ಇರಿತಕ್ಕೊಳಗಾಗಿದ್ದ ಸಿಪಿಎಂ ಕಾರ್ಯಕರ್ತ ಮೃತ್ಯು
ತೃಶೂರ್,ಮೇ 27: ಎಙಂಡಿಯೂರಿನಲ್ಲಿ ಇರಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಿಪಿಎಂ ಕಾರ್ಯಕರ್ತ ಮೃತರಾಗಿದ್ದಾರೆ. ಎಙಂಡಿಯೂರು ಬೆನ್ ವೀಟ್ಟಿಲ್ ಶಶಿಕುಮಾರ್(44) ಮೃತರಾದ ವ್ಯಕ್ತಿ. ಬೆಳಗ್ಗೆ ಐದೂವರೆಗಂಟೆಗೆ ಅವರು ಮೃತರಾದರು ಎಂದು ವರದಿಯಾಗಿದೆ.
ಕಳೆದ ರವಿವಾರ ರಾತ್ರಿ ಹನ್ನೆರಡು ಗಂಟೆಗೆ ಎಙಂಡಿಯೂರು ಪೊಕ್ಕುಳಙರೆ ಸೇತುವೆ ಬಳಿ ಅಕ್ರಮಿಗಳು ದಾಳಿಗೀಡಾಗಿದ್ದರು. ಶಶಿಕುಮಾರ್ ಬೈಕ್ನಲ್ಲಿ ತನ್ನ ಮನೆಗೆ ತೆರಳುತ್ತಿದ್ದಾಗ ತಡೆದು ನಿಲ್ಲಿಸಿ ಅವರನ್ನು ಇರಿದಿದ್ದರು. ಮಾರಣಾಂತಿಕವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ವೈದ್ಯರು ಜೀವ ಉಳಿಸಲಿಕ್ಕಾಗಿ ಅವರ ಕಾಲನ್ನು ಕತ್ತರಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಸ್ಥಳೀಯ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಿಜೆಪಿ ಕಾರ್ಯಕರ್ತರ ಕೃತ್ಯ ಇದೆಂದು ಘಟನೆನಡೆದಂದೇ ಸಿಪಿಎಂ ಆರೋಪಿಸಿತ್ತು.
Next Story