ಕಾಸರಗೋಡು, ಜೂ.9: ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ಜೂ.21ರಂದು ಕೇರಳದಲ್ಲಿ ವಾಹನ ಕಾರ್ಮಿಕರು ಮುಷ್ಕರ ನಡೆಸಲಿದ್ದಾರೆ.
ಮೋಟಾರು ವಾಹನ ಕಾರ್ಮಿಕರ ಸಂಯುಕ್ತ ಹೋರಾಟ ಸಮಿತಿ ಈ ಮುಷ್ಕರಕ್ಕೆ ಕರೆ ನೀಡಿದೆ. ಕೆಎಸ್ಸಾರ್ಟಿಸಿ ಕಾರ್ಮಿಕರು ಸೇರಿ ದಂತೆ ಎಲ್ಲಾ ವಾಹನ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳುವರು ಎಂದು ಸಮಿತಿ ತಿಳಿಸಿದೆ.