Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. *ಜೆಡಿಎಸ್ ತಾನೇ ನಾಶವಾಗುತ್ತದೆ.

*ಜೆಡಿಎಸ್ ತಾನೇ ನಾಶವಾಗುತ್ತದೆ.

ವಾರ್ತಾಭಾರತಿವಾರ್ತಾಭಾರತಿ12 Jun 2016 11:07 PM IST
share
*ಜೆಡಿಎಸ್ ತಾನೇ ನಾಶವಾಗುತ್ತದೆ.

 *ಜೆಡಿಎಸ್ ತಾನೇ ನಾಶವಾಗುತ್ತದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

  ಕಾಂಗ್ರೆಸ್‌ನ ನಾಶದ ಹೊಣೆ ಯಾರಿಗೆ ಕೊಟ್ಟಿದ್ದೀರಿ?

---------------------

  ರಾಜ್ಯಸಭಾ ಚುನಾವಣೆಗೆ ಶಾಸಕರು ಹಣ ಪಡೆದಿದ್ದಾರೆ ಎನ್ನಲು ಯಾವ ಆಧಾರಗಳೂ ಇಲ್ಲ.

-ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ

 ಆಧಾರಗಳಿಲ್ಲದ ಹಾಗೆ ಹಣ ವಿನಿಮಯವಾಗಿದೆಯೆಂದಾಯಿತು.

---------------------

  ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ನನ್ನ ಹೀರೋ.

-ಉಮಾಭಾರತಿ, ಕೇಂದ್ರ ಸಚಿವೆ

  ನೀವು ಹೀರೋಯಿನ್ ಆದರೆ, ಸೆನ್ಸಾರ್‌ಗೆ ಕತ್ತರಿಯ ಆವಶ್ಯಕತೆಯೇ ಇಲ್ಲ ಬಿಡಿ.

 ---------------------

  ಸುಸ್ತಿದಾರರನ್ನು ಸುಖವಾಗಿ ನಿದ್ದೆಮಾಡಲು ಬಿಡುವುದಿಲ್ಲ.

-ಅರುಣ್‌ಜೇಟ್ಲಿ, ಕೇಂದ್ರ ಸಚಿವ

  ಅದಕ್ಕೆ ಮೊದಲು ತಾವು ನಿದ್ದೆಯಿಂದ ಎಚ್ಚೆತ್ತುಕೊಳ್ಳಿ.

---------------------

  ಕಾಂಗ್ರೆಸ್ ಪಕ್ಷಕ್ಕೆ ತಾಜಾ ಐಡಿಯಾಗಳು ಬೇಕು

-ದಿಗ್ವಿಜಯ್‌ಸಿಂಗ್, ಕಾಂಗ್ರೆಸ್ ನಾಯಕ

  ರಾಹುಲ್ ಗಾಂಧಿಯ ಐಡಿಯಾಗಳು ಕೊಳೆತಿವೆ ಎಂದು ಅರ್ಥವೇ?

---------------------

  ದಿನದ 18-20 ಗಂಟೆಗಳ ಕಾಲ ಮೋದಿ ಕೆಲಸ ಮಾಡುತ್ತಿದ್ದಾರೆ.

-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

  ದೇಶವನ್ನು ಸರ್ವನಾಶ ಮಾಡುವ ಹಟದಲ್ಲಿ ಮಾಡುತ್ತಿರುವ ಕೆಲಸ.

---------------------

  ಪರಿಸರವನ್ನು ತಾಯಿಯಂತೆ ಕಾಣಬೇಕು.

-ವಜೂಭಾಯಿ ವಾಲಾ, ರಾಜ್ಯಪಾಲ
  
ತಾಯಂದಿರೆಲ್ಲ ಈಗ ವೃದ್ಧಾಶ್ರಮ ಸೇರುತ್ತಿರುವುದು ಅಧಿಕವಾಗುತ್ತಿದೆ. 

---------------------

  ರಾಹುಲ್‌ಗಾಂಧಿ ಕಾನೂನುಬದ್ಧವಾಗಿ ಕಾಂಗ್ರೆಸ್ ಅಧ್ಯಕ್ಷರಾಗಲಿ.

-ಜೈರಾಮ್ ರಮೇಶ್, ಕಾಂಗ್ರೆಸ್ ಮುಖಂಡ

  ಕಾನೂನು ಬದ್ಧವಾಗಿ ಕಾಂಗ್ರೆಸ್‌ನ್ನು ಮುಗಿಸುವ ಯೋಜನೆಯೇ?

---------------------

  ರಾಜ್ಯಸಭೆ ಚುನಾವಣೆಯಲ್ಲಿ ಸೋತರೆ ಜೆಡಿಎಸ್ ಮುಳುಗುವುದಿಲ್ಲ.

-ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಅಧ್ಯಕ್ಷ

  ಬಹುಶಃ ಹೆಣದಂತೆ ತೇಲುತ್ತದೆ ಎಂದು ಹೇಳುತ್ತಿದ್ದಾರೆ.

---------------------

  ಹಿಂದೂಗಳಿಗೆ ಅನ್ಯಾಯವಾದರೆ ಸಹಿಸಲಾರೆವು.

-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ

  ದಲಿತರಿಗೆ ದೇವಸ್ಥಾನದಲ್ಲಿ ಪ್ರವೇಶ ನಿರಾಕರಣೆ ಹಿಂದೂಗಳಿಗಾದ ಅನ್ಯಾಯವಲ್ಲವೇ?

---------------------

  ನನ್ನ ರಕ್ತದ ಕಣದಲ್ಲೂ ಕಾಂಗ್ರೆಸ್ ಇದೆ.

-ಸತ್ಯ ವ್ರತ ಚತುರ್ವೇದಿ, ಕಾಂಗ್ರೆಸ್ ಸಂಸದ
  
ಬಹುಶಃ ನಿಮ್ಮ ರಕ್ತದ ಗುಂಪು ಕಾಂಗ್ರೆಸ್ ಬಿ ನೆಗೆಟಿವ್ ಇರಬೇಕು. 

---------------------

  ಖರ್ಗೆ ಹಾಗೂ ಸಿದ್ದರಾಮಯ್ಯ ನನಗೆ ಎರಡು ಕಣ್ಣುಗಳಿದ್ದಂತೆ. ಯಾವ ಕಣ್ಣಿಗೆ ತಿವಿದರೂ ನೋವಾಗುತ್ತದೆ.

-ಶಿವರಾಜ ತಂಗಡಗಿ, ಸಚಿವ

  ನಿಮ್ಮ ಮೆದುಳು ಎಂದು ಯಾರನ್ನು ಕರೆಯಬೇಕು?

---------------------

  ಶಾಸಕರನ್ನು ಹೈಜಾಕ್ ಮಾಡಿಕೊಂಡು ಹೋಗಲು ಅವರೇನು ಚಿಕ್ಕಮಕ್ಕಳಲ್ಲ.

-ಮಂಜು, ಸಚಿವ
  
ಚಿಕ್ಕಮಕ್ಕಳ ಪಾವಿತ್ರತೆಗೆ ಕಳಂಕ ತರಬೇಡಿ. 

---------------------

  2018ಕ್ಕೆ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮೆಲ್ಲರ ಗುರಿ.

-ವಿ. ಸೋಮಣ್ಣ, ಮಾಜಿ ಸಚಿವ

  ಪ್ರತೀ ಬಾರಿ ಬಲಿಕೊಡಲು ನಿಮಗೆ ಯಡಿಯೂರಪ್ಪರೇ ಯಾಕೆ ಬೇಕು?

---------------------
                                           
ಬ್ರಿಟಿಷ್ ಆಡಳಿತದಿಂದಾಗಿ ದೇಶದಲ್ಲಿ ಒಗ್ಗಟ್ಟು ಬೆಳೆಯಿತು ಎಂಬುದರಲ್ಲಿ ಅರ್ಥವಿಲ್ಲ.

 -ಎಸ್.ಎಲ್. ಭೈರಪ್ಪ, ಸಾಹಿತಿ

  ಬ್ರಾಹ್ಮಣರ ಜಾತೀಯತೆಯಿಂದ ಒಗ್ಗಟ್ಟು ಬೆಳೆಯಿತು ಎನ್ನುವುದು ನಿಮಗೆ ಅರ್ಥಗರ್ಭಿತವಿರಬೇಕು. 

---------------------

  ವನ್ಯಜೀವಿ ಸಂರಕ್ಷಣೆ ನಮ್ಮ ಮುಖ್ಯ ಗುರಿ.

-ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ
 
ಮನುಷ್ಯಜೀವಿಗಳ ಸಂಭಕ್ಷಣೆಯೂ ಕೂಡ.

 ---------------------

  ನಾವು ಆರ್ಥಿಕವಾಗಿ ಸಬಲರಿದ್ದೇವೆ ಎಂದು ಭರವಸೆ ನೀಡುವ ಸಲುವಾಗಿಯೇ ಹಸಿರು ನ್ಯಾಯಾಧಿಕರಣಕ್ಕೆ ಪೂರ್ಣ ದಂಡ ಪಾವತಿಸಿದ್ದೇವೆ.

-ಜೈದೀಪ್‌ನಾಥ್, ಆರ್ಟ್ ಆಫ್ ಲಿವಿಂಗ್

ಜನರ ದುಡ್ಡು, ಎಲ್ಲಮ್ಮನ ಜಾತ್ರೆ. 

---------------------

  ಜಗತ್ತಿನಲ್ಲಿ ಎಲ್ಲಿಯವರೆಗೆ ಜನರ ರಕ್ತ ಕೆಂಪಾಗಿರುತ್ತದೋ ಅಲ್ಲಿಯವರೆಗೆ ಕಮ್ಯುನಿಸ್ಟ್ ಪಕ್ಷ ಇರುತ್ತದೆ.

-ಸೀತಾರಾಂ ಯಚೂರಿ, ಕಮ್ಯುನಿಸ್ಟ್ ಪಕ್ಷದ ಪ್ರ. ಕಾರ್ಯದರ್ಶಿ
  
ಇತ್ತೀಚೆಗೆ ಕಮ್ಯುನಿಸ್ಟ್ಟ್ ರಕ್ತದಲ್ಲಿ ಬಿಳಿ ರಕ್ತಕಣಗಳು ಜಾಸ್ತಿಯಾಗಿದೆಯಂತೆ.

 ---------------------

  ನಾವು ಮಾತನಾಡುವ ಪ್ರಧಾನಿಯನ್ನು ದೇಶಕ್ಕೆ ಕೊಟ್ಟಿದ್ದೇವೆ.

-ಅಮಿತ್ ಶಾ, ಬಿಜೆಪಿ ಅಧ್ಯಕ್ಷ
  
ಅವರ ಭಾಷಣವನ್ನೇ ಜನರು ಬೇಯಿಸಿ ಅನ್ನ ಮಾಡಿಕೊಳ್ಳಬೇಕಾಗಿದೆ. 

---------------------

  ರಾಜ್ಯಸಭೆ ಹಾಗೂ ವಿಧಾನಪರಿಷತ್‌ಗೆ ನಡೆಯುತ್ತಿರುವುದು ಕುದುರೆ ವ್ಯಾಪಾರವಲ್ಲ. ಕತ್ತೆ ವ್ಯಾಪಾರ.

-ದೇವೇಗೌಡ, ಮಾಜಿ ಪ್ರಧಾನಿ

  ಹೌದು. ಕತ್ತೆಗಳನ್ನೇ ನೀವು ಕುದುರೆಯೆಂದು ಮಾರಲು ಹೊರಟರೆ ಇನ್ನೇನಾಗುತ್ತದೆ?

---------------------

  ವಿಶ್ವ ಯೋಗ ದಿನದಂದು ಸೂರ್ಯ ನಮಸ್ಕಾರ ಇಲ್ಲ.

-ಶೀಪಾದ್ ನಾಯ್ಕ, ಕೇಂದ್ರ ಸಚಿವ

  ವಿಶ್ವ ಯೋಗದ ಹೆಸರಲ್ಲಿ ತೆರಿಗೆ ಹಾಕುವ ಹುನ್ನಾರವೇನಾದರೂ ಇದೆಯೇ?

---------------------
  
ರಾಹುಲ್ ಗಾಂಧಿ ಬಳಿ ಅನುಭವದ ನಿಧಿಯಿದೆ. 

-ವೀರಪ್ಪ ಮೊಯ್ಲಿ, ಕಾಂಗ್ರೆಸ್ ನಾಯಕ

  ಅದು ನಿಧಿಯಲ್ಲ, ಕಾಂಗ್ರೆಸ್‌ನ ದುರ್ವಿಧಿ.

---------------------

  ಅಶಿಕ್ಷಿತರಿಗಿಂತಲೂ ಶಿಕ್ಷಿತರಿಂದಲೇ ಸಮಾಜ ಹಾಳಾಗುತ್ತಿದೆ.

-ಕಿಮ್ಮನೆ ರತ್ನಾಕರ, ಶಿಕ್ಷಣ ಸಚಿವ

 ಅದಕ್ಕಾಗಿಯೇ ಬಡವರಿಗೆ ಶಿಕ್ಷಣ ಕೈಗೆಡುಕದಂತೆ ಮಾಡುವ ಪ್ರಯತ್ನ ನಡೆಯುತ್ತಿದೆಯೇ?

---------------------

   ಮುಖ್ಯಮಂತ್ರಿ ಸ್ಥಾನಕ್ಕೆ ಉತ್ತರಪ್ರದೇಶದಲ್ಲಿ ನಾಯಕರ ಕೊರತೆ ಇಲ್ಲ.

-ರಾಜನಾಥ ಸಿಂಗ್, ಕೇಂದ್ರ ಸಚಿವ

  ಮತದಾರರ ಕೊರತೆಯ ಬಗ್ಗೆ ಮೊದಲು ಯೋಚಿಸಿ.

---------------------

    ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ನೀಡುವ ಸಾಲವನ್ನು ಶೂಲ ಎಂದು ಭಾವಿಸಬೇಡಿ.

-ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ

  ಸಾಲಕ್ಕೆ ವಿಧಿಸುವ ಅಕ್ರಮ ಬಡ್ಡಿಯನ್ನು ಇನ್ನೇನೆಂದು ಕರೆಯಬಹುದು?

---------------------

share
ವಾರ್ತಾಭಾರತಿ
ವಾರ್ತಾಭಾರತಿ
Next Story
X