ನಾಲ್ವರು ಆರೋಪಿಗಳಿಗೆ ಜಾಮೀನು ನಿರಾಕರಣೆ
ಮುಂಬೈ, ಜೂ.6: ಕಳೆದ 2006ರ ಮಾಲೆಗಾಂವ್ ಬಾಂಬ್ ಸ್ಫೋಟದ ನಾಲ್ವರು ಆರೋಪಿಗಳ ಜಾಮೀನು ಮನವಿಯನ್ನು ವಿಶೇಷ ಎನ್ಐಎ ನ್ಯಾಯಾಲಯವಿಂದು ತಿರಸ್ಕರಿಸಿದೆ.
ಮನೋಹರ್ ಸಿಂಗ್, ರಾಜೇಂದ್ರ ಚೌಧರಿ, ಧನ್ಸಿಂಗ್ ಹಾಗೂ ಲೋಕೇಶ್ ಶರ್ಮಾ ಎಂಬವರಿಗೆ ಜಾಮೀನು ಮಂಜೂರು ಮಾಡಲು ವಿಶೇಷ ಎನ್ಐಎ ನ್ಯಾಯಾಧೀಶ ವಿ.ವಿ. ಪಾಟೀಲ್ ನಿರಾಕರಿಸಿದ್ದಾರೆ.
ಎಪ್ರಿಲ್ನಲ್ಲಿ ನ್ಯಾಯಾಲಯವು 8 ಮಂದಿ ಮುಸ್ಲಿಂ-ಸಹಾರೋಪಿಗಳನ್ನು ಖುಲಾಸೆಗೊಳಿಸಿರುವುದರಿಂದ ತಮಗೂ ಸ್ವಾತಂತ್ರ ಬೇಕೆಂದು ಈ ನಾಲ್ವರು ಆರೋಪಿಗಳು ವಾದಿಸಿದ್ದರು.
Next Story