ಶಾಸಕ ಲೋಬೊ ನೇತೃತ್ವದಲ್ಲಿ ಮುಸ್ಲಿಂ ಮುಖಂಡರಿಂದ ಪೊಲೀಸ್ ಅಯುಕ್ತರ ಭೇಟಿ

ಮಂಗಳೂರು, ಜೂ. 4: ರಂಝಾನ್ ಉಪವಾಸದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೊರವರ ನೇತೃತ್ವದಲ್ಲಿ ಮಸೀದಿಗಳ ಮುಖಂಡರು ಇಂದು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ರನ್ನು ಭೇಟಿ ಮಾಡಿದರು. ರಂಝಾನ್ ಉಪವಾಸದ ಸಮಯದಲ್ಲಿ ಮಸೀದಿಗಳಲ್ಲಿ ರಾತ್ರಿ ನಡೆಯುವ ವಿಶೇಷ ಪ್ರಾರ್ಥನೆಯ ಬಳಿಕ ಭಕ್ತರು ಮನೆಗೆ ಹೋಗುವ ಸಂದರ್ಭದಲ್ಲಿ ಅವರಿಗೆ ಸಂಪೂರ್ಣ ರಕ್ಷಣೆಯನ್ನು ಒದಗಿಸುವಂತೆ ಮತ್ತು ಮಸೀದಿಯ ಬಳಿ ಪೊಲೀಸ್ ಗಸ್ತು ನಿಯೋಜಿಸುವಂತೆ ಕೋರಲಾಯಿತು.
ಇದೇ ವೇಳೆ ಮೆಸ್ಕಾಂ ಅಧಿಕಾರಿಗಳಲ್ಲಿ ಪ್ರಾರ್ಥನೆಯ ಸಮಯ ಮತ್ತು ಅನಂತರ ಅನಾವಶ್ಯಕವಾಗಿ ವಿದ್ಯುತ್ ಕಡಿತಗೊಳಿಸದಂತೆ ಮನವಿ ಮಾಡಲಾಯಿತು. ನಿಯೋಗದಲ್ಲಿ ಮುಸ್ಲಿಂ ಸೆಂಟ್ರಲ್ ಕುಟಿಯ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್, ಹನೀಪ್ ಹಾಜಿ ಬಂದರು, ಬಶೀರ್ ಅಹ್ಮದ್, ಹಸನಬ್ಬ, ಅಹ್ಮದ್ ಬಾವ, ಡಿ.ಎಂ. ಅಸ್ಲಂ ಮುಂತಾದವರು ಉಪಸ್ಥಿತರಿದ್ದರು.
Next Story





