ಜಿಶಾ ತಾಯಿಯನ್ನು ಮತ್ತೊಮ್ಮೆ ಪ್ರಶ್ನಿಸಿದ ಪೊಲೀಸರು!
ಕೊಚ್ಚಿ, ಜೂನ್ 7: ಜಿಶಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಾಯಿ ರಾಜೇಶ್ವರಿಯನ್ನು ತನಿಖಾ ತಂಡ ಮತ್ತೆ ಮತ್ತೆ ಪ್ರಶ್ನಿಸುತ್ತಿದೆ. ಇವರ ಹಿಂದಿನ ಸಾಕ್ಷ್ಯಗಳಲ್ಲಿ ವೈರುಧ್ಯಗಳಿವೆಯೇ ಎಂದು ಪರಿಶೀಲಿಸುವುದು ತನಿಖಾ ತಂಡದ ಉದ್ದೇಶವಾಗಿದೆ. ಅದೇವೇಳೆ ಜಿಶಾ ಕೊಲೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕನ ಪಾತ್ರ ಇದೆ ಎಂದ ಜೋಮೋನ್ ಪುತ್ತನ್ಪುರಕ್ಕಲ್ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸುತ್ತಿದ್ದಾರೆ.
ಕಳೆದ ದಿವಸ ಅಲುವ ಪೊಲೀಸ್ ಕ್ಲಬ್ನಲ್ಲಿ ಜಿಶಾರ ತಾಯಿಯಿಂದ ಗಂಟೆಗಳ ಕಾಲ ಸಾಕ್ಷ್ಯ ಪಡೆಯಲಾಗಿತ್ತು. ಇವರ ಹೇಳಿಕೆಗಳಲ್ಲಿ ವ್ಯತ್ಯಾಸಗಳು ಗೋಚರಿಸುತ್ತಿವೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.ಕೇಸಿಗೆ ಸಹಾಯಕ ಮಾಹಿತಿಯನ್ನು ತಾಯಿಗೆ ನೀಡಲು ಸಾಧ್ಯವೆಂದು ಪೊಲೀಸರು ಭಾವಿಸಿದ್ದಾರೆ.
ಈ ನಡುವೆ ಜೋಮೋನ್ ಪುತ್ತನ್ಪುರಕ್ಕಲ್ರ ದೂರಿನ ಹಿನ್ನೆಲೆಯಲ್ಲಿ ಪೆರುಂಬಾವೂರ್ ಡಿವೈಎಸ್ಪಿ ಸುದರ್ಶನ್ ತನಿಖೆ ಊರ್ಜಿತಗೊಳಿಸಿದ್ದಾರೆ. ಜೋಮೋನ್ ದೂರಿನಲ್ಲಿ ಸತ್ಯಾಂಶಗಳಿದ್ದರೆ ಕೇಸು ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Next Story