ರಸ್ತೆ ಅಗಲೀಕರಣ, ಹಂಪ್ ನಿರ್ಮಿಸುವ ಕುರಿತು ಡಿಸಿಗೆ ಮನವಿ

ಅಂಕೋಲಾ, ಮೇ 30: ಕೇಣಿ ರಸ್ತೆಯ ಅಗಲೀಕರಣ ಮತ್ತು ಹಂಪ್ ನಿರ್ಮಿಸುವುದರ ಕುರಿತು ಜಿಲ್ಲಾಧಿಕಾರಿಯವರಿಗೆ ತಹಶೀಲ್ದಾರ್ ಮೂಲಕ ಕೇಣಿ ಗ್ರಾಮಸ್ಥರು ಸೋಮವಾರ ಮನವಿ ಸಲ್ಲಿಸಿದರು. ಮನವಿಯಲ್ಲಿ ಹೇಳಿದಂತೆ ಪುರಸಭೆ ವ್ಯಾಪ್ತಿಯಲ್ಲಿ ಬರುವ ಕೇಣಿ ಭಾಗದ ಪ್ರದೇಶದ ರಸ್ತೆ ಅಗಲೀಕರಣ ಹಾಗೂ ಕೇಣಿಯ ವಿವೇಕಾನಂದ ಮೈದಾನವು ಕೇಣಿ ಬೇಲೇಕೇರಿ ರಸ್ತೆಗೆ ಹೊಂದಿಕೊಂಡಿರುವುದರಿಂದ ಮೈದಾನದಲ್ಲಿ ಮಕ್ಕಳು ಹಾಗೂ ಯುವಕರು ಆಟ ಆಡುತ್ತಿರುತ್ತಾರೆ. ಕೇಣಿಯ ಮೈದಾನಕ್ಕೆ ಹೊಂದಿಕೊಂಡ ರಸ್ತೆಗೆ ಎರಡು ಕಡೆಗಳಲ್ಲಿ ಹಂಪ್ ನಿರ್ಮಿಸುವ ಅವಶ್ಯಕತೆ ಇರುತ್ತದೆ. ಈ ಕುರಿತು ಪುರಸಭೆ ಮುಖ್ಯಾಧಿಕಾರಿಯವರಿಗೆ ಮನವಿ ಮೂಲಕ ತಿಳಿಸಿದ್ದು, ಮುಂದಾ ಗುವ ಅವಘಡ ಹಾಗೂ ಅಪಘಾತಗಳ ಬಗ್ಗೆ ಮುನ್ನೆಚ್ಚರಿಕೆಗಾಗಿ ಮನವಿ ಸಲ್ಲಿಸಿದ್ದೇವೆ. ತಾವು ದಯಮಾಡಿ ನಮ್ಮ ಮನವಿಗೆ ಸ್ಪಂದಿಸಿ ಶೀಘ್ರದಲ್ಲಿ ಹಂಪ್ ನಿರ್ಮಿಸಿಕೊಡಬೇಕಾಗಿ ವಿನಂತಿಸಲಾಗಿದೆ. ಇಲ್ಲವಾದಲ್ಲಿ ಅನಿವಾರ್ಯವಾಗಿ ಊರ ನಾಗರಿಕರು ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ತಹಶೀಲ್ದಾರ್ ವಿ.ಜಿ.ಲಾಂಜೇಕರ ಮನವಿ ಸ್ವೀಕರಿಸಿದರು, ಸುದೀಪ್ ಎ.ಬಂಟ ಮನವಿ ಓದಿದರು. ಈ ಸಂದರ್ಭದಲ್ಲಿ ರಾಜು ಬಂಟ, ಗಜಾನನ ಬಂಟ, ರಘು ಬಂಟ, ಗೌರೀಶ್ ಬಂಟ, ವಿಘ್ನೇಶ್ವರ ಬಂಟ, ಪ್ರಸನ್ನ ನಾಯ್ಕ, ಅರವಿಂದ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.





