ಅವ್ಯವಸ್ಥೆಯ ಆಗರ ಬ್ರಹ್ಮರಕೂಟ್ಲು ಟೋಲ್ಗೇಟ್
ಟ್ರಾಫಿಕ್ಜಾಮ್ಗೆ ಪ್ರಯಾಣಿಕರು ಹೈರಾಣ

ಬಂಟ್ವಾಳ, ಮೇ 26: ಇಲ್ಲಿನ ಬ್ರಹ್ಮರಕೂಟ್ಲು ಟೋಲ್ಗೇಟ್ನಲ್ಲಿ ಇತ್ತೀಚಿನ ಕೆಲವು ವಾರಗಳಿಂದ ನಿರಂತರವಾಗಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ ನಿಂದ ಪ್ರಯಾಣಿಕರು ಇನ್ನಿಲ್ಲದ ತೊಂದರೆ ಅನುಭವಿಸು ವಂತಾಗಿದೆ.
ಟ್ರಾಫಿಕ್ ಜಾಮ್ನಿಂದಾಗಿ ಮೈಲುದ್ದ ನಿಲ್ಲುವ ವಾಹನಗಳ ನಡುವೆ ಆ್ಯಂಬುಲೆನ್ಸ್ ಗಳು, ಅಗ್ನಿಶಾಮಕ ದಳದ ವಾಹನಗಳು ಸೇರಿದಂತೆ ತುರ್ತು ಕಾರ್ಯಕ್ಕೆ ತೆರಳುವ ಪೊಲೀಸರು, ಅಕಾರಿಗಳು, ಸಚಿವರು ಸಿಲುಕಿ ಪರದಾಡುತ್ತಿರುವುದು ಇಲ್ಲಿ ದಿನನಿತ್ಯ ಕಾಣಸಿಗುತ್ತಿದೆ. ಮಂಗಳೂರು-ಬಿ.ಸಿ.ರೋಡ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಅಸ್ತಿತ್ವಕ್ಕೆ ಬಂದ ಬ್ರಹ್ಮರಕೂಟ್ಲು ಟೋಲ್ಗೇಟ್ ಸಾರ್ವಜನಿಕರಿಗೆ ಪ್ರಾರಂಭದಿಂದ ಇಂದಿನವರೆಗೆ ಒಂದಿಲ್ಲೊಂದು ಸಮಸ್ಯೆಯಾಗಿ ಕಾಡುತ್ತಿದೆ.
ಸುಮಾರು ಮೂರು ತಿಂಗಳಿನಿಂದ ಇಲ್ಲಿ ಬೆಳಗ್ಗೆ-ರಾತ್ರಿ ಎನ್ನದೆ ನಿರಂತರವಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ಟೋಲ್ ಪ್ಲಾಝಾದಲ್ಲಿ ಬರೇ ನಾಲ್ಕು ಟೋಲ್ ಸಂಗ್ರಹ ಬೂತ್ಗಳಿದ್ದು ಟೋಲ್ ಸಂಗ್ರಹಕ್ಕೆ ಸಿಬ್ಬಂದಿಯ ಕೊರತೆಯೂ ಇದೆ ಎನ್ನಲಾಗಿದೆ. ಕಡಿಮೆ ಸಂಖ್ಯೆಯ ಬೂತ್ಗಳು ಮತ್ತು ಸಿಬ್ಬಂದಿಯ ಕೊರತೆಯಿಂದಾಗಿ ಟೋಲ್ ಸಂಗ್ರಹದಲ್ಲಾಗುತ್ತಿರುವ ವಿಳಂಬವೇ ಟ್ರಾಫಿಕ್ ಜಾಮ್ಗೆ ಪ್ರಮುಖ ಕಾರಣವಾಗಿದೆ. ಬೇಸಿಗೆ ರಜೆಯಿಂದಾಗಿ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದು ಹಾಗೂ ಮದುವೆ ಮೊದಲಾದ ಶುಭ ಸಮಾರಂಭಗಳು ಅಕ ಸಂಖ್ಯೆಯಲ್ಲಿ ನಡೆಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನಗಳ ಸಂಖ್ಯೆಯೂ ಹೆಚ್ಚಿದೆ. ಟೋಲ್ ಸಂಗ್ರಹದಲ್ಲಾಗುತ್ತಿರುವ ವಿಳಂಬದಿಂದಾಗಿ ಟೋಲ್ ಪ್ಲಾಝಾದ ಎರಡೂ ದಿಕ್ಕಿನ ರಸ್ತೆಗಳಲ್ಲೂ ವಾಹನಗಳು ಕಿಲೋಮೀಟರ್ ಉದ್ದ ಸಾಲುಗಟ್ಟಿ ನಿಲ್ಲಬೇಕಾದ ದುಸ್ಥಿತಿ ಇದೆ. ಬಿಸಿಲ ಝಳದಲ್ಲಿ ಡಾಮರು ರಸ್ತೆಯಲ್ಲಿ ಗಂಟೆಗಳ ಕಾಲ ವಾಹನಗಳು ನಿಲ್ಲುವುದರಿಂದ ಪ್ರಯಾಣಿಕರು ಸೆಕೆಯಿಂದ ಹೈರಾಣಾಗುತ್ತಿದ್ದಾರೆ.
ಕಾರ್ಮಿಕರು, ವಿದ್ಯಾರ್ಥಿಗಳಿಗೆ ಅಡ್ಡಿ:
ಬ್ರಹ್ಮರಕೂಟ್ಲ್ಲು ಟೋಲ್ಬೂತ್ನಿಂದ ಶಾಲೆ, ಕಾಲೇಜಿನ ವಿದ್ಯಾರ್ಥಿಗಳು ಈ ಹಿಂದಿನಿಂದಲೂ ತೊಂದರೆ ಅನುಭವಿಸುತ್ತಿದ್ದಾರೆ. ಸರಕಾರಿ, ಖಾಸಗಿ, ಶಾಲಾ ಬಸ್ಗಳು ಟ್ರಾಫಿಕ್ನಲ್ಲಿ ಸಿಲುಕುವುದರಿಂದ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ತಲುಪಲು ಅಸಾಧ್ಯವಾಗುತ್ತಿದೆ. ಬೇಸಿಗೆ ರಜಾ ಮುಗಿದು ಮುಂದಿನ ವಾರದಲ್ಲಿ ಶಾಲಾ ಕಾಲೇಜುಗಳು ಮತ್ತೆ ಪ್ರಾರಂಭವಾಗಲಿದೆ. ಇಲ್ಲಿನ ಸಮಸ್ಯೆಯನ್ನು ಪರಿಹರಿಸಲು ಅಕಾರಿಗಳು ಮುಂದಾಗದಿದ್ದರೆ ವಿದ್ಯಾರ್ಥಿಗಳು ಇನ್ನಷ್ಟು ಸಮಸ್ಯೆ ಎದುರಿಸಬೇಕಾಗುವುದಂತೂ ಸತ್ಯ. ಹಾಗೆಯೇ ಕೂಲಿ ಕಾರ್ಮಿಕರು ಕೂಡಾ ಇಲ್ಲಿನ ಟ್ರಾಫಿಕ್ನಲ್ಲಿ ಸಿಲುಕುವುದರಿಂದ ಸರಿಯಾದ ಸಮಯಕ್ಕೆ ತಲುಪದೆ ಇಡೀ ದಿನದ ಕೆಲಸವನ್ನು ಕಳೆದುಕೊಳ್ಳುತ್ತಿದ್ದಾರೆ.
ಆದೇಶದ ಮರುದಿನವೇ ಹಂಪ್!
ರಸ್ತೆಯಲ್ಲಿ ಹಂಪ್ಸ್ಗಳನ್ನು ಹಾಕುವುದರಿಂದ ಅವಘಡಗಳ ಸಂಖ್ಯೆ ಹೆಚ್ಚುತ್ತಿರುವುದು ಅಂಕಿಅಂಶದಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎಲ್ಲ ಹಂಪ್ಸ್ಗಳನ್ನು ತಕ್ಷಣವೇ ತೆರವುಗೊಳಿಸಬೇಕೆಂದು ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ಆದೇಶ ಹೊರಡಿ ಸಿತ
್ತು. ಈ ಆದೇಶ ಹೊರಬಿದ್ದ ಮರುದಿನವೇ ಬ್ರಹ್ಮರ ಕೂಟ್ಲ್ಲು ಟೋಲ್ಗೇಟ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ 4 ಬೃಹತ್ ಹಂಪ್ಗಳನ್ನು ನಿರ್ಮಾಣ ಮಾಡಲಾಗಿದೆ! ಆರಂಭದಲ್ಲಿ ಇಲ್ಲಿ ಸಣ್ಣಮಟ್ಟದ ಹಂಪ್ಗಳಿತ್ತು. ಅದು ಸವೆದು ಹೋಗಿದ್ದರಿಂದ ಹೊಸ ಬೃಹತ್ ಹಂಪ್ಸ್ಗಳನ್ನು ನಿರ್ಮಿಸಲಾಗಿದೆ. ಈ ಹಂಪ್ಗಳಿಂ ದಾಗಿ ಇಲ್ಲಿ ದಿನನಿತ್ಯ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಹಂಪ್ಗಳು ಎತ್ತರ ವಾಗಿರುವುದರಿಂದ ಕಾರು, ಆಟೊಗಳ ಅಡಿ ಭಾಗ ತಾಗಿ ಹಾನಿಗೊಳಗಾಗುತ್ತಿವೆ. ಇಷ್ಟೇ ಅಲ್ಲದೆ ಟೋಲ್ಗೇಟ್ನ ಎರಡೂ ದಿಕ್ಕುಗಳಲ್ಲಿ ಸುಮಾರು ನೂರು ಮೀಟರ್ ಅಂತರದಲ್ಲಿ ಒಂದಕ್ಕೊಂದು ತಾಗಿಕೊಂಡು ನಾಲ್ಕೆದು ಹಂಪ್ಗಳಿದ್ದು, ವಾಹನಗಳು ಪ್ರಯಾಸಪಟ್ಟು ಸಾಗುವಂತಾಗಿದೆ!.
ರಾಜಕೀಯ ಪಕ್ಷಗಳೇಕೆ ವೌನ?
ಬ್ರಹ್ಮರಕೂಟ್ಲು ಟೋಲ್ಗೇಟ್ನಲ್ಲಿ ಉಂಟಾಗುತ್ತಿರುವ ನಿರಂತರ ಟ್ರಾಫಿಕ್ ಜಾಮ್ ಬಗ್ಗೆ ರಾಜಕೀಯ ಪಕ್ಷಗಳ ವೌನ ಪ್ರಶ್ನಾರ್ಹ ವಾಗಿದೆ. ರೋಗಿಗಳು, ಆ್ಯಂಬುಲೆನ್ಸ್, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಇಲ್ಲಿ ದಿನನಿತ್ಯ ಪಡುತ್ತಿರುವ ಸಂಕಷ್ಟಗಳನ್ನು ಕಣ್ಣಾರೆ ಕಂಡರೂ ರಾಜಕೀಯ ಪಕ್ಷಗಳ ಮುಖಂಡರು ವೌನವಾಗಿದ್ದಾರೆ.
ಪ್ರತ್ಯೇಕ ಪಥ ಇಲ್ಲದೆ ಆ್ಯಂಬುಲೆನ್ಸ್, ತುರ್ತುಸೇವಾ ವಾಹನಗಳ ಪರದಾಟ
ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ಪ್ಲಾಝಾ ನಿರ್ಮಿಸುವಾಗ ಆ್ಯಂಬುಲೆನ್ಸ್, ಅಗ್ನಿಶಾಮಕ ದಳ ಸೇರಿದಂತೆ ತುರ್ತು ಸೇವಾ ವಾಹನಗಳು ಸೇರಿದಂತೆ ಪೊಲೀಸ್, ಅಕಾರಿಗಳು, ವಿಐಪಿಗಳ ವಾಹನ ಸಂಚರಿಸಲು ಪ್ರತ್ಯೇಕ ಪಥ ನಿರ್ಮಿಸಬೇಕೆಂಬ ನಿಯಮವಿದೆ. ಬ್ರಹ್ಮರಕೂಟ್ಲು ಟೋಲ್ಗೇಟ್ನಲ್ಲಿ ಪ್ರತ್ಯೇಕ ಪಥ ಇಲ್ಲದಿರುವುದರಿಂದ ದಿನನಿತ್ಯ ಆ್ಯಂಬುಲೆನ್ಸ್, ಅಗ್ನಿ ಶಾಮಕ ದಳದ ವಾಹನ, ಪೊಲೀಸರು, ಅಕಾರಿಗಳ ವಾಹನಗಳು ಟ್ರಾಫಿಕ್ನಲ್ಲಿ ಸಿಲುಕುತ್ತಿವೆ. ಪುತ್ತೂರು, ಸುಳ್ಯ, ಉಪ್ಪಿನಂಗಡಿ, ವಿಟ್ಲ, ಧರ್ಮಸ್ಥಳ, ಬೆಳ್ತಂಗಡಿ, ಬಿ.ಸಿ.ರೋಡ್ ಮೊದಲಾದೆಡೆಯಿಂದ ಆಸ್ಪತ್ರೆಗಳಿಂದ ರೋಗಿಗಳನ್ನು ಹಾಗೂ ಅಪಘಾತಗಳಲ್ಲಿ ಗಾಯಗೊಂಡವರನ್ನು ತುರ್ತು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಧಾವಿಸುವ ಆ್ಯಂಬುಲೆನ್ಸ್ಗಳು ಇಲ್ಲಿ ಬಾಕಿಯಾಗುವುದು ದಿನನತ್ಯ ಕಾಣ ಸಿಗುತ್ತಿದೆ!







