Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್...

ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ಚಾಂಪಿಯನ್

ವಾರ್ತಾಭಾರತಿವಾರ್ತಾಭಾರತಿ29 May 2016 11:43 PM IST
share
ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ಚಾಂಪಿಯನ್

 ಬೆಂಗಳೂರು, ಮೇ 29: ಡೇವಿಡ್ ವಾರ್ನರ್ ಅವರ ಸಮರ್ಥ ನಾಯಕತ್ವ ಹಾಗೂ ಬೆನ್ ಕಟ್ಟಿಂಗ್ ಆಲ್‌ರೌಂಡ್ ಆಟದ ನೆರವಿನಿಂದ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 8 ರನ್ ಸೋಲಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 9ನೆ ಆವೃತ್ತಿಯ ಐಪಿಎಲ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ರವಿವಾರ ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಹೈ-ಸ್ಕೋರ್ ಪಂದ್ಯದಲ್ಲಿ ಗೆಲುವಿಗೆ 209 ರನ್ ಗುರಿ ಪಡೆದಿದ್ದ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಚೊಚ್ಚಲ ಐಪಿಎಲ್ ಟ್ರೋಫಿ ಜಯಿಸಿದ ಹೈದರಾಬಾದ್ 20 ಕೋಟಿ.ರೂ. ಬಹುಮಾನ ಜಯಿಸಿದರೆ, ಮೂರನೆ ಬಾರಿ ರನ್ನರ್-ಅಪ್ ಪ್ರಶಸ್ತಿ ಪಡೆದ ಬೆಂಗಳೂರು ತಂಡ 11 ಕೋಟಿ ರೂ. ಜೇಬಿಗಿಳಿಸಿತು.

  ಕಠಿಣ ಸವಾಲು ಪಡೆದಿದ್ದ ಅರ್‌ಸಿಬಿಗೆ ಕ್ರಿಸ್ ಗೇಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಭದ್ರಬುನಾದಿ ಹಾಕಿಕೊಟ್ಟರು. ಈ ಜೋಡಿ 10.3 ಓವರ್‌ಗಳಲ್ಲಿ 114 ರನ್ ಗಳಿಸಿತು. 25 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ ನೆರವಿನಿಂದ ಅರ್ಧಶತಕ ಸಿಡಿಸಿದ್ದ ಗೇಲ್ ಆರ್‌ಸಿಬಿಗೆ ಬಿರುಸಿನ ಆರಂಭವನ್ನೇ ನೀಡಿದ್ದರು. 76 ರನ್(38 ಎಸೆತ, 4 ಬೌಂಡರಿ, 8 ಸಿಕ್ಸರ್)ಗಳಿಸಿದ್ದ ಗೇಲ್‌ಗೆ ಆಲ್‌ರೌಂಡರ್ ಕಟ್ಟಿಂಗ್ ಕಂಟಕವಾದರು.

ಗೇಲ್ ನಿರ್ಗಮನದ ಬೆನ್ನಿಗೆ ಡಿವಿಲಿಯರ್ಸ್(5) ಔಟಾದರು. 32 ಎಸೆತಗಳಲ್ಲಿ 50 ರನ್ ಗಳಿಸಿದ ಕೊಹ್ಲಿ ಉತ್ತಮ ಫಾರ್ಮ್ ಮುಂದುವರಿಸಿದರು. ಆದರೆ, ಕೊಹ್ಲಿ ರನ್ ಕೊಯ್ಲಿಗೆ ಸ್ರಾನ್ ಕಡಿವಾಣ ತೊಡಿಸಿದರು. ರಾಹುಲ್(11) ಹಾಗೂ ಶೇನ್ ವ್ಯಾಟ್ಸನ್(11) ನಿರಾಸೆಗೊಳಿಸಿದರು. 2009 ಹಾಗೂ 2011ರಲ್ಲೂ ರನ್ನರ್‌ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದ ಬೆಂಗಳೂರು ಈವರ್ಷವೂ ಪ್ರಶಸ್ತಿ ವಂಚಿತವಾಯಿತು.

ಹೈದರಾಬಾದ್‌ನ ಪರ ಬೌಲಿಂಗ್‌ನಲ್ಲಿ ಕಟ್ಟಿಂಗ್(2-35) ಯಶಸ್ವಿ ಬೌಲರ್ ಎನಿಸಿಕೊಂಡರು.

  ಹೈದರಾಬಾದ್ 208/7: ಟಾಸ್ ಜಯಿಸಿದ ಹೈದರಾಬಾದ್ ತಂಡದ ನಾಯಕ ವಾರ್ನರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಈ ವರ್ಷ 9ನೆ ಅರ್ಧಶತಕ ಬಾರಿಸಿದ ವಾರ್ನರ್(69ರನ್, 38 ಎಸೆತ) ಹಾಗೂ ಆಲ್‌ರೌಂಡರ್ ಬೆನ್ ಕಟ್ಟಿಂಗ್(ಔಟಾಗದೆ 39, 15 ಎಸೆತ, 3 ಬೌಂಡರಿ, 4 ಸಿಕ್ಸರ್)ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಲು ನೆರವಾದರು.

ಇನಿಂಗ್ಸ್ ಆರಂಭಿಸಿದ ವಾರ್ನರ್(69ರನ್, 38 ಎಸೆತ, 8 ಬೌಂಡರಿ, 3 ಸಿಕ್ಸರ್) ಹಾಗೂ ಶಿಖರ್ ಧವನ್(28) 6.4 ಓವರ್‌ಗಳಲ್ಲಿ 63 ರನ್ ಸೇರಿಸಿ ಎಚ್ಚರಿಕೆಯ ಆರಂಭ ನೀಡಿದರು.

  ವಾರ್ನರ್ ಕೇವಲ 24 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್‌ಗಳ ಸಹಾಯದಿಂದ ಈ ವರ್ಷ 9ನೆ ಅರ್ಧಶತಕ ಬಾರಿಸಿದರು. ಐಪಿಎಲ್ ಇತಿಹಾಸದಲ್ಲಿ 800ಕ್ಕೂ ಅಧಿಕ ರನ್(848) ಗಳಿಸಿದ ಎರಡನೆ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಯುವರಾಜ್ ಸಿಂಗ್(38, 23 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ದೀಪಕ್ ಹೂಡ(3) ನಾಲ್ಕನೆ ವಿಕೆಟ್‌ಗೆ 22 ರನ್ ಸೇರಿಸಿದ್ದರು. ಈ ಇಬ್ಬರು ಆಟಗಾರರು ಬೆನ್ನಿ ಬೆನ್ನಿಗೆ ಔಟಾದರು. ಆಗ ಸನ್‌ರೈಸರ್ಸ್ ಸ್ಕೋರ್ 5 ವಿಕೆಟ್ ನಷ್ಟಕ್ಕೆ 148 ರನ್.

ವ್ಯಾಟ್ಸನ್ ಎಸೆದ ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 24 ರನ್ ಗಳಿಸಿದ ಆಲ್‌ರೌಂಡರ್ ಬೆನ್ ಕಟ್ಟಿಂಗ್ ಹೈದರಾಬಾದ್ ಸ್ಕೋರನ್ನು 200ರ ಗಡಿ ದಾಟಿಸಿದರು. ಅಂತಿಮ 3 ಓವರ್‌ಗಳಲ್ಲಿ 57 ರನ್ ಕಲೆ ಹಾಕಿದ ಹೈದರಾಬಾದ್ 7 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಲು ಶಕ್ತವಾಯಿತು.

ಬೆಂಗಳೂರಿನ ಬೌಲಿಂಗ್ ವಿಭಾಗದಲ್ಲಿ ಸ್ಥಳೀಯ ಆಟಗಾರ ಶ್ರೀನಾಥ್ ಅರವಿಂದ್(2-30), ಇಂಗ್ಲೆಂಡ್‌ನ ಜೋರ್ಡನ್(3-45) ಯಶಸ್ವಿ ಬೌಲರ್ ಎನಿಸಿಕೊಂಡರು. ಶೇನ್ ವ್ಯಾಟ್ಸನ್ 61 ರನ್ ಬಿಟ್ಟುಕೊಟ್ಟು ದುಬಾರಿ ಬೌಲರ್ ಎನಿಸಿಕೊಂಡರು.

ಕಳೆದ 2ನೆ ಕ್ವಾಲಿಫೈಯರ್ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್‌ರನ್ನು ಆಡುವ 11ರ ಬಳಗಕ್ಕೆ ವಾಪಸಾದರು. ಇನ್ನುಳಿದಂತೆ ತಂಡದಲ್ಲಿ ಯಾವುದೇ ದೊಡ್ಡ ಬದಲಾವಣೆಯಾಗಿಲ್ಲ.

ಸ್ಕೋರ್ ವಿವರ

ಸನ್‌ರೈಸರ್ಸ್ ಹೈದರಾಬಾದ್

20 ಓವರ್‌ಗಳಲ್ಲಿ 208/7

ವಾರ್ನರ್ ಸಿ ಅಬ್ದುಲ್ಲಾ ಬಿ ಅರವಿಂದ್ 69

ಧವನ್ ಸಿ ಜೋರ್ಡನ್ ಬಿ ಚಾಹಲ್ 28

ಹೆನ್ರಿಕ್ಸ್ ಸಿ ಚಾಹಲ್ ಬಿ ಜೋರ್ಡನ್ 04

ಯುವರಾಜ್ ಸಿ ವ್ಯಾಟ್ಸನ್ ಬಿ ಜೋರ್ಡನ್ 38

ಹೂಡ ಸಿ ಕೊಹ್ಲಿ ಬಿ ಅರವಿಂದ್ 03

ಕಟ್ಟಿಂಗ್ ಔಟಾಗದೆ 39

ನಮನ್ ಓಜಾ ರನೌಟ್ 07

 ಬಿಪುಲ್ ಸಿ ಚಾಹಲ್ ಬಿ ಜೋರ್ಡನ್ 05

ಭುವನೇಶ್ವರ್ ಔಟಾಗದೆ 01

ಇತರ 14

ವಿಕೆಟ್ ಪತನ: 1-63, 2-97, 3-125, 4-147, 5-148, 6-158,7-174

ಬೌಲಿಂಗ್ ವಿವರ:

ಶ್ರೀನಾಥ್ ಅರವಿಂದ್ 4-0-30-2

ಕ್ರಿಸ್ ಗೇಲ್ 3-0-24-0

 ಶೇನ್ ವ್ಯಾಟ್ಸನ್ 4-0-61-0

ಯುಝ್ವೇಂದ್ರ ಚಾಹಲ್ 4-0-35-1

ಇಕ್ಬಾಲ್ ಅಬ್ದುಲ್ಲಾ 1-0-10-0

ಕ್ರಿಸ್ ಜೋರ್ಡನ್ 4-0-45-3

ರಾಯಲ್ ಚಾಲೆಂಜರ್ಸ್‌ ಬೆಂಗಳೂರು

20 ಓವರ್‌ಗಳಲ್ಲಿ 200/7

ಕ್ರಿಸ್‌ಗೇಲ್ ಸಿ ಬಿಪುಲ್ ಬಿ ಕಟ್ಟಿಂಗ್ 76

ವಿರಾಟ್ ಕೊಹ್ಲಿ ಬಿ ಸ್ರಾನ್ 54

ಡಿವಿಲಿಯರ್ಸ್ ಸಿ ಹೆನ್ರಿಕ್ಸ್ ಬಿ ಬಿಪುಲ್ 05

ರಾಹುಲ್ ಬಿ ಕಟ್ಟಿಂಗ್ 11

ಶೇನ್ ವ್ಯಾಟ್ಸನ್ ಸಿ ಹೆನ್ರಿಕ್ಸ್ ಬಿ ರಹ್ಮಾನ್ 11

ಸಚಿನ್ ಬೇಬಿ ಔಟಾಗದೆ 18

ಬಿನ್ನಿ ರನೌಟ್ 09

ಜೋರ್ಡನ್ ರನೌಟ್ 03

ಅಬ್ದುಲ್ಲಾ ಔಟಾಗದೆ 04

ಇತರ 09

ವಿಕೆಟ್ ಪತನ: 1-114, 2-140, 3-148, 4-160, 5-164, 6-180,7-194 ಬೌಲಿಂಗ್ ವಿವರ:

ಭುವನೇಶ್ವರ ಕುಮಾರ್ 4-0-25-0

ಬರಿಂದರ್ ಸ್ರಾನ್ 3-0-41-1

ಕಟ್ಟಿಂಗ್ 4-0-35-2

ಮುಸ್ತಫಿಝರ್ರಹ್ಮಾನ್ 4-0-37-1

ಹೆನ್ರಿಕ್ಸ್ 3-0-40-0

ಬಿಪುಲ್ ಶರ್ಮ 2-0-17-1

share
ವಾರ್ತಾಭಾರತಿ
ವಾರ್ತಾಭಾರತಿ
Next Story
X