ಖಡ್ಸೆ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ: ಕೇಜ್ರಿವಾಲ್
ಹೊಸದಿಲ್ಲಿ, ಜೂ.5: ಮಹಾರಾಷ್ಟ್ರದ ಕಂದಾಯ ಖಾತೆ ಮಾಜಿ ಸಚಿವ ಏಕನಾಥ್ ಖಡ್ಸೆ, ಭೂಗತ ದೊರೆ ದಾವೂದ್ ಇಬ್ರಾಹೀಂ ಜತೆ ಸಂಪರ್ಕ ಹೊಂದಿದ್ದಾರೆ ಎಂದಬ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಗ್ರಹಿಸಿದ್ದಾರೆ. ಅಂತೆಯೇ ಪಾಟಿದಾರ್ ಮುಖಂಡ ಹಾರ್ದಿಕ್ ಪಟೇಲ್ ವಿರುದ್ಧ ದಾಖಲಿಸಿರುವ ದೇಶದ್ರೋಹ ಪ್ರಕರಣವನ್ನು ವಾಪಸು ಪಡೆಯಲು ಕೇಜ್ರಿವಾಲ್ ಬೆಂಬಲ ಸೂಚಿಸಿದ್ದಾರೆ. ಪಟೇಲ್ ಈಗ ಜೈಲಿನಲ್ಲಿದ್ದಾರೆ. ಪಟೇಲ್ ದೇಶದ್ರೋಹದ ಕೃತ್ಯ ಎಸಗಿಲ್ಲ. ಆದರೆ ಖಡ್ಸೆ ವಿರುದ್ಧ ಭ್ರಷ್ಟಾಚಾರ ಹಾಗೂ ಭೂ ವ್ಯವಹಾರ ಅಕ್ರಮದ ಆರೋಪ ಎದುರಿಸುತ್ತಿದ್ದಾರೆ. ಅವರು ನಿನ್ನೆ ರಾಜೀನಾಮೆ ನೀಡಿದ್ದರು.ುಜರಾತ್ ಸರಕಾರ ಹಾರ್ದಿಕ್ ಪಟೇಲ್ ವಿರುದ್ಧ ದೇಶದ್ರೋಹ ಆರೋಪ ವಾಪಸು ಪಡೆಯಲಿ. ಖಾಡ್ಸೆಯನ್ನು ದೇಶದ್ರೋಹದ ಆರೋಪದ ಮೇಲೆ ಬಂಸಿ ಎಂದು ಆಪ್ ಮುಖ್ಯಸ್ಥ ಟ್ವೀಟ್ ಮಾಡಿದ್ದಾರೆ. ಗುಜರಾತ್ನಲ್ಲಿ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಸಲು ನಿರ್ಧರಿಸಿದೆ ಎಂದು ಹೇಳಿಕೆ ನೀಡಿದ ಮರುದಿನವೇ ಈ ಟ್ವೀಟ್ ಬಂದಿದೆ. ಕಳೆದ ಒಂದು ದಶಕದಿಂದೀಚೆಗೆ ಬಿಜೆಪಿ ರಾಜ್ಯದಲ್ಲಿ ಅಕಾರದಲ್ಲಿದೆ.ೇಜ್ರಿವಾಲ್ ನಿನ್ನೆ ಖಡ್ಸೆಯವರನ್ನು ದೇಶದ್ರೋಹಿ ಎಂದು ಆಪಾದಿಸಿ, ದಾವೂದ್ ಇಬ್ರಾಹೀಂ ಅವರ ಜತೆ ಸಂವಾದ ನಡೆಸಿರುವುದು ಇದಕ್ಕೆ ಉದಾಹರಣೆ. ದೇಶದ ವಿರುದ್ಧ ಏನೂ ಮಾಡದಿದ್ದರೂ ಪಟೇಲ್ ವಿರುದ್ಧ ದೇಶದ್ರೋಹ ಆರೋಪ ಹೊರಿಸಲಾಗಿದೆ. ಆದರೆ ದಾವೂದ್ ಇಬ್ರಾಹೀಂ ಜತೆ ಮಾತನಾಡಿದ ಕರೆ ದಾಖಲೆಗಳಿದ್ದರೂ, ಅವರ ವಿರುದ್ಧ ದಾಖಲಿಸಿಲ್ಲ ಎಂದು ಹೇಳಿದ್ದರು