Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಇವರು ಯೂಸುಫ್, ರೋಟಿ, ಕಪ್ಡಾ, ಪಾನಿ...

ಇವರು ಯೂಸುಫ್, ರೋಟಿ, ಕಪ್ಡಾ, ಪಾನಿ ಬ್ಯಾಂಕಿನ ಮುಖ್ಯಸ್ಥರು!

ವಿಶಿಷ್ಟ ಸೇವಾ ಯೋಜನೆ ಮೂಲಕ ನೂರಾರು ಜನರಿಗೆ ಆಸರೆ

ವಾರ್ತಾಭಾರತಿವಾರ್ತಾಭಾರತಿ12 Jun 2016 12:27 PM IST
share
ಇವರು ಯೂಸುಫ್, ರೋಟಿ, ಕಪ್ಡಾ, ಪಾನಿ ಬ್ಯಾಂಕಿನ ಮುಖ್ಯಸ್ಥರು!

ಮುಂಬೈ: ಯೂಸಫ್ ಮುಕಾತಿ ಹಾಗೂ ಅವರ ಸಹೋದರಿ ಒಂದೂವರೆ ವರ್ಷದ ಹಿಂದೆ ತಮ್ಮ ತಂದೆ ಹೆಸರಿನಲ್ಲಿ ಹಾರೂನ್ ಮುಕಾತಿ ಇಸ್ಲಾಮಿಕ್ ಸೆಂಟರ್ (ಎಚ್ಎಂಐಸಿ) ಎಂಬ ಸಂಘಟನೆ ಹುಟ್ಟುಹಾಕಿದಾಗ ಅ ಸಂಘಟನೆ ಮತ್ತು ಕಾರ್ಯಚಟುವಟಿಕೆಗಳು ಔರಂಗಾಬಾದ್ ನಲ್ಲಿ  ಮನೆಮಾತಾಗುತ್ತದೆ ಎಂಬ ಕನಸೂ ಕಂಡಿರಲಿಲ್ಲ.

ಅನಾಥ ಬಾಲಕಿಯರಿಗೆ ಶಿಕ್ಷಣ ನೀಡುವ ಸಲುವಾಗಿ ಹುಟ್ಟಿಕೊಂಡ ಎಚ್ಎಂಐಸಿ, ಇದೀಗ ಶಿಕ್ಷಣದ ಜತೆಗೆ ಆಹಾರ ಮತ್ತು ಬಟ್ಟೆಯನ್ನೂ ಬಡಬಗ್ಗರಿಗೆ ವಿತರಿಸುವ ಮಾನವೀಯ ಕಾರ್ಯ ಮಾಡುತ್ತಿದೆ. 15 ವಿವಿಧ ಕೋರ್ಸ್ ಗಳಲ್ಲಿ 21500 ಬಾಲಕಿಯರಿಗೆ ತರಬೇತಿ ನೀಡಿದೆ. "ಇಲ್ಲಿ ಬಾಲಕಿಯರಿಗೆ ಎಲ್ಲ ಸೌಲಭ್ಯವನ್ನೂ ಕಲ್ಪಿಸಲಾಗುತ್ತದೆ ಹಾಗೂ ಹವಾನಿಯಂತ್ರಿತ ತರಗತಿ ಕೊಠಡಿಗಳಲ್ಲಿ ಅತ್ಯುತ್ತಮ ಬೋಧಕರು ಪಾಠ ಪ್ರವಚನ ಮಾಡುತ್ತಾರೆ" ಎಂದು ಯೂಸುಫ್ ವಿವರಿಸುತ್ತಾರೆ.
ಕಡುಬಡತನದಿಂದಾಗಿ ಬಹುತೇಕ ವಿದ್ಯಾಥರ್ಿಗಳಿಗೆ ದಿನಕ್ಕೆ ಒಂದು ಒಳ್ಳೆಯ ಊಟ ಮಾಡುವ ಆರ್ಥಿಕ ಚೈತನ್ಯವೂ ಇಲ್ಲ ಎನ್ನುವ ಅಂಶ ಅವರ ಗಮನಕ್ಕೆ ಬಂದು, ವಿದ್ಯಾರ್ಥಿಗಳ ಸಮಸ್ಯೆ ತಿಳಿದುಕೊಳ್ಳುವ ಸಲುವಾಗಿಯೇ ವಿದ್ಯಾರ್ಥಿಗಳಿಗೆ ಸಂದರ್ಶನ ಏರ್ಪಡಿಸಿದರು. ಹಲವು ವಿದ್ಯಾರ್ಥಿಗಳು ದಿನಕ್ಕೆ ಒಂದು ಊಟ ಮಾತ್ರ ಮಾಡುತ್ತಿದ್ದಾರೆ ಹಾಗೂ ಮತ್ತೆ ಕೆಲವರು ಎರಡು ಬಾರಿ ಮಾತ್ರ ಉಣ್ಣುತ್ತಿದ್ದಾರೆ ಎನ್ನುವುದು ತಿಳಿದು ಅಚ್ಚರಿಯಾಯಿತು ಎಂದು ಹೇಳುತ್ತಾರೆ. ಇದು ರೋಟಿ ಬ್ಯಾಂಕ್ ಸ್ಥಾಪನೆಗೆ ಇದು ಸ್ಫೂರ್ತಿಯಾಯಿತು. ಇದಕ್ಕೆ ಸದಸ್ಯತ್ವ ಪಡೆದು ರೊಟ್ಟಿಗಳನ್ನು ಮಾಡಿ ಜನರು ತಮ್ಮ ಕೇಂದ್ರಕ್ಕೆ ತಲುಪಿಸಲು ವ್ಯವಸ್ಥೆ ಮಾಡಿದರು. ಕ್ಷಿಪ್ರ ಅವಧಿಯಲ್ಲೇ ಇದು ದೊಡ್ಡ ಯಶಸ್ಸು ಸಾಧಿಸಿದ್ದು, 500 ಮಂದಿ ಬಡಮಕ್ಕಳ ಹೊಟ್ಟೆ ತುಂಬಿಸುತ್ತಿದೆ. ಇದರಲ್ಲಿ ನಾಗರಿಕರು ಸ್ವಯಂಪ್ರೇರಣೆಯಿಂದ ಆಹಾರವನ್ನು ಠೇವಣಿ ಇಡಲು ಹಾಗೂ ಬಡವರು ತೆಗೆಯಲು ಅವಕಾಶ ಇರುತ್ತದೆ. ಈ ಬ್ಯಾಂಕಿನ ಸದಸ್ಯತ್ವ ಪಡೆದವರಿಗೆ ನಿರ್ಧಿಷ್ಟ ಸಂಕೇತವನ್ನು ನೀಡಲಾಗುತ್ತದೆ. ಅವರು ಆ ಬಳಿಕ ಕನಿಷ್ಠ ಎರಡು ರೋಟಿ ಹಾಗೂ ಸಸ್ಯಾಹಾರಿ ಅಥವಾ ಮಾಂಸಾಹಾರಿ ಪದಾರ್ಥ ನೀಡಲಾಗುತ್ತದೆ. ಇದೀಗ ಸದಸ್ಯತ್ವ ವ್ಯಾಪಕವಾಗಿರುವುದರಿಂದ ಆರು ಟನ್ ಸಾಮಥ್ರ್ಯದ ಮೂರು ಫ್ರಿಡ್ಜ್ ಖರೀದಿಸಲಾಗಿದೆ ಎಂದು ಯೂಸಫ್ ಹೇಳುತ್ತಾರೆ.
ಹೀಗೆ ಆಹಾರ ಪಡೆಯಲು ಬರುವವರಿಗೆ ಒಳ್ಳೆಯ ಬಟ್ಟೆ ಇಲ್ಲದಿರುವುದನ್ನು ಮನಗಂಡು, ಕಪ್ಡಾ ಬ್ಯಾಂಕ್ ಆರಂಭಿಸಿದರು. ಒಬ್ಬರಲ್ಲಿ 25 ಜತೆ ಬಟ್ಟೆ ಇದ್ದರೆ, ಕನಿಷ್ಠ ಎರಡು ಜತೆಯನ್ನಾದರೂ ಬಳಸುವುದಿಲ್ಲ. ಅವುಗಳನ್ನು ಬ್ಯಾಂಕ್ ಗೆ ದಾನ ಮಾಡುವಂತೆ ಮನವಿ ಮಾಡಿದೆವು, 2015ರಲ್ಲಿ ಯೋಜನೆ ಆರಂಭಿಸಿದ್ದು, ಹಲವು ಮಂದಿಗೆ ಬಟ್ಟೆ ವಿತರಿಸಿದೆ. ಈ ವರ್ಷ 25 ಸಾವಿರ ಮಂದಿಗೆ ವಿತರಿಸುವ ಗುರಿ ಹೊಂದಿದೆ. ಬಳಿಕ ಆರಂಭಿಸಿದ ಪಾನಿ ಬ್ಯಾಂಕ್ ನಿಂದ ಪ್ರತಿದಿನ 4000 ಮಂದಿಗೆ ತಲಾ ಒಂದು ಲೀಟರ್ ಬಾಟಲಿ ನೀರು ವಿತರಿಸಲಾಗುತ್ತಿದೆ.
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X