಿಂಬಾಬ್ವೆ ಪ್ರವಾಸ ಕೈಗೊಳ್ಳಲಿರುವ ಭಾರತೀಯ ಕ್ರಿಕೆಟ್ ತಂಡಕ್ಕೆ ಮಾಜಿ ಕ್ರಿಕೆಟಿಗ ಕೊಕ ರಮೇಶ್ ಆಡಳಿತ ಪ್ರಬಂಧಕರಾಗಿರುತ್ತಾರೆ ಎಂದು ಬಿಸಿಸಿಐ ಪ್ರಕಟಿಸಿದೆ.
ಭಾರತ ಜೂ.11 ರಂದು ಮೊದಲ ಏಕದಿನ ಪಂದ್ಯವನ್ನಾಡುವ ಮೂಲಕ ಝಿಂಬಾಬ್ವೆ ಪ್ರವಾಸವನ್ನು ಆರಂಭಿಸಲಿದೆ. ಎಂಎಸ್ ಧೋನಿ ನಾಯಕತ್ವದ ಭಾರತದ ಯುವಕರ ತಂಡ ಝಿಂಬಾಬ್ವೆ ವಿರುದ್ಧ ಮೂರು ಏಕದಿನ ಹಾಗೂ 3 ಟ್ವೆಂಟಿ-20 ಪಂದ್ಯಗಳನ್ನು ಆಡಲಿವೆ.
‘‘ಮೂರು ಏಕದಿನ ಹಾಗೂ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಒಳಗೊಂಡ ಝಿಂಬಾಬ್ವೆ ವಿರುದ್ಧದ ಮುಂಬರುವ ಸೀಮಿತ ಓವರ್ಗಳ ಸರಣಿಗೆ ಸಂಜಯ್ ಬಂಗಾರ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ’’ ಎಂದು ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ತಿಳಿಸಿದ್ದಾರೆ.
Next Story





