ರಮಝಾನ್ನ ಪ್ರತಿ ರವಿವಾರ ಬಂಟ್ವಾಳ ಮುಸ್ಲಿಂ ವೆಲ್ಫೇರ್ನಿಂದ ರಮಝಾನ್ ಕಾರ್ಯಕ್ರಮ

ಬಂಟ್ವಾಳ, ಜೂ. 11: ಇಲ್ಲಿನ ಕೆಳಗಿನ ಪೇಟೆಯ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ರಮಝಾನ್ ತಿಂಗಳ ಪ್ರತಿ ರವಿವಾರ ಲುಹರ್ ನಮಾರ್ನ ಬಳಿಕ ಸಂಸ್ಥೆಯ ಸಭಾಂಗಣದಲ್ಲಿ ಮತ ಪ್ರವಚನ ಕಾರ್ಯಕ್ರಮ ಜರಗಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಜೂ.12ರಂದು ಬಂಟ್ವಾಳ ಜುಮಾ ಮಸೀದಿ ಮುದರ್ರಿಸ್ ಅನ್ಸಾರ್ ಬುರ್ಹಾನಿ ಪೈಝಿ ದುಆ ಮೂಲಕ ನೆರವೇರಿಸಲಿದ್ದಾರೆ. ಅಂದು ನಮಾಝ್ ಎಂಬ ವಿಷಯದಲ್ಲಿ ದ.ಕ. ಎಸ್ವೈಎಸ್ ಉಪಾಧ್ಯಕ್ಷ ಕೆ.ಎಂ.ಅಬ್ದುಲ್ ಖಾದಿರ್ ದಾರಿಮಿ ಪ್ರವಚನ ನೀಡಲಿದ್ದು, ದ.ಕ. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಚ್.ಖಾದರ್ ಅರ್ಹ ಫಲಾನುಭವಿಗಳಿಗೆ ರಮಝಾನ್ ಕಿಟ್ ವಿತರಿಸಲಿದ್ದಾರೆ.
ಜೂ. 19ರಂದು ರಮಝಾನ್ ಎಂಬ ವಿಷಯದಲ್ಲಿ ಪುತ್ತೂರು ಬಪ್ಪಳಿಗೆ ಮಸ್ಜಿದುನ್ನೂರ್ ಜುಮಾ ಮಸೀದಿಯ ಮುದರ್ರಿಸ್ ಹಾಜಿ ಸಿರಾಜುದ್ದೀನ್ ಪೈಝಿ ಪ್ರವಚನ ನೀಡಲಿದ್ದು, ಬಂಟ್ವಾಳ ತೌಹೀದ್ ಇಂಗ್ಲಿಷ್ ಮೀಡಿಯಂ ಸ್ಕೂಲ್ನ ಕೋಶಾಧಿಕಾರಿ ಹಾಜಿ ಮುಹಮ್ಮದ್ ಸಾದಿಕ್ ಬಿ.ಎಚ್.ಬಿ. ಯತೀಂ ಮಕ್ಕಳಿಗೆ ರಮಝಾನ್ ಹಬ್ಬದ ಉಡುಪು ವಿತರಿಸಲಿದ್ದಾರೆ.
ಜೂ.26ರಂದು ಝಕಾತ್ ಎಂಬ ವಿಷಯದಲ್ಲಿ ಬಂಟ್ವಾಳ ಜುಮಾ ಮಸೀದಿಯ ಮುದರ್ರಿಸ್ ಅನ್ಸಾರ್ ಬುರ್ಹಾನಿ ಪೈಝಿ ಪ್ರವಚನಗೈಯಲಿದ್ದು, ಬಂಟ್ವಾಳ ತೌಹೀದ್ ಇಂಗ್ಲಿಷ್ ಮೀಡಿಯಂ ಸ್ಕೂಲ್ನ ಸಂಚಾಲಕ ಹಾಜಿ ಬಿ.ಮುಹಮ್ಮದ್ ಎ.ಆರ್. ಬಡ ಕುಟುಂಬಸ್ಥರಿಗೆ ಸಂರಕ್ಷಣಾ ನಿಧಿ ವಿತರಿಸಲಿದ್ದಾರೆ.
ಜು. 3ರಂದು ಪ್ರವಾದಿ(ಸ.ಅ.)ಸ್ನೇಹ ಎಂಬ ವಿಷಯದಲ್ಲಿ ಮುಹಮ್ಮದ್ ಇಕ್ಬಾಲ್ ಮಿಸ್ಬಾಹಿ ಕಡಬ ಪ್ರವಚನ ನೀಡಲಿದ್ದು ಬಂಟ್ವಾಳ ತೌಹೀದ್ ಇಂಗ್ಲಿಷ್ ಮೀಡಿಯಂ ಸ್ಕೂಲ್ನ ಅಧ್ಯಕ್ಷ ಹಾಜಿ ಬಿ.ಎ.ಸುಲೈಮಾನ್ ಈದ್ ಕಿಟ್ ವಿತರಿಸಲಿದ್ದಾರೆ.
ಸ್ತ್ರೀಯರಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆ ಕಲ್ಪಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರಕಟನೆ ತಿಳಿಸಿದೆ.







