ದಾಬೋಲ್ಕರ್ ಹತ್ಯಾ ಪ್ರಕರಣ; ಹಿಂದೂ ಜನಜಾಗೃತಿ ಸಮಿತಿಯ ವೈದ್ಯನ ಸೆರೆ
ದಾಬೋಲ್ಕರ್
ಮುಂಬೈ, ಜೂ.11: ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಶುಕ್ರವಾರ ರಾತ್ರಿ ಜನಜಾಗೃತಿ ಸಮಿತಿಯ ಸದಸ್ಯ ಹಾಗೂ ಸನಾನತನ ಸಂಸ್ಥೆಯ ಡಾ. ವೀರೇಂದ್ರ ತಾವ್ಡೆ (48)ಎಂಬವರನ್ನು ಬಂಧಿಸಿದೆ.
ಮುಂಬೈ ನ ಪಾನ್ ವೆಲ್ನಲ್ಲಿ ಆರೋಪಿ ತಾವ್ಡೆಯನ್ನು ಸಿಬಿಐ ಅಧಿಕಾರಿಗಳು ಶುಕ್ರವಾರ ಸಂಜೆ ಬಂಧಿಸಿದ್ದಾರೆ,
ದಾಬೋಲ್ಕರ್ ಅವರನ್ನು 2013ರ ಅಗಸ್ಟ್ 20ರಂದು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಕೊಲೆಗೈದಿದ್ದರು. ಬಾಂಬೆ ಹೈಕೋರ್ಟ್ ಆದೇಶದಂತೆ ಸಿಬಿಐ ಈ ಪ್ರಕರಣದ ತನಿಖೆಯನ್ನು ಕೈಗೊಂಡಿತ್ತು.
ವೃತ್ತಿಯಲ್ಲಿ ಇಎನ್ಟಿ ವೈದ್ಯರಾಗಿರುವ ತಾವ್ಡೆ ಪ್ರಕರಣದ ಪ್ರಮುಖ ಆರೋಪಿ ಎಂದು ತಿಳಿದು ಬಂದಿದೆ. ಈತನ ಬಂಧನಕ್ಕೆ ಪೊಲೀಸರು ಕಳೆದ ಕೆಲವು ದಿನಗಬಲೆ ಬೀಸಿದ್ದರು.
ತಾವ್ಡೆ , ಸಾರಂಗ್ ಅಕೋಲ್ಕರ್ ಮತ್ತು ಇನ್ನೊಬ್ಬ ಸನಾತನ ಸಂಸ್ಥೆಯ ಸದಸ್ಯ ಈ ಪ್ರಕರಣದ ಆರೋಪಿಗಳು ಎಂದು ತಿಳಿದು ಬಂದಿದೆ.
Next Story