Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮನುಷ್ಯ ಶರೀರದಲ್ಲಿ ಆರು ಕೋಟಿ...

ಮನುಷ್ಯ ಶರೀರದಲ್ಲಿ ಆರು ಕೋಟಿ ಜಿನೋಮ್‌ಗಳನ್ನು ಕೃತಕವಾಗಿ ಸಂಯೋಜಿಸಲಿರುವ ವಿಜ್ಞಾನ ಜಗತ್ತು

ಹತ್ತು ವರ್ಷಗಳಲ್ಲಿ ಇಚ್ಛಿಸುವ ಗುಣವಿರುವ ಕೃತಕ ಮನುಷ್ಯನು ಉಂಟಾಗಲಿರುವನೇ?

ವಾರ್ತಾಭಾರತಿವಾರ್ತಾಭಾರತಿ3 Jun 2016 6:15 PM IST
share
ಮನುಷ್ಯ ಶರೀರದಲ್ಲಿ ಆರು ಕೋಟಿ ಜಿನೋಮ್‌ಗಳನ್ನು ಕೃತಕವಾಗಿ ಸಂಯೋಜಿಸಲಿರುವ ವಿಜ್ಞಾನ ಜಗತ್ತು

ಮಾನವ ದೇಹದ ಸಂಪೂರ್ಣ ಜೀವಕೋಶಗಳನ್ನುಹತ್ತು ವರ್ಷಗಳಲ್ಲಿ ಕೃತಕವಾಗಿ ಮರುಸೃಷ್ಟಿ ಮಾಡುವ ಯೋಜನೆಯನ್ನು ವಿಜ್ಞಾನಿಗಳು ಘೊಷಿಸಿದ್ದಾರೆ. ಮನುಷ್ಯನ ಶರೀರದೊಳಗೆ ಆರು ಕೋಟಿ ಜಿನೋಮ್‌ಗಳನ್ನು ಕೃತಕವಾಗಿ ಸಂಯೋಜಿಸುವ ಪ್ರಯತ್ನಕ್ಕೆ ವಿಜ್ಞಾನ ಜಗತ್ತು ಚಾಲನೆ ನೀಡಿದೆ. ಇದು ಯಶಸ್ವಿಯಾದರೆ ಹತ್ತುವರ್ಷಗಳಲ್ಲಿ ಇಷ್ಟವಿರುವ ಗುಣವನ್ನು ಹೊಂದಿರುವ ಕೃತಕ ಮನುಷ್ಯನನ್ನು ಸೃಷ್ಟಿಸಬಹುದು ಎಂಬ ನಿರೀಕ್ಷೆಗೆ ಇದೀಗ ರೆಕ್ಕೆಪುಕ್ಕಗಳು ಬಂದಂತಾಗಿದೆ.ಮನುಷ್ಯ ದೇಹದ ಡಿಎನ್‌ಎಯಲ್ಲಿರುವ ಆರು ಕೋಟಿ ಜಿನೊಮ್‌ಗಳನ್ನು ಮರುಸೃಷ್ಟಿಸುವಂತಹ ಸಂಪೂರ್ಣ ಜಟಿಲವಾದ ಯೋಜನೆ ಇದಾಗಿದೆ. ಈ ಯೋಜನೆ ಯಶಸ್ವಿಯಾಗಿ ಮುಂದೆ ಸಾಗಿತ್ತೆಂದಾದರೆ ಕ್ಯಾನ್ಸರ್‌ನಂತಹ ರೋಗಗಳಿರುವ ಅವಯವಗಳನ್ನು ತೆಗೆದು ಅಲ್ಲಿಗೆ ಕೃತಕ ಅವಯವಗಳನ್ನು ಇಡಬಹುದು ಎಂಬ ಅಧ್ಯಯನ ಇದೀಗ ನಿರ್ಣಾಯಕ ಹಂತದಲ್ಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಜೊತೆಗೆ ತಾವು ಬಯಸುವಂತಹ ಗುಣಸ್ವಭಾವ ಇರುವ ಡಿಸೈನ್ಡ್ ಶಿಶುಗಳನ್ನು ಕೃತಕವಾಗಿ ಉತ್ಪಾದಿಸಲು ಹೊಸ ಸಂಶೋಧನೆಗೆ ಸಾಧ್ಯವಿದೆ ಎಂಬ ನಿರೀಕ್ಷೆ ಹಾಗೂ ಆತಂಕ ಈಗ ನೆಲೆಯಾಗಿದೆ. ಈ ರೀತಿ ಕೃತಕವಾಗಿ ನಿರ್ಮಿಸಲಾಗುವ ಡಿಎನ್‌ಎಯನ್ನು ಒಂದು ಜೀವವಿರುವ ಕೋಶಕ್ಕೆ ಇಂಪ್ಲಾಂಟ್ ಮಾಡಲು ಸಾಧ್ಯ ಎಂಬುದು ವಿಜ್ಞಾನಿಗಳ ನಿರೀಕ್ಷೆಯಾಗಿದೆ.ಇದು ಯಶಸ್ವಿಯಾದರೆ ವಿಜ್ಞಾನಿಗಳಿಗೆ ಮನುಷ್ಯ ಜೀವ ಕೋಶವನ್ನು ಕೃತಕವಾಗಿ ಸಂಪೂರ್ಣ ತಮ್ಮ ವಿನ್ಯಾಸ ಪ್ರಕಾರ ನಿರ್ಮಿಸಲು ಸಾಧ್ಯ ಎಂಬ ಭರವಸೆ ಇದೆ. ಹ್ಯೂಮನ್ ಜೆನೋಂ ಪ್ರಾಜೆಕ್ಟರೈಟ್(ಎಚ್‌ಜಿಪಿರೈಟ್) ಎಂದು ಯೋಜನೆಗೆ ಹೆಸರು ಇರಿಸಲಾಗಿದೆ. ಈ ಯೋಜನೆ ಮೂಲಕ ಅಧ್ಯಯನಕ್ಕಾಗಿ ಸಿಂತೆಟಿಕ್ ಜೀನ್‌ಗಳನ್ನು ಕ್ರೋಮೋಝೋಮ್‌ಗಳನ್ನು ನಿರ್ಮಿಸಲು ಸಂಶೋಧಕರಿಗೆ ಅವಕಾಶ ಸಿಗಲಿದೆ. ಇದರಲ್ಲಿ ಕ್ರೋಮೋಝೋಮ್ 21 ಇವೆ. ಡಾರ್ವಿನ್ ಸಿಂಡ್ರೋಮ್‌ಗೆ ಪ್ರತಿಕ್ರಿಯಿಸುವ ಒಂದು ಎಕ್ಸ್‌ಟ್ರಾ ಕಾಪಿ ಇದಾಗಿದೆ.ಆದರೆ ಈ ಸಂಶೋಧನೆಯ ಪರಿಣಾಮ ದೂರವ್ಯಾಪಕ ಬಳಕೆಗೆ ದೊರಕಲಿದೆ ಎಂದು ಭಾವಿಸಲಾಗಿದೆ. ಎಬೋ, ಝಿಕಾದಂತಹ ರೋಗಗಳ ವಿರುದ್ಧ ಪ್ರತಿರೋಧಕಗಳನ್ನು ಬೆಳೆಸಲು, ಕ್ಯಾನ್ಸರ್ ಪ್ರತಿರೋಧಕ್ಕೆ ಕೋಶಗಳನ್ನು ಲ್ಯಾಬ್‌ನಲ್ಲಿ ತಯಾರಿಸುವುದು ಮುಂತಾದ ವಿಷಯಗಳಲ್ಲಿ ಇದು ಕ್ರಾಂತಿಕಾರಿಯಾದ ಪ್ರಗತಿಯನ್ನು ತಂದು ಕೊಡಲಿದೆ ಎಂದು ಈಗ ನಿರೀಕ್ಷಿಸಲಾಗಿದೆ.

ವಿಜ್ಞಾನದ ಹೊಸಬೆಳವಣಿಗೆಯ ಕುರಿತು ವಿಜ್ಞಾನಿಗಳು ನಿನ್ನೆ ಲೇಖನ ಬರೆದಿದ್ದಾರೆ. ಮನುಷ್ಯ ಜಿನೋಮ್‌ಗೆ ಸಂಬಂಧಿಸಿ ಮುಂದಿನ ಘಟ್ಟಕ್ಕೆ ಇಟ್ಟ ಹೆಜ್ಜೆ ಇದೆಂದು ಅವರು ಪ್ರತಿಪಾದಿಸಿದ್ದಾರೆ. ನ್ಯೂಯಾರ್ಕ್ ಯುನಿವರ್ಸಿಟಿಯ ಪ್ರೋ. ಜೆಫ್ ಬಾಯ್ಕಾ ಹೊಸ ಯೋಜನೆಗೆ ನೇತೃತ್ವವನ್ನು ನೀಡುತ್ತಿದ್ದಾರೆ.ಎಚ್‌ಜಿಪಿರೈಟ್ ಒಂದು ಸಹಜ ಪ್ರಗತಿಯಾಗಿದೆ ಎಂದು ಇದಕ್ಕೆ ಸಂಬಂಧಿಸಿದ ಸಂಶೋಧನೆ ಈಗ ರೀಡಿಂಗ್ ಮೋಡ್‌ನಿಂದ ರೈಟಿಂಗ್ ಮೋಡಿಗೆ ಬದಲಾಗಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.

ಜಿನೋಮ್ ಎಡಿಟ್ಟಿಂಗ್‌ಗೆ ಸಂಬಂಧಿಸಿ ಕಳೆದ ತಿಂಗಳು ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ರಹಸ್ಯ ಸಭೆ ನಡೆದಿತ್ತು. ಆನಂತರ ಇದರ ಬಗ್ಗೆ ಹೊಸ ಪೇಪರ್‌ನ್ನು ರಂಗಕ್ಕಿಳಿಸಲಾಗಿದೆ. ವಿಜ್ಞಾನಿಗಳು, ವಕೀಲರು, ಸರಕಾರಿ ಅಧಿಕಾರಿಗಳು ಸೇರಿದ್ದ ಸಭೆಯಿಂದ ಪತ್ರಕರ್ತರನ್ನು ದೂರ ಇರಿಸಲಾಗಿತ್ತು. ಮನುಷ್ಯ ಕೋಶದೊಳಗೆ ಲ್ಯಾಬ್‌ನಲ್ಲಿ ನಿರ್ಮಿಸುವ ಇಂಜಿನಿಯರಿಂಗ್ ಆದ ಮನುಷ್ಯ ನಿರ್ಮಿತ ಜಿನೋಮ್‌ಗಳ ತಯಾರಿ ಖರ್ಚು ಕಡಿಮೆ ಮಾಡುವುದಕ್ಕಾಗಿ ಈ ಗುಂಪು ರೂಪುರೇಷೆ ಸಿದ್ಧಪಡಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X