ಕಾಸರಗೋಡು: ಬಸ್ ಪ್ರಯಾಣಿಕೆಯ ಚಿನ್ನಾಭರಣ ಕಳವು
ಕಾಸರಗೋಡು, ಜೂ.1: ಬಸ್ ಪ್ರಯಾಣಿಕೆಯ ಹತ್ತು ಪವನ್ ಚಿನ್ನಾಭರಣ ಕಳವಾದ ಘಟನೆ ಬದಿಯಡ್ಕ ದಲ್ಲಿ ನಡೆದಿದೆ. ಬುಧವಾರ ಬೆಳಗ್ಗೆ ಮುಳ್ಳೇರಿಯ ದಿಂದ ಬದಿಯಡ್ಕ ಕ್ಕೆ ಖಾಸಗಿ ಬಸ್ ನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಮುಳ್ಳೇರಿಯ ಅಡ್ಕದ ರೇಖಾ ಚಿನ್ನಾಭರಣ ಕಳಕೊಂಡವರು ಎಂದು ಗುರುತಿಸಲಾಗಿದೆ. ಬ್ಯಾಗ್ ನಲ್ಲಿದ್ದ ಚಿನ್ನಾಭರಣವನ್ನು ಕಳವು ಮಾಡಲಾಗಿದೆ. ತನ್ನ ಮಗುವಿನ ಜೊತೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದ್ದು , ಬದಿಯಡ್ಕಕ್ಕೆ ತಲುಪಿದಾಗ ಚಿನ್ನಾಭರಣ ಕಳವಾಗಿರುವುದು ರೇಖಾಳ ಗಮನಕ್ಕೆ ಬಂದಿದೆ. ಕೂಡಲೇ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ .
Next Story





