ತಾಳ್ಮೆ ಕಳೆದುಕೊಂಡ ಗೃಹಸಚಿವ
ಸಾರ್ವಜನಿಕರಿಗೆ ಕಪಾಳಕ್ಕೆ ಬಾರಿಸುವ ಎಚ್ಚರಿಕೆ
ಲಕ್ನೋ, ಜೂ. 10: ತನ್ನ ಭಾಷಣಕ್ಕೆ ಪದೇ ಪದೇ ಅಡ್ಡಿಪಡಿಸುತ್ತಿದ್ದ ಸಾರ್ವಜನಿಕರ ವಿರುದ್ಧ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಸಿಟ್ಟಾಗಿ ಬೆದರಿಸಿದ ಘಟನೆ ಶುಕ್ರವಾರ ನಡೆದಿದೆ.
ಉತ್ತರಪ್ರದೇಶದ ಮಾವೂ ಎಂಬಲ್ಲಿ ರಾಜನಾಥ್ ಸಿಂಗ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಆದರೆ ಪದೇ ಪದೇ ಬೊಬ್ಬೆ ಹಾಕುತ್ತಿದ್ದ ಸಾರ್ವಜನಿಕರು ಅವರ ಭಾಷಣಕ್ಕೆ ಅಡ್ಡಿಪಡಿಸುತ್ತಿದ್ದರು. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ರಾಜನಾಥ ಸಿಂಗ್ 'ಸುಮ್ಮನಿರಿ.. ವೌನವಾಗಿರಿ. ಇಲ್ಲದಿದ್ದರೆ ನಾನು ನಿಮಗೆ ಕಪಾಳಕ್ಕೆ ಬಾರಿಸುತ್ತೇನೆ' ಎಂದು ಅಬ್ಬರಿಸಿದರು.
Next Story