ಪುದುಚೇರಿ: ಇಂದು ಕಾಂಗ್ರೆಸ್ ಸರಕಾರ ಪ್ರಮಾಣ
ಪುದುಚೇರಿ, ಜೂ.5: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ವಿ.ನಾರಾಯಣಸ್ವಾಮಿಯವರ ನೇತೃತ್ವದ ನೂತನ ಸರಕಾರ ಇಂದು ಪುದುಚೇರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದೆ.
ನಾರಾಯಣಸ್ವಾಮಿ ಅವರೊಂದಿಗೆ ಐದು ಮಂದಿ ಕಾಂಗ್ರೆಸ್ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರಲ್ಲಿ ಎ.ನರಸಿಂಹಯ್ಯಮ್, ಮಲ್ಲಾಡಿ ಕೃಷ್ಣ ರಾವ್, ಶಹ ಜಹಾನ್, ಕೆ.ಕಂದಸಾಮಿ ಹಾಗೂ ಆರ್.ಕಮಲಾಕಣ್ಣನ್ ಸೇರಿದ್ದಾರೆ. ಇವರೆಲ್ಲರೂ ಮಾಜಿ ಸಚಿವರು ಎಂದು ಮಾಹಿತಿ ಮತ್ತು ಪ್ರಚಾರ ಇಲಾಖೆ ಸಹಾಯಕ ನಿರ್ದೇಶಕ ಐ.ಗಣಪತಿ ಪ್ರಕಟಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ, ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸುವರು. ಸಮುದ್ರ ಕಿನಾರೆಯ ಗಾಂಧಿ ಥಿಂಡಲ್ನಲ್ಲಿ ಮಧ್ಯಾಹ್ನ 12:10ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
Next Story