ಮೇವು ಹಗರಣ: ಲಾಲೂ ಪ್ರಸಾದ್ ಸಿಬಿಐ ಕೋರ್ಟ್ಗೆ ಹಾಜರು
![ಮೇವು ಹಗರಣ: ಲಾಲೂ ಪ್ರಸಾದ್ ಸಿಬಿಐ ಕೋರ್ಟ್ಗೆ ಹಾಜರು ಮೇವು ಹಗರಣ: ಲಾಲೂ ಪ್ರಸಾದ್ ಸಿಬಿಐ ಕೋರ್ಟ್ಗೆ ಹಾಜರು](https://www.varthabharati.in/sites/default/files/images/articles/2016/06/13/lalu.jpg)
ರಾಂಚಿ, ಜೂ.13: ಬಹುಕೋಟಿ ರೂಪಾಯಿ ಮೇವು ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಆರ್ ಜೆಡಿ ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಸೋಮವಾರ ರಾಂಚಿಯಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರಾದರು.
ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಜೂನ್ 2ರಂದು ಲಾಲೂ ಪ್ರಸಾದ್ ಸೇರಿದಂತೆ 38ಮಂದಿ ಆರೋಪಿಗಳಿಗೆ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಲು ಸಮನ್ಸ್ ಜಾರಿ ಮಾಡಿತ್ತು. ನ್ಯಾಯಾಲಯಕ್ಕೆ ಹಾಜರಾಗಲು ಲಾಲೂ ಪ್ರಸಾದ್ ಅವರು ರವಿವಾರ ಸಂಜೆ ಪಾಟ್ನಾದಿಂದ ಆಗಮಿಸಿದ್ದರು.
ಅಕ್ಟೋಬರ್ 2013ರಲ್ಲಿ ಲಾಲೂ ಪ್ರಸಾದ್ ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿ ಅವರಿಗೆ ಐದು ವರ್ಷಗಳ ಜೈಲು ಸಜೆ ವಿಧಿಸಲಾಗಿತ್ತು. ಆದರೆ ಅವರು ಜಾಮೀನು ಪಡೆದು ಹೊರ ಬಂದಿದ್ದರು.
Next Story