ಅನುಪಮ್ ಖೇರ್ ವಿರುದ್ಧ ನಾಸಿರುದ್ದೀನ್ ಶಾ ವಾಗ್ದಾಳಿ
'ಕಾಶ್ಮೀರದಲ್ಲಿ ಎಂದೂ ಇಲ್ಲದಿದ್ದ ವ್ಯಕ್ತಿಗೆ ಈಗ ಕಾಶ್ಮೀರಿ ಪಂಡಿತರ ಚಿಂತೆ'
ಹೊಸದಿಲ್ಲಿ, ಮೇ 28: ಕಾಶ್ಮೀರಿ ಪಂಡಿತರನ್ನು ತಾನು ಪ್ರತಿನಿಧಿಸುತ್ತಿರುವುದಾಗಿ ಹೇಳಿಕೆ ನೀಡಿರುವ ಅನುಪಮ್ ಖೇರ್ ವಿರುದ್ಧ ಹಿರಿಯ ನಟ ನಾಸಿರುದ್ದೀನ್ ಶಾ ವಾಗ್ದಾಳಿ ನಡೆಸಿದ್ದಾರೆ.
ಕಾಶ್ಮೀರದಲ್ಲಿ ಎಂದೂ ಇಲ್ಲದಿದ್ದ ವ್ಯಕ್ತಿಗೆ ಈಗ ಕಾಶ್ಮೀರಿ ಪಂಡಿತರ ಚಿಂತೆ ಯಾಕೆ ಎಂದು ಅವರು ಲೇವಡಿ ಮಾಡಿದ್ದಾರೆ.
ಅನುಪಮ್ ಖೇರ್ ಎಂದೂ ಕಾಶ್ಮೀರದಲ್ಲಿ ವಾಸವಾಗಿರಲಿಲ್ಲ. ಅವರ ಪರವಾಗಿ ಹೋರಾಡಿದ ನಿದರ್ಶನವೂ ಇಲ್ಲ. ಇದೀಗ ದಿಢೀರನೆ, ನಿರಾಶ್ರಿತರಾಗಿದ್ದಾರೆ ಎಂದು ಅವರು ಕುಟುಕಿದ್ದಾರೆ. ವೈಟಿಂಗ್ ಚಿತ್ರದ ಪ್ರಚಾರಕ್ಕಾಗಿ ಅವರು ಹೊಸದಿಲ್ಲಿಗೆ ಆಗಮಿಸಿದ್ದರು.
ಕೆಲ ಪಠ್ಯಪುಸ್ತಕಗಳಲ್ಲಿ ಮಾಡಿರುವ ಬದಲಾವಣೆಯ ವಿರುದ್ಧವೂ ನಾಸಿರುದ್ದೀನ್ ಶಾ ಧ್ವನಿ ಎತ್ತಿದ್ದಾರೆ. ಆದರೆ ಕತ್ತಲ ಯುಗದತ್ತ ದೇಶವನ್ನು ಕೊಂಡೊಯ್ಯುವಷ್ಟು ಮೂರ್ಖ ಸರ್ಕಾರ ನಮ್ಮದಲ್ಲ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
Next Story