ಖಡ್ಸೆ-ದಾವೂದ್ ಸಂಪರ್ಕ: ಸಿಬಿಐ ತನಿಖೆಗೆ ಕೋರಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ
ಮುಂಬೈ, ಜೂ.6: ಭೂಗತ ಪಾತಕಿ ದಾವೂದ್ ಇಬ್ರಾಹೀಂನೊಂದಿಗೆ ದೂರವಾಣಿ ಸಮಪರ್ಕ ಇರಿಸಿಕೊಂಡಿದ್ದ ಆರೋಪದ ಬಗ್ಗೆ ಮಹಾರಾಷ್ಟ್ರದ ಮಾಜಿ ಸಚಿವ ಏಕನಾಥ ಖಡ್ಸೆಯವರ ವಿರುದ್ಧ ಸಿಬಿಐ ತನಿಖೆಯನ್ನು ಕೋರಿ ಗುಜರಾತ್ನ ವ್ಯಕ್ತಿಯೊಬ್ಬರು ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಸೋಮವಾರ ಜೂ.14ಕ್ಕೆ ಮುಂದೂಡಿದೆ.
ಅರ್ಜಿದಾರ ಮನೋಜ್ ಭಂಗಲೆ ಎಂಬವರ ವಕೀಲೆ ಅಪರ್ಣಾ ವಾಟ್ಕರ್ ನ್ಯಾಯಮೂರ್ತಿಗಳಾದ ಎನ್.ಎಚ್.ಪಾಟೀಲ್ ಹಾಗೂ ಪಿ.ಡಿ.ನಾಯ್ಕಾರಿದ್ದ ವಿಭಾಗೀಯ ಪೀಠದ ಮುಂದೆ ಅರ್ಜಿಯನ್ನು ಮಂಡಿಸಿದರು. ಪೀಠವು ಅದರ ವಿಚಾರನೆಯನ್ನು ಜೂ.14ಕ್ಕೆ ಮುಂದೂಡಿತು.
ಈ ವರ್ಷ ಎಪ್ರಿಲ್ನಲ್ಲಿ ತಾನು ಪಾಕಿಸ್ತಾನ ಟೆಲಿಕಮ್ಯುನಿಕೇಶನ್ ಕಂಪೆನಿ ಲಿ.ಯಿಂದ ಕರೆ ದಾಖಲೆಗಳನ್ನು ಹ್ಯಾಕ್ ಮಾಡಿದ್ದು, ಅವುಗಳಿಂದ ದಾವೂದ್ನ ಕರೆ ದಾಖಲೆಗಳನ್ನು ಪಡೆದಿದ್ದೇನೆಂದು ಭಂಗಲೆ ಪ್ರತಿಪಾದಿಸಿದ್ದರು.
Next Story