‘ಮಹಾ’ಸಚಿವ ಖಾಡ್ಸೆ ಪದಚ್ಯುತಿಗೆ ಆಗ್ರಹಿಸಿ ದಮಾನಿಯಾ ನಿರಶನ
ಮುಂಬೈ,ಜೂ.2: ಮಹಾರಾಷ್ಟ್ರದ ಕಂದಾಯ ಸಚಿವ ಏಕನಾಥ ಖಾಡ್ಸೆ ವಿರುದ್ಧದ ಭ್ರಷ್ಟಾಚಾರ ಆರೋಪಗಳ ವಿಚಾರಣೆ ಮತ್ತು ಹುದ್ದೆಯಿಂದ ಅವರ ವಜಾಕ್ಕೆ ಆಗ್ರಹಿಸಿ ಮಾಜಿ ಆಪ್ ನಾಯಕಿ ಅಂಜಲಿ ದಮಾನಿಯಾ ಅವರು ಗುರುವಾರ ಇಲ್ಲಿಯ ಆಝಾದ್ ಮೈದಾನದಲ್ಲಿ ನಿರಶನ ಸತ್ಯಾಗ್ರಹವನ್ನು ಆರಂಭಿಸಿದರು.
ಖಾಡ್ಸೆ ವಿರುದ್ಧ ಹಲವಾರು ಭ್ರಷ್ಟಾಚಾರ ಆರೋಪಗಳಿವೆ ಮತ್ತು ಸರಕಾರವು ಅವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಬೇಕು. ತನ್ನ ಮುಷ್ಕರಕ್ಕೆ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಝಾರೆಯವರ ಆಶೀರ್ವಾದವೂ ಇದೆ ಎಂದ ದಮಾನಿಯಾ, ಖಾಡ್ಸೆ ವಿರುದ್ಧ ತನಿಖೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿಗಳು ಲಿಖಿತ ಭರವಸೆ ನೀಡುವವರೆಗೂ ನಿರಶನವನ್ನು ನಿಲ್ಲಿಸುವುದಿಲ್ಲ ಎಂದರು.
Next Story