ಕಣ್ಣೂರು: ಒಂದೇ ಕುಟುಂಬದ 5 ಮಕ್ಕಳು ನದಿಯಲ್ಲಿ ಮುಳುಗಿ ಮೃತ್ಯು! ಒಬ್ಬ ಇನ್ನೂ ನಾಪತ್ತೆ!

ಕಾಸರಗೋಡು ಮೇ 28:ಸ್ನಾನಕ್ಕಿಳಿದ ಐವರು ವಿದ್ಯಾರ್ಥಿಗಳು ಮ್ರತಪಟ್ಟ ಘಟನೆ ಶನಿವಾರ ಸಂಜೆ ಕಣ್ಣೂರಿನ ಪಯ್ಯವೂರಿನಲ್ಲಿ ನಡೆದಿದೆ.
ಪಯ್ಯವೂರು ತಿರೂರಿನ ಒರಿಜಾ (13), ಮಾಣಿಕ್ (13), ಆಯಲ್ ( 7) ಸಬಾನ್ ( 7) ಅಖಿಲ್ ( 5) ಮ್ರತಪಟ್ಟವರು. ಪಯ್ಯವೂರು ಹೊಳೆಗೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ಘಟನೆ ನಡೆದಿದೆ.
ಆರು ಮಂದಿ ಸ್ನಾನಕ್ಕಿಳಿದಿದಿದ್ದು, ಓರ್ವನನ್ನು ರಕ್ಷಿಸಲಾಗಿದೆ . ಓರ್ವ ವಿದ್ಯಾರ್ಥಿ ನೀರಿನಲ್ಲಿ ಮುಳುಗಿದ ಸಂದರ್ಭದಲ್ಲಿ ರಕ್ಷಿಸಲೆತ್ನಿಸಿದ ಉಳಿದ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಈ ಘಟನೆ ನಡೆದಿದೆ.
ಮ್ರತಪಟ್ಟವರು ಒಂದೇ ಕುಟುಂಬದವರು ಎನ್ನಲಾಗಿದೆ. ಸಂಜೆ ನಾಲ್ಕು ಗಂಟೆ ಸುಮಾರಿಗೆ ಘಟನೆ ನದೆದಿದೆ. ಬೊಬ್ಬೆ ಕೇಳಿ ಸ್ಥಳೀಯರು ದಾವಿಸಿ ಬಂದು ಐವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ . ಮೃತದೇಹಗಳನ್ನು ಪರಿಯಾರಂ ವೈದ್ಯಕೀಯ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಷ್ಟೇ
Next Story





