ಪೊಲೀಸರ ಪ್ರತಿಭಟನೆ ಸರಿಯಲ್ಲ: ಜಯಪ್ರಕಾಶ್ ಹೆಗ್ಡೆ
ಉಡುಪಿ, ಮೇ 31: ರಾಜ್ಯಾದ್ಯಂತ ಪೊಲೀಸರ ಪ್ರತಿಭಟನೆಗೆ ಕಾರಣವಾಗಿರುವ ವೇತನ ತಾರತಮ್ಯ, ಪೊಲೀಸ್ ವಸತಿಗೃಹ ಗಳಿಗೆ ಮೂಲಸೌಕರ್ಯಗಳ ಕೊರತೆ, ಕರ್ತವ್ಯದ ವೇಳೆಯನ್ನು 8 ಗಂಟೆಗೆ ಸೀಮಿತಗೊಳಿಸುವಿಕೆ ಮುಂತಾದವುಗಳು ನಿಜಕ್ಕೂ ಸಮಂಜಸವಾದ ಬೇಡಿಕೆಗಳಾಗಿವೆ. ಈ ಕುರಿತು ಸರಕಾರ ಪೊಲೀಸರ ಬೇಡಿಕೆಗಳನ್ನು ಆಲಿಸಿ, ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಪೊಲೀಸರು ಪ್ರತಿಭಟನೆಗಿಳಿದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಅಥವಾ ಆಡಳಿತ ಏರುಪೇರುಗೊಳ್ಳುವ ಅಪಾಯ ವಿದೆ. ಸರಕಾರದ ಒಂದು ಪ್ರಮುಖ ಅಂಗವಾಗಿರುವ ಪೊಲೀಸ್ ಇಲಾಖೆ ಯಾವುದೇ ಕಾರಣಕ್ಕೂ ಪ್ರತಿಭಟನೆಗೆ ಮುಂದಾಗಬಾರದು. ಸೌಹಾದರ್ಯುತ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮುಂದಾಗಬೇಕು ಎಂದು ಹೆಗ್ಡೆ ಹೇಳಿಕೆಯಲ್ಲಿ ಕರೆ ನೀಡಿದ್ದಾರೆ.
ನಿಯಮ ಸಡಿಲಗೊಳಿಸಿ
94ಸಿ ಹಾಗೂ 94ಸಿಸಿ ಅಡಿಯಲ್ಲಿ ಈಗಾಗಲೇ ಮಂಜೂರಾ ಗಿರುವ ಭೂಮಿಗೆ ದರವನ್ನು ಕಡಿಮೆಗೊಳಿಸಲಾಗಿದೆ ಎಂದು ಜನಪ್ರತಿನಿಗಳು ಪತ್ರಿಕಾ ಹೇಳಿಕೆ ನೀಡುತ್ತಿದ್ದಾರೆ. ಆದರೆ ಇಂತಹ ಯಾವುದೇ ಆದೇಶಗಳು ಈ ತನಕ ತಾಲೂಕು ಕಚೇರಿ ಅಥವಾ ಜಿಲ್ಲಾಕಾರಿ ಕಚೇರಿಯನ್ನು ತಲುಪಿಲ್ಲ ಎಂದವರು ತಿಳಿಸಿದ್ದಾರೆ.
ಸರಕಾರಗಳು ನಿಯಮಗಳನ್ನು ಜಟಿಲಗೊಳಿಸಿರುವುದೇ ಭ್ರಷ್ಟಾಚಾರ ಮಿತಿಮೀರಲು ಕಾರಣವಾಗಿದೆ ಎಂದು ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.







