Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇದು ಪಂಚತಾರಾ ಹೊಟೇಲ್ ಅಲ್ಲ, ನ್ಯೂಡೆಲ್ಲಿ...

ಇದು ಪಂಚತಾರಾ ಹೊಟೇಲ್ ಅಲ್ಲ, ನ್ಯೂಡೆಲ್ಲಿ ರೈಲ್ವೇ ಸ್ಟೇಷನ್ ಲಾಂಜ್!

ವಾರ್ತಾಭಾರತಿವಾರ್ತಾಭಾರತಿ4 Jun 2016 12:19 PM IST
share
ಇದು ಪಂಚತಾರಾ ಹೊಟೇಲ್ ಅಲ್ಲ, ನ್ಯೂಡೆಲ್ಲಿ ರೈಲ್ವೇ ಸ್ಟೇಷನ್ ಲಾಂಜ್!

ಈ ಫೋಟೋಗಳನ್ನು ನೋಡಿ ಯಾವುದೋ ಪಂಚತಾರಾ ಹೊಟೇಲ್ ಅಥವಾ ರೆಸ್ಟೊರೆಂಟ್ ಎಂದುಕೊಳ್ಳಬೇಡಿ. ಈ ದುಬಾರಿ ಎಕ್ಸಿಕ್ಯೂಟಿವ್ ಲಾಂಜ್ ನವದೆಹಲಿಯ ರೈಲ್ವೇ ನಿಲ್ದಾಣದಲ್ಲಿದೆ. ಐಆರ್‌ಸಿಟಿಸಿ ಮತ್ತು ಎಸ್‌ಎಸ್‌ಪಿ ಕ್ಯಾಟರಿಂಗ್ ಇಂಡಿಯಾ ಜೊತೆಗೂಡಿ ಈ ಪಂಚತಾರಾ ಕಾಯುವ ಲಾಂಜನ್ನು ಎನ್‌ಡಿಎಲ್‌ಎಸ್ ನಿಲ್ದಾಣದ ಪ್ರಯಾಣಿಕರಿಗಾಗಿ ಸಿದ್ಧಪಡಿಸಿದ್ದಾರೆ.

ಎಸ್‌ಎಸ್‌ಪಿ ಕ್ಯಾಟರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸುಮಾರು 50 ಕಾಯುವಿಕೆ ಲಾಂಜ್ ಗಳನ್ನು ದೇಶದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ನಿರ್ಮಿಸಿದೆ. ಈಗ ಭಾರತದಲ್ಲಿ ಮೊದಲ ಬಾರಿಗೆ ರೈಲ್ವೇ ನಿಲ್ದಾಣದಲ್ಲೂ ಎಕ್ಸಿಕ್ಯೂಟಿವ್ ಲಾಂಜನ್ನು ತೆರೆದಿದೆ.

ಮನೆಯ ಹಿತ ಮತ್ತು ಹೊಟೇಲಿನ ಆಡಂಭರ

ಮನೆಯಂತೆ ಹಿತಕರ ಮತ್ತು ಹೊಟೇಲಿನಂತಹ ಆಡಂಭರವನ್ನು ಅಗ್ಗದ ಬೆಲೆಯಲ್ಲಿ ಕೊಡಲು ಐಆರ್ಸಿಟಿಸಿ ಈ ಎಕ್ಸಿಕ್ಯೂಟಿವ್ ಲಾಂಜನ್ನು ಲೀಲಾ ಪ್ಯಾಲೇಸ್ ಮತ್ತು ಇತರ ಹೊಟೇಲ್ ಮತ್ತು ಟ್ರಾವೆಲ್ ಬುಕಿಂಗ್ ವೆಬ್ ತಾಣಗಳ ಜೊತೆಗೂಡಿ ಸಿದ್ಧಪಡಿಸಿದೆ. ಆನ್ ಲೈನಲ್ಲೇ ಜನರು ಈ ಕಾಯುವಿಕೆಯ ಜಾಗದಲ್ಲಿ ವಿಶ್ರಾಂತಿ ಪಡೆಯಲು ಸ್ಥಳ ಬುಕ್ ಮಾಡಬಹುದಾಗಿದೆ.

24*7 ಅತ್ಯಾಧುನಿಕ ಶೈಲಿಯ ವಾಷ್ ರೂಂಗಳು, ಎಸಿ ಇರುವ ಲಾಂಜ್, ಲಗೇಜ್ ರ್ಯಾಕುಗಳು, ವೈಫೈ ಕನೆಕ್ಟಿವಿಟಿ ದೆಹಲಿ ರೈಲ್ವೇ ನಿಲ್ದಾಣದಲ್ಲಿ ಸಿಗುವುದನ್ನು ಪ್ರಯಾಣಿಕರು ಖುಷಿಯಿಂದ ಸ್ವಾಗತಿಸಿದ್ದಾರೆ. ಇಲ್ಲಿ ಒಂದು ಬಾರಿ 125 ಮಂದಿ ಕೂರಬಹುದು.

ಸೌಲಭ್ಯಗಳು

ಲಾಂಜ್ ಅಲ್ಲಿ ಮಸಾಜ್ ಕೇಂದ್ರ, ಕೌಟುಂಬಿಕ ಕೋಣೆಗಳು, ವಾಷಿಂಗ್ ಮತ್ತು ಬಟ್ಟೆ ಬದಲಾವಣೆಗೆ ಜಾಗ, ಔದ್ಯಮಿಕ ಕೇಂದ್ರ, ಹಿತಕರ ಕುಳಿತುಕೊಳ್ಳುವ ಜಾಗ ಮತ್ತು ಆಹ್ಲಾದಕರ ಪಾನೀಯ ಮತ್ತು ಅತ್ಯುತ್ತಮ ಬಫೆಟ್ ಊಟವೂ ಇದೆ. ಕಾಯುತ್ತಿರುವ ಪ್ರಯಾಣಿಕರು 5ಡಿ ಸಿನಿಮಾ ಥಿಯೇಟರ್, ಲೈವ್ ಟಿವಿ ಮತ್ತು ಸಂಗೀತವೂ ಆಲಿಸಬಹುದು. ಫ್ಯಾಕ್ಸ್, ಫೋಟೋಶಾಟ್, ಸ್ಕಾನಿಂಗ್ ಮೊದಲಾದ ಸೌಲಭ್ಯಕ್ಕೆ ಹೆಚ್ಚುವರಿ ಬೆಲೆ ತೆರಬೇಕು.

ಪ್ರವೇಶ ಶುಲ್ಕ

ಸ್ವೈಪ್ ಕಾರ್ಡ್ ಮೂಲಕ ಲಾಂಜ್ ಒಳಕ್ಕೆ ಬರಬಹುದು. ಚೆಕ್ ಇನ್ ಸಮಯ ಈ ಕಾರ್ಡನ್ನು ಪ್ರಯಾಣಿಕರಿಗೆ ಕೊಡಲಾಗುತ್ತದೆ. ಸ್ವೈಪ್ ಕಾರ್ಡಲ್ಲಿ ಲಾಂಜ್ ಒಳಗೆ ಎಷ್ಟು ಸಮಯ ಇರಬಹುದು ಎನ್ನುವ ಸಮಯವೂ ಇರುತ್ತದೆ. ಒಳಗೆ ಎರಡು ಗಂಟೆ ಇರಲು ರು. 150 ತೆರಬೇಕು. ಈ ಬೆಲೆಗೆ ಆರಾಮವಾಗಿ ಕುಳಿತು ಆಹ್ಲಾದಕರ ಪಾನೀಯ ಸೇವಿಸಬಹುದು. 2 ಗಂಟೆ ಮೇಲೆ ಪ್ರಯಾಣಿಕರು ಪ್ರತೀ ಗಂಟೆಗೂ ರೂ. 50 ಹೆಚ್ಚು ತೆರಬೇಕು.

ಬಫೆಟ್ ಉಪಹಾರ ಬೇಕಿದ್ದಲ್ಲಿ ಹೆಚ್ಚುವರಿ ರೂ. 100 ಮತ್ತು ಮಧ್ಯಾಹ್ನದ ಊಟ ಮತ್ತು ರಾತ್ರಿಯೂಟಕ್ಕೆ ರೂ. 200 ತೆರಬೇಕು. ಎಕ್ಸಿಕ್ಯೂಟ್ ಲಾಂಜ್ ನಗದಿನ ಜೊತೆಗೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಸ್ವೀಕರಿಸುತ್ತದೆ.

ಸ್ವೈಪ್ ಕಾರ್ಡ್ ಮೂಲಕ ಪ್ರವೇಶ

ಪ್ರಯಾಣಿಕರು ತಮ್ಮ ಫೋಟೋ ಐಡಿ ಸಾಕ್ಷ್ಯ ಮತ್ತು ಮಾನ್ಯತೆ ಪಡೆದ ಟ್ರೈನ್ ಟಿಕೆಟ್ ತೋರಿಸಿ ಈ ಸೌಲಭ್ಯ ಪಡೆಯಬಹುದು. ಸ್ವೈಪ್ ಕಾರ್ಡ್ ಮೂಲಕವಷ್ಟೇ ಲಾಂಜ್ ಪ್ರವೇಶಿಸಬಹುದು. ಮೂರು ಅಡಿ ಮೀರಿದ ಮಕ್ಕಳಿಗೆ ಪ್ರವೇಶ ಶುಲ್ಕವಿದೆ.

ವೀಲ್ ಚೇರ್ ಸೌಲಭ್ಯ

ಹಿರಿಯ ನಾಗರಿಕರಿಗೆ ಮತ್ತು ವಿಕಲಚೇತನರಿಗೆ ವೀಲ್ ಚೇರ್ ವ್ಯವಸ್ಥೆ ಇದೆ.

ಕೃಪೆ: economictimes.indiatimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X