Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವಿಯೆಟ್ನಾಂಗೆ ಬ್ರಹ್ಮೋಸ್ ಕ್ಷಿಪಣಿ...

ವಿಯೆಟ್ನಾಂಗೆ ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆ

ಮಾರಾಟದ ಭಾರತದ ಪ್ರಯತ್ನ ವೃದ್ಧಿ

ವಾರ್ತಾಭಾರತಿವಾರ್ತಾಭಾರತಿ9 Jun 2016 11:32 PM IST
share

ಹೊಸದಿಲ್ಲಿ, ಜೂ.9: ಭಾರತವು ತನ್ನ ಅತ್ಯಾಧುನಿಕ ಯುದ್ಧ ಹಡಗು ಕ್ಷಿಪಣಿ ವ್ಯವಸ್ಥೆಯನ್ನು ವಿಯೆಟ್ನಾಂಗೆ ಮಾರಾಟ ಮಾಡುವ ಪ್ರಯತ್ನವನ್ನು ಹೆಚ್ಚಿಸಿದೆ. ಅಲ್ಲದೆ ಅದು ಇನ್ನೂ ಕನಿಷ್ಠ 15 ಮಾರುಕಟ್ಟೆಗಳನ್ನು ಗಮನದಲ್ಲಿರಿಸಿಕೊಂಡಿದೆ. ಈ ಪ್ರಯತ್ನವು ಚೀನಾದ ಹೆಚ್ಚುತ್ತಿರುವ ಮಿಲಿಟರಿ ದೃಢತೆಯ ಬಗ್ಗೆ ಹೊಸದಿಲ್ಲಿಯ ಕಳವಳವನ್ನು ಪ್ರತಿಫಲಿಸುತ್ತದೆಂದು ಪರಿಣತರು ಅಭಿಪ್ರಾಯಿಸಿದ್ದಾರೆ.
ಭಾರತ-ರಶ್ಯ ಜಂಟಿ ಸಾಹಸದ ಉತ್ಪನ್ನವಾಗಿರುವ ಶಬ್ದಾತೀತ ವೇಗದ ಬ್ರಹ್ಮೋಸ್ ಕ್ಷಿಪಣಿಯ ಮಾರಾಟವು ವಿಶ್ವದ ಬಹು ದೊಡ್ಡ ಶಸ್ತ್ರಾಸ್ತ್ರ ಆಮದುಗಾರ ರಾಷ್ಟ್ರಕ್ಕೆ ಬದಲಾವಣೆಯ ಸಂಕೇತವಾಗಿರುತ್ತದೆ. ಭಾರತವು ರಕ್ಷಣಾ ಭಾಗಿದಾರರನ್ನು ಪಡೆಯಲು ಹಾಗೂ ಆದಾಯವನ್ನು ಹೆಚ್ಚಿಸಿಕೊಳ್ಳಲು ಬೇರೆ ರೀತಿಯಿಂದಾದರೂ ಶಸ್ತ್ರಾಸ್ತ್ರಗಳನ್ನು ಕಳುಹಿಸಲು ಮಾರ್ಗ ಹುಡುಕುತ್ತಿದೆ.
ಪ್ರಧಾನವಾಗಿ ವಿಯೆಟ್ನಾಂ ಸೇರಿದಂತೆ 5 ದೇಶಗಳಿಗೆ ಬ್ರಹ್ಮೋಸ್ ಕ್ಷಿಪಣಿಗಳ ಮಾರಾಟದ ವೇಗ ವರ್ಧಿಸುವಂತೆ ಕ್ಷಿಪಣಿ ತಯಾರಕ ಬ್ರಹ್ಮೋಸ್ ಏರ್‌ಸ್ಪೇಸ್‌ಗೆ ಸರಕಾರ ಆದೇಶ ನೀಡಿದೆಯೆಂದು ರಾಯ್ಟರ್ ಸುದ್ದಿ ಸಂಸ್ಥೆಗೆ ಲಭಿಸಿರುವ, ಅಪ್ರಕಟಿತ ಸರಕಾರಿ ಟಿಪ್ಪಣಿಯೊಂದು ತಿಳಿಸಿದೆ. ಇಂಡೋನೇಶ್ಯ, ದಕ್ಷಿಣ ಆಫ್ರಿಕ, ಚಿಲಿ ಹಾಗೂ ಬ್ರೆಝಿಲ್ ಇತರ ನಾಲ್ಕು ರಾಷ್ಟ್ರಗಳಾಗಿವೆ.

ಬ್ರಹ್ಮೋಸ್ ಕ್ಷಿಪಣಿಗಾಗಿ 2011ರಲ್ಲಿ ಹನೋಯಿ ದೇಶವು ಮುಂದಿಟ್ಟ ಬೇಡಿಕೆಯನ್ನು ಭಾರತವು, ಚೀನಾಕ್ಕೆ ಕೋಪ ಬರಬಹುದೆಂಬ ಹೆದರಿಕೆಯಿಂದ ಅಡಿಯಲ್ಲಿರಿಸಿದೆ. ಶಬ್ದದ ವೇಗದ 3 ಪಟ್ಟು ವೇಗವುಳ್ಳ ಹಾಗೂ ವಿಶ್ವದ ಅತೀ ಹೆಚ್ಚು ವೇಗದ ಕ್ಷಿಪಣಿಯೆಂದು ಖ್ಯಾತಿ ಹೊಂದಿರುವ ಈ ಕ್ಷಿಪಣಿ ಅಸ್ಥಿರತೆ ಉಂಟುಮಾಡಬಹುದೆಂದು ಚೀನಾ ಅಭಿಪ್ರಾಯಿಸಿದೆ.
ಬ್ರಹ್ಮೋಸ್ ಕ್ಷಿಪಣಿ ಹಡಗಿನಿಂದ, ವಿಮಾನದಿಂದ, ನೆಲದಿಂದ ಹಾಗೂ ಜಲಾಂತರ್ಗಾಮಿಗಳಿಂದ ಹಾರಿಸಬಲ್ಲ ವ್ಯವಸ್ಥೆಯುಳ್ಳದ್ದಾಗಿದೆ.
ಅಮೆರಿಕ, ಜಪಾನ್ ಹಾಗೂ ವಿಯೆಟ್ನಾಂಗಳೊಂದಿಗಿನ ಪ್ರಬಲ ರಕ್ಷಣಾ ಸಂಬಂಧವು ವಾಸ್ತವವಾಗಿ ಚೀನಾದೊಂದಿಗಿನ ತನ್ನ ವ್ಯವಹಾರಗಳಿಗೆ ಗಟ್ಟಿ ನೆಲೆಯೊದಗಿಸುತ್ತದೆಂದು ತೀರ್ಮಾನಿಸಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಲಹೆಗಾರರ ತಂಡ ಚೀನಾದ ತಲೆಯಲ್ಲಿರುವ ಅಭಿಪ್ರಾಯವನ್ನು ಬದಲಾಯಿಸಬೇಕೆಂದು ವಾಷಿಂಗ್ಟನ್‌ನ ಅಮೆರಿಕನ್ ವಿದೇಶಾಂಗ ನೀತಿ ಮಂಡಳಿಯ ಏಶ್ಯನ್ ಭದ್ರತಾ ಕಾರ್ಯಕ್ರಮದ ನಿರ್ದೇಶಕ ಜೆಫ್ ಎಂ. ಸ್ಮಿತ್ ಹೇಳಿದ್ದಾರೆ.
ಕೇವಲ ಕ್ಷಿಪಣಿಗಳನ್ನು ನೀಡುವ ಬದಲು ವಿಯೆಟ್ನಾಂಗೆ ಬ್ರಹ್ಮೋಸ್ ಕ್ಷಿಪಣಿಗಳಿಂದ ಸನ್ನದ್ಧ ಯುದ್ಧ ಹಡಗನ್ನೇ ಕೊಡುವ ಪ್ರಸ್ತಾಪವೊಂದನ್ನು ಭಾರತ ಸರಕಾರ ಪರಿಶೀಲಿಸುತ್ತಿದೆ.
ಭಾರತದ ಯುದ್ಧ ಹಡಗುಗಳಲ್ಲಿ 8 ಅಥವಾ 16 ಬ್ರಹ್ಮೋಸ್ ಕ್ಷಿಪಣಿಗಳಿವೆ. ಸಣ್ಣ ಹಡಗುಗಳಲ್ಲಿ 2 ಅಥವಾ 4 ಕ್ಷಿಪಣಿಗಳಿರುತ್ತವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X