Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. *ಮೋದಿ ಸರಕಾರದ ಜನಪರ ಆಡಳಿತಕ್ಕೆ...

*ಮೋದಿ ಸರಕಾರದ ಜನಪರ ಆಡಳಿತಕ್ಕೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ

ವಾರ್ತಾಭಾರತಿವಾರ್ತಾಭಾರತಿ29 May 2016 11:58 PM IST
share
*ಮೋದಿ ಸರಕಾರದ ಜನಪರ ಆಡಳಿತಕ್ಕೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ

     
*ಮೋದಿ ಸರಕಾರದ ಜನಪರ ಆಡಳಿತಕ್ಕೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ  

ಎಸ್.ಎಲ್.ಭೈರಪ್ಪ, ಸಾಹಿತಿ 

ಆ ಬಗ್ಗೆಯೇ ಒಂದು ಕಾದಂಬರಿ ಬರೆದು ಬಿಡಿ.

---------------------

     ಪ್ರಿಯಾಂಕಾ ಗಾಂಧಿ ಕಾಂಗ್ರೆಸ್‌ನ ಅಧ್ಯಕ್ಷರಾದರೆ ಆಗ ಬಿಜೆಪಿ ನಿಜಕ್ಕೂ ಕಠಿಣ ಸವಾಲು ಎದುರಿಸಬೇಕಾಗುತ್ತದೆ

 ಬಾಬಾ ರಾಮ್‌ದೇವ್, ಯೋಗ ಗುರು

ರಾಬರ್ಟ್ ವಾದ್ರಾಗೆ ಯೋಗ ಗುರು ಆಗಿ ಬಿಟ್ಟರೆ ನಿಮ್ಮ ಸಮಸ್ಯೆ ಮುಗಿಯುತ್ತದೆ.

---------------------

ನಾನು ಸ್ಪಷ್ಟವಾಗಿ ಹೇಳುತ್ತೇನೆ ನನಗೆ ಈ ಮೊದಲು ಮದುವೆಯಾಗಿತ್ತು ಎಂಬುದು ಸುಳ್ಳು.

 ಲುಲಿಯಾ ವೆಂಟುರ್, ಸಲ್ಮಾನ್ ಪ್ರೇಯಸಿ

ಮದುವೆ ಮಾತ್ರ ಆಗಿರಲಿಲ್ಲ ಎನ್ನುತ್ತಿದ್ದೀರಿ.

---------------------

 ಸೋನಿಯಾ ಇಲ್ಲದಿದ್ದರೆ ಕಾಂಗ್ರೆಸ್ ಹೋಳಾಗುತ್ತಿತ್ತು

 ವೆಂಕಯ್ಯ ನಾಯ್ಡು, ಕೇಂದ್ರ ಸಚಿವ

ಮೋದಿ ಇಲ್ಲದಿದ್ದರೆ ಬಿಜೆಪಿ ಬೋಳಾಗುತ್ತಿತ್ತು ಎನ್ನುವ ಮಾತಿದೆ.

--------------------

ರಾಜಕೀಯದಲ್ಲಿರುವ ನಮ್ಮದೂ ಒಂದು ಯಕ್ಷಗಾನ

 ಯು.ಟಿ.ಖಾದರ್, ಆರೋಗ್ಯ ಸಚಿವ

ಕೋಡಂಗಿ ವೇಷ ಮಾತ್ರ ನನಗೇ ಬೇಕು ಎಂದರಂತೆ ಸಿಎಂ ಇಬ್ರಾಹೀಂ.

---------------------

 ಎಸಿಬಿಯಿಂದ ಭ್ರಷ್ಟಾಚಾರ ನಿಗ್ರಹ ಅಸಾಧ್ಯ

 ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತ

ಆ ಕಾರಣಕ್ಕೆ ಅದರ ಮೇಲೆ ಸರಕಾರಕ್ಕೆ ಪ್ರೀತಿ.

---------------------

 ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಯದು ಮಂತ್ರಕ್ಕಿಂತ ಉಗುಳು ಜಾಸ್ತಿ

 ಎಸ್.ಎಂ.ಕೃಷ್ಣ, ಕಾಂಗ್ರೆಸ್ ನಾಯಕ

ಆದರೆ ಉಗುಳಿದ್ದು ಕಾಂಗ್ರೆಸ್‌ಗೆ ತಾನೆ. ಅದೇ ಅವರ ತೃಪ್ತಿ.

---------------------

ರಾಜ್ಯಸಭೆ ಚುನಾವಣೆಯಲ್ಲಿ ಹೊರ ರಾಜ್ಯದವರಿಗೆ ಟಿಕೆಟ್ ನೀಡುವುದು ತಪ್ಪಲ್ಲ

ಸಿ.ಟಿ.ರವಿ, ಶಾಸಕ

ತಪ್ಪು ನಿಮ್ಮಂತಹ ಒಳರಾಜ್ಯದವರನ್ನು ಶಾಸಕರಾಗಿ ಆಯ್ಕೆ ಮಾಡಿದ್ದು.

---------------------

ಈಗಿನ ರಾಜಕಾರಣಿಗಳು ‘ಗೂಳಿ’ಗಳಿದ್ದಂತೆ. ಸಿಕ್ಕಿದ್ದನ್ನು ತಿನ್ನುವುದು, ಸಿಕ್ಕವರನ್ನು ತಿವಿಯುವುದು ಇವರ ಕೆಲಸ

 ರಮೇಶ್ ಕುಮಾರ್, ಶಾಸಕ

ಲೋಕಾಯುಕ್ತ ಎನ್ನುವ ಕಸಾಯಿಖಾನೆಯ ಅಗತ್ಯವನ್ನು ಇದು ಹೇಳುತ್ತಿದೆ.

---------------------

 ಪೂಜಾರಿ ಸಂಸದರಾಗಿದ್ದರೆ ಎತ್ತಿನಹೊಳೆ ಯೋಜನೆ ರದ್ದಾಗುತ್ತಿತ್ತು

 ಯು.ಟಿ.ಖಾದರ್, ಆರೋಗ್ಯ ಸಚಿವ

     ಅಂದರೆ ಈ ಜನ್ಮದಲ್ಲಿ ಪೂಜಾರಿ ಸಂಸದರಾಗುವುದಿಲ್ಲ, ಎತ್ತಿನಹೊಳೆ ರದ್ದಾಗುವುದಿಲ್ಲ.

--------------------

ಇಂದಿನ ರಾಜಕಾರಣಿಗಳಿಗಿಂತ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ ಉತ್ತಮ ಎನಿಸುತ್ತಿದೆ

ಪಿ.ಜಿ.ಆರ್.ಸಿಂಧ್ಯಾ, ಮಾಜಿ ಸಚಿವ

 ನಿಮಗೋಸ್ಕರ ಮತ್ತೊಮ್ಮೆ ತುರ್ತುಪರಿಸ್ಥಿತಿ ಹೇರಲು ಮೋದಿ ಸಿದ್ಧತೆ ನಡೆಸುತ್ತಿದ್ದಾರೆ. ಚಿಂತೆ ಬಿಡಿ.

---------------------

 ಭಾರತ ಕಂಡ ಕಳಂಕ ರಹಿತ ಪ್ರಧಾನಿ ಎಂದರೆ ಅದು ಮೋದಿ

ಸಬರಾನಂದ, ಅಸ್ಸಾಂ ಸಿಎಂ

ತೋಳಕ್ಕೆ ನರಿ ಸಾಕ್ಷಿ.

---------------------

ಯಡಿಯೂರಪ್ಪ ಜೈಲಿಗೆ ಹೋಗಿದ್ದ ಬಗ್ಗೆ ಜನತೆಗೆ ಅಸಮಾಧಾನವಿದೆ

 ಸಿದ್ದರಾಮಯ್ಯ, ಮುಖ್ಯಮಂತ್ರಿ

ದೇಶದ ಸ್ವಾತಂತ್ರಕ್ಕಾಗಿ ಜೈಲಿಗೆ ಹೋಗಿದ್ದು ಎಂದು ಯಡಿಯೂರಪ್ಪ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರಂತೆ.

--------------------

ಪ್ರಜಾಪ್ರಭುತ್ವವೆಂದರೆ ಸಹಭಾಗಿತ್ವ

ನರೇಂದ್ರ ಮೋದಿ, ಪ್ರಧಾನಿ

ಬಹುಶಃ ಆರೆಸ್ಸೆಸ್‌ನ ಸಹಭಾಗಿತ್ವದ ಬಗ್ಗೆ ಹೇಳಿರಬೇಕು.

--------------------

ಬಿಜೆಪಿ ಮತ್ತು ಕಾಂಗ್ರೆಸ್ ಗಂಡ, ಹೆಂಡತಿಯರಂತೆ

ಅರವಿಂದ್ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ

ವಿವಾಹ ನಡೆಸಿಕೊಟ್ಟ ಪುರೋಹಿತ ನೀವೇ ಎನ್ನುವುದು ದೇಶದ ನಂಬಿಕೆ.

--------------------

ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ತಲೆ ತಿರುಕ

ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಬಿಜೆಪಿಯೊಳಗಿನ ತಲೆಹಿಡುಕರಿಗಿಂತ ವಾಸಿ.

--------------------

ಸಚಿವ ಆಂಜನೇಯ ‘ವೇಶ್ಯಾವಾಟಿಕೆ’ ಎಂಬ ಪದ ಪ್ರಯೋಗಿಸಿದ್ದು ತಪ್ಪು

ಉಮಾಶ್ರೀ, ಸಚಿವೆ

ಹೌದು. ವೇಶ್ಯೆಯರಿಗೆ ಅದರಿಂದ ತುಂಬಾ ಅವಮಾನವಾಗಿದೆ.

--------------------

ಹಿರೋಶಿಮಾ ದಾಳಿಗೆ ಕ್ಷಮೆ ಕೇಳುವುದಿಲ್ಲ

 ಬರಾಕ್ ಒಬಾಮ, ಅಮೆರಿಕ ಅಧ್ಯಕ್ಷ

ಅದಕ್ಕಿಂತಲೂ ಭೀಕರ ದಾಳಿಗಳಿಗೆ ಕ್ಷಮೆ ಕೇಳಬೇಕಾಗುತ್ತದೆ ಎಂಬ ಭಯವೇ?

---------------------

ಕೆಲವೊಂದು ಸಲ ಸಣ್ಣ ಇರುವೆ ಕೂಡಾ ದೊಡ್ಡ ಆನೆಗೆ ತೊಂದರೆ ಕೊಡಬಲ್ಲದು

 ಹರೀಶ್ ರಾವತ್, ಉತ್ತರಾಖಂಡ ಮುಖ್ಯಮಂತ್ರಿ

ಅಂತೂ, ಮೋದಿಯನ್ನು ಆನೆ ಎಂದು ಒಪ್ಪಿಕೊಂಡಿರಿ.

---------------------

ರಾಜ್ಯಸಭೆ ರಾಜಕೀಯ ಪುನರ್ವಸತಿ ಕೇಂದ್ರವಲ್ಲ

ಬರಗೂರು ರಾಮಚಂದ್ರಪ್ಪ, ಸಾಹಿತಿ

ಅದೂ ನಿವೃತ್ತ ಸಾಹಿತಿಗಳ ಪುನರ್ವಸತಿ ಕೇಂದ್ರ ಎನ್ನಬಹುದೇ?

---------------------

* ಭಾರತ ಶಾಂತಿ ಮತ್ತು ಸಮೃದ್ಧಿಗೆ ಹೆಸರಾಗಿರುವ ದೇಶ

ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ

ಇದು ಭೂತಕಾಲ. ಇದನ್ನು ವರ್ತಮಾನ ಕಾಲಕ್ಕೆ ಪರಿವರ್ತಿಸಿ ಹೇಳಿ.

---------------------

* ಪಾತಕಿ ದಾವೂದ್ ಇಬ್ರಾಹೀಮ್‌ನನ್ನು ಶೀಘ್ರವೇ ಬಂಧಿಸಿ ಭಾರತಕ್ಕೆ ಕರೆತರಲಾಗುವುದು

ರಾಜನಾಥ್ ಸಿಂಗ್, ಕೇಂದ್ರ ಸಚಿವ

ಅದಕ್ಕಾಗಿ ಬಜರಂಗದಳದ ಸಹಾಯ ಪಡೆಯಲಾಗುತ್ತದೆಯೇ?

---------------------

ದೇಶದಲ್ಲಿ ಅತ್ಯಾಚಾರ ಘಟನೆಗಳು ಹೆಚ್ಚುತ್ತಿರುವುದಕ್ಕೆ ನೆಹರೂ, ಗಾಂಧಿ ಕುಟುಂಬಗಳು ಕಾರಣ

ಜ್ಞಾನದೇವ್ ಅಹುಜಾ, ರಾಜಸ್ಥಾನ ಬಿಜೆಪಿ ಶಾಸಕ

ಅವರು ಅಧಿಕಾರದಲ್ಲಿಲ್ಲದೇ ಇರುವುದೇ ಕಾರಣ ಎನ್ನುತ್ತಿದ್ದೀರಾ?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X