ಜಿಶಾ ಕೊಲೆ ಪ್ರಕರಣ: ಸಿಬಿಐ ತನಿಖೆ ಕುರಿತ ಅರ್ಜಿ ಇಂದು ಹೈಕೋರ್ಟ್ ಪರಿಗಣನೆಯಲ್ಲಿ
ಕೊಚ್ಚಿ,ಮೇ 30: ಜಿಶಾ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೊಪ್ಪಿಸಬೇಕೆಂದು ಆಗ್ರಹಿಸಿ ಸಲ್ಲಿಸಲಾದ ಅರ್ಜಿ ಇಂದು ಹೈಕೋರ್ಟ್ನಲ್ಲಿ ಪರಿಗಣನೆ ಬರಲಿದೆ. ಚೀಫ್ ಜಸ್ಟಿಸ್ ಅಧ್ಯಕ್ಷರಾಗಿರುವ ಪೀಠದಲ್ಲಿ ಕೇಸು ಪರಿಗಣನೆಗೆ ಬರಲಿದೆ. ವಕೀಲರಾದ ಟಿ.ಬಿ.ಮಣಿ ಹಾಗೂ ಕಾನೂನು ವಿದ್ಯಾರ್ಥಿನಿ ಅಜೇಶ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಇಂದು ಪರಿಗಣಿಸುತ್ತಿದೆ.
ಕೇಸು ತನಿಖೆಯ ಮೊದಲ ಹಂತದಲ್ಲಿ ನಿರ್ಲಕ್ಷ್ಯವಾಗಿದೆ ಹಾಗೂ ಆರೋಪಿಗಳನ್ನು ಬಂಧಿಸಲು ಈ ವರೆಗೂ ಸಾಧ್ಯವಾಗಿಲ್ಲ ಎಂಬುದನ್ನು ಎತ್ತಿ ಹಿಡಿದು ಹೈಕೋರ್ಟ್ಗೆ ಇವರು ಅರ್ಜಿ ಸಲ್ಲಿಸಿದ್ದರು. ತನಿಖೆಯಲ್ಲಿ ನಿರ್ಲಕ್ಷ್ಯವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಅಜೇಶ್ ಹೈಕೋರ್ಟ್ನ್ನು ಸಂಪರ್ಕಿಸಿದ್ದರು.
ಈ ಮೊದಲು ಕೇಸನ್ನು ಸಿಬಿಐಗೆ ವಹಿಸಿಕೊಡಬೇಕೆಂದು ಆಗ್ರಹಿಸಿದ್ದ ಇವರ ಅರ್ಜಿಯನ್ನು ಮೇ ಆರರಂದು ಕೋರ್ಟ್ ಪರಿಗಣಿಸಿತ್ತು. ಆದರೆ ಹೈಕೋರ್ಟ್ ಕೇಸು ತನಿಖೆ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು ಹಾಗೂ ತನಿಖೆಯ ಪ್ರಗತಿಗೆ ಸಂಬಂಧಿಸಿದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ತನಗೆ ಸಲ್ಲಿಸಬೇಕೆಂದು ಅದು ತನಿಖಾಧಿಕಾರಿಗಳಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಕೋರ್ಟ್ ಪುನಃ ಇಂದು ಪರಿಗಣವಿಸುತ್ತಿದೆ
ಇದೇ ವೇಳೆ ಕೇಸು ತನಿಖೆಯ ಪ್ರಗತಿ ಕುರಿತ ವರದಿಯನ್ನು ತನಿಖಾ ತಂಡ ಇಂದು ಕೋರ್ಟ್ಗೆ ಸಲ್ಲಿಸಲಿದೆ.