Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಜೀವ ಪಣಕ್ಕಿಟ್ಟು ಸ್ಫೋಟಕ ವಿಮಾನದಿಂದ...

ಜೀವ ಪಣಕ್ಕಿಟ್ಟು ಸ್ಫೋಟಕ ವಿಮಾನದಿಂದ ತಂದೆಯನ್ನು ರಕ್ಷಿಸಿದ ಯುವತಿ

ವಾರ್ತಾಭಾರತಿವಾರ್ತಾಭಾರತಿ27 May 2016 11:22 AM IST
share
ಜೀವ ಪಣಕ್ಕಿಟ್ಟು ಸ್ಫೋಟಕ ವಿಮಾನದಿಂದ ತಂದೆಯನ್ನು ರಕ್ಷಿಸಿದ ಯುವತಿ

ಹೊಸದಿಲ್ಲಿ: ತನ್ನ ಜೀವ ಪಣಕ್ಕಿಟ್ಟು ಸಾಹಸಿ ಯುವತಿಯೊಬ್ಬಳು ಸ್ಫೋಟಿಸುತ್ತಿದ್ದ ವಿಮಾನದಿಂದ ತಂದೆಯನ್ನು ರಕ್ಷಿಸಿದ ಘಟನೆ ಮಂಗಳವಾರ ನಡೆದಿದೆ.

ನೋಯ್ಡ ಮೂಲದ 23 ವಯಸ್ಸಿನ ಜೂಹಿ ರಾಯ್ ಈ ಸಾಹಸಿ ಯುವತಿ. ಈ ವಿಮಾನ ಆಂಬ್ಯುಲೆನ್ಸ್ ಏರುವ ಮುನ್ನ, ಪ್ರಜ್ಞಾಹೀನರಾಗಿರುವ ತಂದೆಯ ಜತೆ ಕುಳಿತು ತಾನು ಕೂಡಾ ಸಾವಿನ ಮನೆಯ ಕದ ತಟ್ಟಬೇಕಾಗುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ತೀವ್ರ ಅಸ್ವಸ್ಥರಾಗಿದ್ದ ಈಕೆಯ ತಂದೆಯನ್ನು ಬೀಚ್‌ಕ್ರಾಫ್ಟ್ ಕಿಂಗ್ ಏರ್ ಸಿ-90 ಅವಳಿ ಎಂಜಿನ್ ವಿಮಾನ ಆಂಬ್ಯುಲೆನ್ಸ್ ಮೂಲಕ ಪಾಟ್ನಾದಿಂದ ದೆಹಲಿಗೆ ಕರೆ ತರಲಾಗುತ್ತಿತ್ತು. ಇಬ್ಬರು ಪೈಲಟ್‌ಗಳು ಸೇರಿದಂತೆ ಇತರ ಆರು ಮಂದಿ ವಿಮಾನದಲ್ಲಿದ್ದರು. ಗುರಗಾಂವ್‌ನ ಖಾಸಗಿ ಆಸ್ಪತ್ರೆಯೊಂದಕ್ಕೆ ಜೂಹಿಯ ತಂದೆಯನ್ನು ಸಾಗಿಸುತ್ತಿದ್ದ ವಿಮಾನ ನಜಾಫ್‌ಗಢ ಬಳಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು.

ವಿಮಾನ ದೆಹಲಿಗೆ ಸಮೀಪಿಸುತ್ತಿದ್ದಂತೆ ಪೈಲಟ್ ದಿಢೀರನೇ, ವಿಮಾನದಲ್ಲಿದ್ದ ವೈದ್ಯರಿಗೆ, ವಿಮಾನದ ಒಂದು ಎಂಜಿನ್ ಹಾಳಾಗಿದೆ ಎಂದು ಮಾಹಿತಿ ನೀಡಿದರು. ಆಗ ಒಂದು ಕ್ಷಣ ಏನು ಮಾಡಬೇಕು ಎಂದೇ ತೋಚಲಿಲ್ಲ ಎಂದು ಜೂಹಿ ಘಟನೆಯ ಬಳಿಕ ವಿವರಿಸಿದರು.

ಒರಟು ನೆಲದಲ್ಲಿ ದಿಢೀರನೇ ವಿಮಾನ ಇಳಿದ ಕಾರಣ ಸೀಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದವು ಹಾಗೂ ವಿಮಾನ ಭೀಕರ ಸದ್ದಿನೊಂದಿಗೆ ದಿಢೀರನೇ ನಿಂತಿತು. ಏನಾಗುತ್ತಿದೆ ಎಂದು ಕಣ್ಣು ಬಿಡುವಷ್ಟರಲ್ಲಿ, ಎಲ್ಲರೂ ತಕ್ಷಣ ವಿಮಾನದಿಂದ ಕೆಳಕ್ಕೆ ಇಳಿಯುವಂತೆ ಪೈಲಟ್ ಕೂಗಿ ಹೇಳಿದ. ಪೈಲಟ್ ಬಾಗಿಲು ತೆರೆದಾಗ, ಜೂಹಿ ಹಾಗೂ ಆಕೆಯ ತಂದೆ ಬಿಟ್ಟು ಉಳಿದ ಎಲ್ಲರೂ ಹೊರಬಂದರು.

"ವಿಮಾನ ಭೂಸ್ಪರ್ಶವಾಗುವ ವೇಳೆ, ಅಸ್ವಸ್ಥ ತಂದೆ ಸ್ಟ್ರೆಚರ್‌ನಿಂದ ಕೆಳಕ್ಕೆ ಬಿದ್ದಿದ್ದರು. ಅವರನ್ನು ಆ ಸ್ಥಿತಿಯಲ್ಲಿ ಬಿಟ್ಟು ನಾನು ತಪ್ಪಿಸಿಕೊಳ್ಳುವಂತಿರಲಿಲ್ಲ. ಇಂಧನ ಸೋರಿಕೆಯಿಂದ ಸ್ಫೋಟ ಸಂಭವಿಸಬಹುದು ಎಂದು ಪೈಲಟ್ ಮತ್ತೆ ಎಚ್ಚರಿಕೆ ನೀಡಿದ. ಆದರೂ ತಂದೆಯ ಜತೆಗೇ ಜೂಹಿ ಕುಳಿತೇ ಇದ್ದಳು. ಕೊನೆಗೆ ಒಬ್ಬ ಪೈಲಟ್ ಇವರ ರಕ್ಷಣೆಗೆ ಧಾವಿಸಿದ. ಆತನ ಸಹಾಯದಿಂದ ತಂದೆಯನ್ನು ಸ್ಟ್ರೆಚರ್‌ನಲ್ಲಿ ವಿಮಾನದಿಂದ ಹೊರತಂದಳು. ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ, ಯುವತಿ ಮತ್ತೆ ವಿಮಾನದ ಒಳಕ್ಕೆ ಹೋಗಿ ತಂದೆಯ ಜೀವರಕ್ಷಕ ಆಮ್ಲಜನಕ ಸಿಲಿಂಡರ್ ತರುವ ಸಾಹಸ ಮೆರೆದಳು. ಇಷ್ಟು ಸಾಲದೆಂಬಂತೆ ತಂದೆಯ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಹಾಗೂ ಹಣವನ್ನು ವಾಪಾಸು ತರುವಲ್ಲಿ ಯುವತಿ ಯಶಸ್ವಿಯಾದಳು. ಯುವತಿಗೆ ಸಣ್ಣಪುಟ್ಟ ಗಾಯಗಳಾಗಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X