Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮದ್ಯದ ಅಮಲು: ಪತ್ನಿಯನ್ನು ಕೊಂದು ಶವದ...

ಮದ್ಯದ ಅಮಲು: ಪತ್ನಿಯನ್ನು ಕೊಂದು ಶವದ ಜತೆ ನಿದ್ದೆಹೊಡೆದ ಭೂಪ!

ವಾರ್ತಾಭಾರತಿವಾರ್ತಾಭಾರತಿ5 Jun 2016 9:31 AM IST
share
ಮದ್ಯದ ಅಮಲು: ಪತ್ನಿಯನ್ನು ಕೊಂದು ಶವದ ಜತೆ ನಿದ್ದೆಹೊಡೆದ ಭೂಪ!

ಹೊಸದಿಲ್ಲಿ, ಜೂ.5: ತಾನು ಪ್ರೀತಿಸಿದ ಪ್ರಿಯತಮೆಯನ್ನು ವಿವಾಹವಾಗುವ ವೇಳೆ, ಪ್ರದೀಪ್ ಶರ್ಮಾ ಜೀವನವಿಡೀ ಸುಖದ ಸುಪ್ಪತ್ತಿಗೆಯಲ್ಲಿ ಇಡುವುದಾಗಿ ಭರವಸೆ ನೀಡಿದ್ದ. ಆದರೆ ಮದುವೆಯಾಗಿ ಕೆಲ ತಿಂಗಳುಗಳಲ್ಲೇ ಯುವತಿಗೆ ವಾಸ್ತವ ಅರಿವಾಯಿತು. ಪ್ರೀತಿಯ ಬದಲು ಆಕೆಗೆ ಸಿಕ್ಕಿದ್ದು, ಅಭದ್ರತೆ, ಅಪನಂಬಿಕೆ ಹಾಗೂ ವಿಷಾದದ ಪ್ರತಿಫಲವಷ್ಟೇ. ಆದರೆ ಈ ಪ್ರೇಮವಿವಾಹ ದುಃಖಾಂತ್ಯ ಕಂಡಿದೆ. ಪಾನಮತ್ತ ಪತಿ 23 ವರ್ಷದ ತನ್ನ ಪತ್ನಿ ಮೋನಿಯಾಳನ್ನು ಹತ್ಯೆ ಮಾಡಿ, ಆ ಬಳಿಕ ಭೋಗಿಸಿ ಬೆಳಗ್ಗೆವರೆಗೂ ಶವದ ಜತೆ ಗಡದ್ದಾಗಿ ನಿದ್ದೆ ಹೊಡೆದ ಪ್ರಕರಣ ಬೆಳಕಿಗೆ ಬಂದಿದೆ, ಶನಿವಾರ ಆರೋಪಿಯನ್ನು ಬಂಧಿಸಲಾಗಿದ್ದು, ಈತನ ಪತ್ತೆಗೆ ಪೊಲೀಸರಿಗೆ ಐದು ದಿನ ಬೇಕಾಯಿತು.
ಶರ್ಮಾ ತನ್ನ ಅಣ್ಣನ ವಿವಾಹದಲ್ಲಿ ಮೋನಿಕಾಳನ್ನು ನೋಡಿದ ಮೊದಲ ನೋಟದಲ್ಲೇ ಪ್ರೇಮ ಅಂಕುರಿಸಿತ್ತು. ನಿರುದ್ಯೋಗಿ ಹಾಗೂ ಬ್ಯಾಡ್ ಬಾಯ್ ಎಂದು ಸ್ಥಳೀಯರು ಈತನಿಗೆ ಹಣೆಪಟ್ಟಿ ಕಟ್ಟಿದ್ದರು. ಆಕೆಯನ್ನು ವಿವಾಹವಾಗುವ ಸಲುವಾಗಿ ಕೆಲಸಕ್ಕೆ ಸೇರುವುದಾಗಿ ಮತ್ತು ತನ್ನ ನಡತೆ ಸರಿಪಡಿಸಿಕೊಳ್ಳುವುದಾಗಿ ಪ್ರಮಾಣ ಮಾಡಿದ್ದ. ಆರಂಭದಲ್ಲಿ ಉತ್ತರ ಪ್ರದೇಶದ ಬಲಂದ್ಶೆಹರ್ನಲ್ಲಿ ವಾಸವಿದ್ದ ದಂಪತಿ ಆರು ತಿಂಗಳ ಬಳಿಕ ದೆಹಲಿಯ ನಿಹಾಲ್ ವಿಹಾರ್ಗೆ ಬಂದಿದ್ದರು.
ವಿವಾಹಕ್ಕೆ ಮುನ್ನ ನೀಡಿದ ಆಶ್ವಾಸನೆಯಂತೆ ದೆಹಲಿಗೆ ಬಂದು ಇ- ರಿಕ್ಷಾ ಚಾಲಕನಾಗಿ ಕೆಲಸ ಆರಂಭಿಸಿದ. ಆದರೆ ದೊಡ್ಡ ಪ್ರಮಾಣದ ಬಾಡಿಗೆ, ಗೃಹಬಳಕೆ ವಸ್ತುಗಳು ಹಾಗೂ ಇತರ ವೆಚ್ಚಕ್ಕೆ ಹಣ ಸಾಕಾಗಲಿಲ್ಲ. ಇದು ಇಬ್ಬರ ಮಧ್ಯೆ ಹಣಕಾಸು ವಿಚಾರದಲ್ಲಿ ಜಗಳಕ್ಕೆ ಕಾರಣವಾಗಿತ್ತು. ನಿರಂತರ ಜಗಳದಿಂದಾಗಿ ಎರಡು ಮನೆಗಳಿಂದ ಇವರನ್ನು ಖಾಲಿ ಮಾಡಿಸಲಾಗಿತ್ತು.
ಮೇ 29ರಂದು ಮತ್ತೆ ಇಬ್ಬರ ಮಧ್ಯೆ ಜಗಳವಾಗಿದೆ. ಮನೆಯ ಮಾಲಕ, ಅವರನ್ನು ಮನೆ ಖಾಲಿಮಾಡುವಂತೆ ಎರಡು ದಿನ ಹಿಂದೆಯೇ ಸೂಚಿಸಿದ್ದ. ಇದರಿಂದ ಹತಾಶನಾಗಿ ಪತ್ನಿಯನ್ನು ತ್ಯಜಿಸಲು ನಿರ್ಧರಿಸಿದ. "ಮದ್ಯ ತಂದು ಪತ್ನಿಗೆ ಕುಡಿಸಿ, ಇಟ್ಟಿಗೆಯಿಂದ ಹೊಡೆದೆ. ಹಠಾತ್ ದಾಳಿಯಿಂದ ಅಧೀರಳಾದ ಮೋನಿಕಾ ಸಹಾಯಕ್ಕಾಗಿ ಕೂಗಿಕೊಂಡಳು. ಇದರಿಂದ  ಭಯಗೊಂಡು ಆಕೆಯ ತಲೆಯನ್ನು ಗೋಡೆಗೆ ಚಚ್ಚಿ ಸಾಯಿಸಿದೆ" ಎಂದು ಒಪ್ಪಿಕೊಂಡಿದ್ದಾನೆ. ಸ್ನಾನಗೃಹಕ್ಕೆ ಶವ ಒಯ್ದು ಸ್ನಾನ ಮಾಡಿಸಿ, ಬೆತ್ತಲು ದೇಹವನ್ನು ಹಾಸಿಗೆಗೆ ಹೊತ್ತು ತಂದೆ. ಆಕೆಯ ಕ್ಷಮೆ ಯಾಚಿಸಿ, ಕೊನೆಯ ಬಾರಿ ಆಕೆಯನ್ನು ಪ್ರೀತಿಸಬೇಕು ಎನಿಸಿತು. ಬಳಿಕ ಶವದ ಜತೆಗೇ ಬೆಳಗ್ಗೆ 10ರವರೆಗೂ ನಿದ್ದೆ ಮಾಡಿದೆ ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.

ಗಲಾಟೆ ಹಿನ್ನೆಲೆಯಲ್ಲಿ ಆತ ಮೊಬೈಲ್ ಸ್ವಿಚ್ ಆಫ್ ಮಾಡಿ, ಮೋನಿಕಾಳ ಫೋನ್ ಹಾಗೂ ಇತರ ವಸ್ತುಗಳೊಂದಿಗೆ ಮನೆ ಬಿಟ್ಟ. ಮೇ 30ಕ್ಕೆ ಪೊಲೀಸರಿಗೆ ಸುದ್ದಿ ಮುಟ್ಟಿತು. ತನಿಖೆಗಾಗಿ ವಿಶೇಷ ತಂಡ ನಿಯೋಜಿಸಲಾಯಿತು. ನಂಗ್ಲೋಯಿ ಸ್ಟೇಷನ್ ಬಳಿ ಅವಿತಿದ್ದ ಆತನನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X