ಮಾಲೇಗಾಂವ ಸ್ಫೋಟ ಪ್ರಕರಣ:ಸಾಧ್ವಿ ಪ್ರಜ್ಞಾ ಜಾಮೀನು ಅರ್ಜಿಯನ್ನು ವಿರೋಧಿಸದ ಎನ್ಐಎ
![ಮಾಲೇಗಾಂವ ಸ್ಫೋಟ ಪ್ರಕರಣ:ಸಾಧ್ವಿ ಪ್ರಜ್ಞಾ ಜಾಮೀನು ಅರ್ಜಿಯನ್ನು ವಿರೋಧಿಸದ ಎನ್ಐಎ ಮಾಲೇಗಾಂವ ಸ್ಫೋಟ ಪ್ರಕರಣ:ಸಾಧ್ವಿ ಪ್ರಜ್ಞಾ ಜಾಮೀನು ಅರ್ಜಿಯನ್ನು ವಿರೋಧಿಸದ ಎನ್ಐಎ](https://www.varthabharati.in/sites/default/files/images/articles/2016/06/6/393026-sadhvi-pragya-dnaindia.jpg)
ಮುಂಬೈ,ಜೂ.6: 2008ರ ಮಾಲೇಗಾಂವ ಸ್ಫೋಟ ಪ್ರಕರಣದಲ್ಲಿ ಕಳೆದ ತಿಂಗಳು ಸಾಧ್ವಿ ಪ್ರಜ್ಞಾಗೆ ಕ್ಲೀನ್ ಚಿಟ್ ನೀಡಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆಯು ಇಂದು ಮುಂಬೈ ನ ವಿಶೇಷ ನ್ಯಾಯಾಲಯದಲ್ಲಿ ಅವರ ಜಾಮೀನು ಅರ್ಜಿಗೆ ಯಾವುದೇ ವಿರೋಧವನ್ನು ವ್ಯಕ್ತಪಡಿಸಲಿಲ್ಲ.
ಮೇ 13ರಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಎನ್ಐಎ ಸಾಕ್ಷಾಧಾರಗಳ ಕೊರತೆಯಿಂದ ಸಾಧ್ವಿ ಮತ್ತು ಇತರ ಐವರ ವಿರುದ್ಧದ ಆರೋಪಗಳನ್ನು ಕೈಬಿಟ್ಟಿತ್ತು.
ತನ್ಮಧ್ಯೆ ಸ್ಫೋಟದಲ್ಲಿ ಗಾಯಗೊಂಡಿದ್ದ ನಿಸಾರ್ ಅಹ್ಮದ್ ಸೈಯದ್ ಬಿಲಾಲ್ ಎನ್ನುವವರು ಸಾಧ್ವಿ ಪ್ರಜ್ಞಾಗೆ ಜಾಮೀನು ನೀಡುವುದನ್ನು ವಿರೋಧಿಸಿ ತಕರಾರು ಅರ್ಜಿಯನ್ನು ಸಲ್ಲಿಸಿದ್ದು, ನ್ಯಾಯಾಲಯವು ಬುಧವಾರ ಈ ಅರ್ಜಿಯ ವಿಚಾರಣೆ ನಡೆಸುವ ಸಾಧ್ಯತೆಯಿದೆ.
Next Story